ಶನಿವಾರ, ಮೇ 9, 2015

ನೀ ಜೊತೆಗಿದ್ದರೆ



ಗಜಲ್
-------

ಕಳೆದುಕೊಳ್ಳಬೇಕು ಈಗ ಮನದ ಭಾರ, ದುಗುಡಗಳನ್ನೆಲ್ಲ ನೀ ಜೊತೆಗಿದ್ದರೆ
ಪಡೆದುಕೊಳ್ಳಬೇಕು ಮುರಿದು ಬಿದ್ದ ಕನಸುಗಳು ನೀ ಸದಾ ಜೊತೆಗಿದ್ದರೆ

ಹೇಳದೇ ಉಳಿದಿರುವ ಮನಸಿನ ಮಾತುಗಳು ಕೇಳು ನೀ ಜೊತೆಗಿದ್ದರೆ
ಅನಾಥ ಭಾವನೆಗಳಿಗೆ ಹೇಗೆ ಬಿಟ್ಟ್ಟು ಕೊಡಲಿ ಈಗ ನೀ ಜೊತೆಗಿದ್ದರೆ

ಇಷ್ಟು ದಿನಾ ಕಳೆದು ಹೋದ ರಾತ್ರಿಗಳಿಗೆ ಬೆಳಕು ನೀಡಲು ನೀ ಜೊತೆಗಿದ್ದರೆ
ಹುಣ್ಣಿಮೆಯ ಚಂದ್ರ ಯಾಕೆ ಬೇಕಿತ್ತು ನಮ್ಮಿಬ್ಬರ ಮಿಲನಕ್ಕೆ ನೀ ಜೊತೆಗಿದ್ದರೆ

ಬಿಟ್ಟು ಬಿಡು ನಾಚಿಕೆ, ದುಃಖ ದುಮ್ಮಾನ ಮರೆಯಬೇಕು ನೀ ಜೊತೆಗಿದ್ದರೆ
ಮಧು ಬಟ್ಟಲಲ್ಲಿ ಕಳೆದ ಬದುಕಿನ ಸತ್ಯ! ಅರಿಯಬೇಕು ನೀ ಜೊತೆಗಿದ್ದರೆ

ಹರಿದು ಹೋದ ಕೌದಿಯಲ್ಲೂ ಚಿತ್ತಾರ ಕಾಣಬೇಕು ನೀ ಜೊತೆಗಿದ್ದರೆ
ಕೊಚ್ಚಿಕೊಂಡು ಹೋದ ಆಸೆ-ನಿರಾಸೆಗಳು ದಡ ಸೇರಬೇಕು ನೀ ಜೊತೆಗಿದ್ದರೆ

ಹೇಳಿ ಬಿಡು ನಿನ್ನೆದೆಯ ತಳಮಳ ‘ವೀರ’ ಎಂದರೆ ಹೇಗೆ ಹೇಳಲಿ ನೀ ಜೊತೆಗಿದ್ದರೆ
ಬರೆಯದ ಭಾವನೆಗಳು ಉಳಿದುಕೊಂಡಿವೆ ಒಣಗಿದ ಗಂಟಲಲ್ಲಿ ನೀ ಜೊತೆಗಿದ್ದರೆ

* ವೀರಣ್ಣ ಮಂಠಾಳಕರ್

ಬುಧವಾರ, ಮೇ 21, 2014

ಕಾಯುವ ದೇವರ ವರ (ಕವನ ಸಂಕಲನ)

ಕಾಯುವ ದೇವರ ವರ

(ಕವನ ಸಂಕಲನ)









ಲೇಖಕರು:

ವೀರಣ್ಣ ಮಂಠಾಳಕರ್










ಪ್ರಕಾಶಕರು
ಹುವಪ್ನೋರ್ ಪ್ರಕಾಶನ
ಮಂಠಾಳ-585419,
ತಾ: ಬಸವಕಲ್ಯಾಣ, ಜಿಲ್ಲೆ ಬೀದರ ಕರ್ನಾಟಕ(ರಾಜ್ಯ)







Kayuva Devara Vara: A collection of  Poems Written by:Veeranna Manthalkar, post: Manthal-585419, Tq: Basavakalyan, Distic:Bidar,mob:No:8105783103/9019991066.Email: veermanthal@gmail.com Published by: Huvpnor Prakashana, Manthal-585419, Tq: Basavakalyan, Distic: Bidar


@ ಹಕ್ಕುಗಳು:        ಲೇಖಕರದ್ದು       

ಪುಟಗಳು:

ಪ್ರಥಮ ಮುದ್ರಣ:    2014 ನವೆಂಬರ್

ಪ್ರತಿಗಳು:        1000

ಬೆಲೆ:        50/. (ಐವತ್ತು ರುಪಾಯಿಗಳು) 

ಅಕ್ಷರ ಜೋಡಣೆ:      (ಸುಮೀತ ಕಂಪ್ಯೂಟರ್)

ಮುಖಪುಟ ವಿನ್ಯಾಸ:    

ಮುದ್ರಣ:        













ಅರ್ಪಣೆ

ಮಲಗಿಕೊಂಡ ವಿಚಾರ ಭಾವನೆಗಳಿಗೆ
ಮತ್ತೆ ಮತ್ತೆ ಬಡಿದ್ದೆಬ್ಬಿಸಿ, ಎಚ್ಚರಿಸಿ
ಕವಿ ಮನಸ್ಸಿನ ಕಲ್ಪನೆಗಳಿಗೆ
ಜಾಗೃತಗೊಳಿಸಿ
ಪ್ರೋತ್ಸಾಹಿಸುತ್ತಿರುವ
ಒಲವನ್ನು ತುಂಬಿದ
ಯುವ ಕನಸುಗಳ ಸ್ನೇಹಿತ/
ಸ್ನೇಹಿತೆಯರನ್ನು
ಹೇಗೆ ಮರೆಯಲಿ?
ಮರೆಯಲಾಗದಂಥ
ನೆನಪಾಗಿ ಉಳಿದಿರಲು
ಅವಳು...?
ಬತ್ತಿ ಹೋದ ಭಾವನೆಗಳಿಗೆ
ಮತ್ತೆ ನೀರೆರೆದು
ಮತ್ತೊಂದು ಕಾವ್ಯದ
ಕೂಸಿಗೆ ಜನ್ಮ ಕೊಡುವಂತೆ
ಉತ್ತೇಜಿಸಿದವಳ
ಕಾವ್ಯಧಾರೆ ಚಿಂತನೆಯ
ಅಭಿಮಾನಕ್ಕೆ
ಈ ಕೃತಿ ಅರ್ಪಣೆ.

ವೀರಣ್ಣ ಮಂಠಾಳಕರ್












ಪರಿವಿಡಿ

ಅರ್ಪಣೆ
ಲೇಖಕರ ನುಡಿ
ಮುನ್ನುಡಿ
ಲೇಖಕರ ಪರಿಚಯ
1.    ಪ್ರೀತಿಯೆಂಬ ಗೂಡಿಗೆ ಮರಳಿ ಬಾರದೇ
2.    ಹಾಡಿದ್ದೇ ಹಾಡು ಕಿಸ್ಸ್‍ಬಾಯಿದಾಸ
3.    ನಿರೀಕ್ಷೆ
4.    ಮಗುವಿನಲ್ಲಿ ನಗುವರಳಲಿ
5.    ಕಾಡುವ ನೆನಪು
6.    ಮುಖವಾಡಗಳ ಸಂಗದಲ್ಲಿ
7.    ವೀರ ಪುರುಷ ಮಲ್ಲಿಕಾರ್ಜುನ
8.    ಕನಸಿನರಮನೆಯಲ್ಲಿ...
9.    ಕನಕದಾಸ
10.    ನೀ ತೊಡುವ ಬಳೆಗಳ ಕೈ
11.    ಕಾಯುವ ದೇವರ ವರ
12.    ಕಾಣದ ದೇವರ ಪ್ರತಿರೂಪ
13.    ಮರಿಯಂದ್ರ ಹ್ಯಾಂಗ್ ಮರೆಯಲಿ
14.    ನೀನೆಂದರೆ
15.    ಪ್ರೀತಿಯೊಂದೇ ನೆಪ ಮಾಡಿ
16.    ಬಾನ ಚೆಂದಿರನ ವೇದನೆ
17.    .ಹುಡುಕಾಟ
18.    ಭರವಸೆಗಳೆಂಬ ಭಾವನೆ
19.    ನಂಬಿಕೆ-ಪ್ರೀತಿ
20.    ಸಾರ್ಥಕ ಬದುಕಿನ ಜೀವನ
21.    ಕಳೆದು ಹೋಗುವತನಕ
22.    ಪ್ರೇರಣೆ
23.    ನೀನಿಲ್ಲದೇ ಹೋಗಿದ್ದರೆ
24.    ಜಗವೆಲ್ಲ ಮಲಗಿರಲು
25.    ಮರುಜನ್ಮ ಪ್ರೀತಿಗೆ
26.    ಪ್ರೀತಿಯ ಬೆಲೆ ಗೊತ್ತಿಲ್ಲ
27.    ಅವಳು-ಇವಳು
28.    ಅಂತರಾಳದ ಗಾಯ!
29.    ನೀನಿಲ್ಲದೇ ಹೋಗಿದ್ದರೆ
30.    ಜಗವೆಲ್ಲ ಮಲಗಿರಲು

ಇಪ್ಪತ್ತೆರಡು ಹನಿಗವನಗಳು

1.    ವಿಪರ್ಯಾಸ
2.    ನೆನಪುಗಳು
3.    ಹಾಳೆಗಳು
4.    ಪ್ರತಿಮೆಗಳು
5.    ಮೆರವಣಿಗೆ
6.    ಮೌನ ವಿಷಾದ
7.    ಕಾವ್ಯ
8.    ಗುರಿ
9.    ಸ್ಫೂರ್ತಿ
10.    ಹೇಗಿರಲಿ
11.    ಸ್ವತಾಂತ್ರ್ಯ
12.    ಗಾಂಧಿ
13.    ಅರೆ ಬೆತ್ತಲೆ
14.    ಚಿತ್ತ
15.    ಗಾಂಧಿ
16.    ಕಾಡತಾನ
17.    ಬಿಟ್ಟು ಕೊಡಲಾಗುತ್ತಿಲ್ಲ
18.    ಪ್ರೀತಿಯ ಭಾಷೆ
19.    ಮನಸ್ಸಿನ ಭಾಷೆ
20.    ಕವಿತೆ!
21.    ನಾನಿರದಿರುವಾಗ
22.    ಅವನಿಗಿಷ್ಟವಿಲ್ಲ

ಪರಿಚಯ

ಸಂಕಲ್ಪ ಸಾಧಕ ಮಂಠಾಳಕರ್

    ಬರೆಯುವ ಹುಚ್ಚು, ಓದುವ ಆಸಕ್ತಿ ಇದ್ದರೆ ಸಾಲದು. ಅದಕ್ಕೆ ತಕ್ಕಂತಹ ಕನಸು-ಆಸೆ, ಕಲ್ಪನೆಗಳು ನವಿಲಿನಂತೆ ಗರಿಬಿಚ್ಚಿ ಸದಾ ಪುಟಿದೇಳುವ ಚೆಂಡಿನಂತೆ ಗುರಿ ಮುಟ್ಟಲು ಮತ್ತೆ ಮತ್ತೆ ಪ್ರಯತ್ನಿಸಬೇಕು. ಯಾವಾಗಲೂ ಕ್ರಿಯಾಶೀಲ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರಬೇಕು. ಒಂದಿಷ್ಟು ತ್ಯಾಗ ಮನೋಭಾವನೆ, ಪರರಿಗಾಗಿ ಸ್ವಲ್ಪ ಸಮಯ ಮೀಸಲಿಟ್ಟು, ಬದುಕಿನ ಜಂಜಾಟವನ್ನು ಬದಿಗೆ ಸರಿಸಿ ಈ ಸಮಾಜಕ್ಕಾಗಿ ನನ್ನಿಂದ ಏನಾದರೂ ಕೊಡಬೇಕು ಎಂಬ ಮನೋಭಾವ ಹೊಂದಿದವನ ದಾರಿಗೆ ಅಡ್ಡವಾಗಿ ಬಡತನ, ಶೋಷಣೆ, ಅಪಮಾನ, ನಿಂದನೆ ಏನೆಲ್ಲಾ ತೊಂದರೆಗಳು ಎದುರಾದಾಗಲೂ ಎಲ್ಲವನ್ನು ಎದುರಿಸಿ ಮುನ್ನುಗ್ಗಬೇಕೋ ಅಥವಾ ಮುಗ್ಗರಿಸಿ ನೆಲಕಚ್ಚಿ ಬೀಳಬೇಕೋ...? ಹೀಗೊಂದು ಪ್ರಶ್ನೆಯನ್ನು ಕೇಳಿದಾಕ್ಷಣ ಬಹುತೇಕರು ಹೇಳುವುದಿಷ್ಟೇ, ಅಂಥವರಿಂದ ಯಾವ ಸಾಧನೆಯನ್ನೂ ಮಾಡಲಾಗುವುದಿಲ್ಲ. ಹಾಗಂತ ಹೇಳುವವರು ಕಾಲು ಹಿಡಿದು ಜಗ್ಗುವವರು ಎಂಬುದು ನನ್ನ ವಾದ ಕೂಡ. ವಿರೋಧಗಳ ಮಧ್ಯೆಯೂ ಸತ್ತೂ ಜೀವಂತವಾಗಿ ಮತ್ತೆ ಮತ್ತೆ "ಫಿನಿಕ್ಸ್" ಹಕ್ಕಿಯಂತೆ ಮೇಲೆದ್ದು ಜೀವನವನ್ನು ಗೆಲ್ಲುತ್ತಾರೆ ಎಂಬುದು ನನ್ನ ಅಭಿಪ್ರಾಯವಾಗಿದೆ.
    ಈ ಎಲ್ಲಾ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವ ಬದುಕಿನ ಹಲವು ತೊಂದರೆ ತಾಪತ್ರಯ ಎದುರಿಸಿ, ನಮ್ಮ ನಿಮ್ಮ ನಡುವೆ ಹಲವರಿದ್ದಾರೆ ಎಂದರೆ  ಆಶ್ಚರ್ಯವಾಗಬಹುದು. ಅವರಲ್ಲಿ ಒಬ್ಬರಾದ ಹೈದ್ರಾಬಾದ ಕರ್ನಾಟಕದ ಪ್ರತಿಭಾವಂತ ಕವಿ, ಲೇಖಕ, ಕತೆಗಾರ, ಸಾಹಿತಿಯಾಗಿ ಅವರು ಗುರುತಿಸಿಕೊಳ್ಳುವ ಬೀದರ್ ಜಿಲ್ಲೆಯ ಯುವ ಬರಹಗಾರರ ಸಾಲಿನಲ್ಲಿ ಪ್ರಮುಖವಾಗಿ ಎದ್ದು ಕಾಣುವ ಹೆಸರು ವೀರಣ್ಣ ಮಂಠಾಳಕರ್ ಅವರು. ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ವೈಜಿನಾಥ ಮತ್ತು ಶರಣಮ್ಮ ಹುವಪ್ನೋರ್ ದಂಪತಿಯ ಮೂರನೇ ಪುತ್ರರಾಗಿ ಜನಿಸಿರುವ ಇವರ ಹುಟ್ಟೂರು ಮಾತ್ರ ಅಜ್ಜಿಯ ಮನೆ ಭಾಲ್ಕಿ ತಾಲೂಕಿನ ಕೇಸರ ಜವಳಗಾ. ತಂದೆ ತಾಯಿಯ ಮುದ್ದಿನ ಮಗನಾಗಿ 01-06-1975 ಜನಿಸಿದರು. ಮಂಠಾಳ ಗ್ರಾಮದಲ್ಲಿಯೇ ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ ಮುಂದೆ ಬೀದರದ ಕರ್ನಾಟಕ ಕಾಲೇಜಿನಲ್ಲಿ ಓದಿದರು. ದಶಕದ ಹಿಂದೆ ಅಪ್ಪ ತೀರಿ ಹೋದ ಮೇಲೆ ಬದುಕಿನ ಬೆನ್ನೇರಿ ಹೊಟ್ಟೆ ಬಟ್ಟೆಯ ಚಿಂತೆಗಾಗಿ ಹಲವು ಪಟ್ಟಣಗಳಿಗೆ ವಲಸೆ ಹೋದರು.
ವೀರಣ್ಣ ಮಂಠಾಳಕರ್ ಹೋದಲೆಲ್ಲಾ ಸಾಹಿತ್ಯದ ಚಿಂತನೆ ಮಾತ್ರ ಜೊತೆಯಾಗಿಯೇ ಕರೆದೊಯ್ಯುತಿದ್ದರು. ದೂರದ ಎಲ್ಲಿಂದಲೋ ಬರೆದು ಪತ್ರಿಕೆಗಳಿಗೆ ಕತೆ, ಕವನ ಕಳುಹಿಸಿದಾಗ ಅವು ಪ್ರಕಟವಾಗುತ್ತಿದ್ದವು. ವೀರಣ್ಣನವರು ಆದರ್ಶದ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಬರೆಯುವ ಬರಹಗಾರ ಎಂದರೆ ತಪ್ಪಾಗಲಾರದು. ಆ ಕಾರಣಕ್ಕಾಗಿ ಇವರು ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ 2010 ರಲ್ಲಿ ಪ್ರಕಟಿಸಿದಾಗ ನವೆಂಬರ್ 10,2010 ರಲ್ಲಿ ಕನ್ನಡಪ್ರಭ ಪತ್ರಿಕೆಯ ಅಕ್ಷರ ತೋರಣದಲ್ಲಿ ಮತ್ತು ಮಾನಸ ಮತ್ತಿತರೆ ಪತ್ರಿಕೆಗಳಲ್ಲಿ ಕೃತಿ ವಿಮರ್ಶೆಗೊಳಪಟ್ಟಿತ್ತು. ಉತ್ತಮ ಬರಹಗಾರರಾಗಿ ಬೆಳೆಯುತ್ತಿರುವುದಕ್ಕೆ ಎಲ್ಲಾ ಲಕ್ಷಣಗಳು ಇವರಲ್ಲಿವೆ ಎನ್ನಲು ಇವರ ಸ್ವರಚಿತ ಬರಹಗಳೆ ಸಾಕ್ಷಿಯಾಗುತ್ತವೆ.
2002 ರಲ್ಲಿ ಗುಲ್ಬರ್ಗಾದ ಉದಯೋನ್ಮುಖ ಯುವ ಬರಹಗಾರರ ಬಳಗದ ತಾಲೂಕಾ ಸಂಚಾಲಕರಾಗಿ ಸಾಹಿತ್ಯ ಸೇವೆಗೆ ನಿಂತರು. ವೇದಿಕೆಯಡಿ ತಾನು ಬೆಳೆಯುದಕ್ಕಿಂತ ಹೆಚ್ಚು ಅನೇಕ ಯುವ ಸಾಹಿತಿಗಳನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅದೇಷ್ಟೋ ಜನ ಇವರಿಂದ ಸಲಹೆ ಪಡೆದು, ಎಂದೂ ಯಾವ ಪತ್ರಿಕೆಯಲ್ಲಿ ಕೂಡ ಗುರುತಿಸಿಕೊಳ್ಳದ ಲೇಖಕರನ್ನು ಮಾರ್ಗದರ್ಶನ ಮಾಡಿದ ಶ್ರೇಯಸ್ಸು ಇವರದ್ದಾಗಿದೆ. ಮಂಠಾಳಕರ್ ಮಾಡಿರುವ ಉಪಕಾರಕ್ಕೆ ಹಲವರು ನೆನೆಯದಿರುವರೇ ಹೆಚ್ಚು. ಕಾರಣ ವೀರಣ್ಣನವರ ಒಡನಾಡಿಗಳೆಲ್ಲ ಆರ್ಥಿಕ ಸ್ಥಿತಿಗತಿಯಿಂದ ಸುಸ್ಥಿತಿಯಲ್ಲಿದ್ದರೆ, ಇವರಿಗೆ ಆರ್ಥಿಕ ಮುಗ್ಗಟ್ಟು, ಬಡತನವೇ ಇವರಲ್ಲಿರುವ ಪ್ರತಿಭೆಗೆ ನುಂಗಿ ಬಿಡುವಂತಿತ್ತು.
ಇದರಿಂದ ವೀರಣ್ಣನವರು ಅದೇಷ್ಟೇ ಗಟ್ಟಿ ಬರಹಗಳನ್ನು ಬರೆಯುವ ಸಾಮಥ್ರ್ಯ ಹೊಂದಿದ್ದರೂ ಇವರ ಸಾಹಿತ್ಯಾಸಕ್ತಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ. ಯಾರದೇ ಸಹಕಾರ, ಪ್ರೋತ್ಸಾಹವಿಲ್ಲದೇ ಬೆಳೆಯುತ್ತ ಸಾಗುತಿದ್ದಾರೆ. ಹೆದರದೇ ಏಕಾಂಗಿಯಾಗಿ ಕನಸುಗಳನ್ನು ಹೊತ್ತೊಕೊಂಡು 2002ರಲ್ಲಿ ಭಾವಾಂತರಂಗ (ಚುಟುಕು ಸಂಕಲನ), 2003ರಲ್ಲಿ ಹನಿಜೇನು (ಸಂಪಾದನೆ), 2006ರಲ್ಲಿ ಸುಳಿಗಳು (ಕವನ ಸಂಕಲನ) ಮತ್ತು 2010ರಲ್ಲಿ ಗಾಂಧಿ ಆಗ್ಬೇಕಂದುಕೊಂಡಾಗ (ಕವನ ಸಂಕಲನ) ಗಳು ಹೊರತಂದು ಪ್ರಕಟಿಸಿದರು. ಬದುಕಿನ ಬೆನ್ನೇರಿ ಕಥಾ ಸಂಕಲನ ಪ್ರಕಟಣೆಯ ಹಂತದಲ್ಲಿದ್ದು, ಪ್ರತಿಭಾವಂತರ ಪುಟಗಳು (ಲೇಖನಗಳ ಸಂಕಲನ) ಮುತ್ತಿನ ಖಜಾನೆ (ಚುಟುಕು ಸಂಕಲನ) ಜೇನುಗೂಡು (ಅಂಕಣ ಬರಹಗಳು), ಹಸಿವು (ಕಾದಂಬರಿ), ಮಾಧ್ಯಮದೊಳಗಣ (ವಿವಿಧ ಲೇಖನಗಳ ಸಂಕಲನ) ಸೇರಿದಂತೆ ಇನ್ನೂ ಅನೇಕ ಕೃತಿಗಳು ಇವರ ಸಂಗ್ರಹದಲ್ಲಿ ಅಪ್ರಕಟಿತವಾಗುಳಿದಿವೆ. ಪ್ರಸ್ತುತ ‘ಕಾಯುವ ದೇವರ ವರ’ ಕವನ ಸಂಕಲನ ನಾಲ್ಕು ವಷ್ಗಳ ತರುವಾಯ ಪ್ರಕಟಿಸಲು ಮುಂದಾಗಿರುವುದು ಸ್ತುತ್ಯಾರ್ಹವಾಗಿದೆ. ಅದೇ ರೀತಿ ಸಾಹಿತ್ಯದಲ್ಲಿರುವ ಪ್ರೀತಿ, ಆಸಕ್ತಿಯಿಂದ ಇವರದ್ದೇ ಸಂಪಾದನೆಯಲ್ಲಿ 2005 ರಲ್ಲಿ ‘ಸಂಕಲ್ಪ’ ಕನ್ನಡ ಮಾಸ ಪತ್ರಿಕೆ ಪ್ರಾರಂಭಿಸಿದರು. ಪ್ರತಿಕೆ ಎರಡು ವರ್ಷ ನಡೆಸಿ ಅದರಿಂದ ಲಾಭ ಹೊಂದದೆ ಕೈ ಸುಟ್ಟುಕೊಂಡರು. ಮತ್ತೆ ಊರೂರು ಅಲೆದು ಪತ್ರಿಕೆಗಾಗಿ ಮಾಡಿದ ಸಾಲ ತೀರಿಸುವದರಲ್ಲಿ ಜೀವನ ನಡೆಸಿದರು. ಬದುಕಿಗಾಗಿ ನಡೆಸಿದ ಹೋರಾಟದ ಮಧ್ಯೆ ಸಾಹಿತ್ಯದ ಅಭಿರುಚಿ ಮಾತ್ರ ಯಾವತ್ತು ಬತ್ತಿ ಹೋಗಲಿಲ್ಲ.
ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಬರೆಯುವುದು ನಿಲ್ಲಿಸದೆ ಅವರ ಕತೆ, ಕವನ, ಲೇಖನಗಳು ರಾಜ್ಯಮಟ್ಟದ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಕರ್ಮವೀರ, ಸುಧಾ, ತರಂಗ, ವಿಜಯ ಕರ್ನಾಟಕ. ಕನ್ನಡಪ್ರಭ, ತುಷಾರ, ಮಯೂರ, ಮಾನಸ, ಪ್ರಿಯಾಂಕ, ಹೊಸತು, ಸಂಜೆವಾಣಿ ಚಂದನ, ಆದರ್ಶ ಗಂಡ ಹೆಂಡತಿ, ಇತ್ತೀಚಿನ ವಿಜಯವಾಣಿ ಹಾಗೂ ಬ್ಲಾಗ್ ಪತ್ರಿಕೆಗಳಾದ ಅವಧಿ ಮತ್ತು ವಿಶ್ವ ಕನ್ನಡಿಗ ನ್ಯೂಜ್ ಪತ್ರಿಕೆಗಳಲ್ಲಿ ಸಹ ವೀರಣ್ಣನವರ ಕಥೆ, ಲೇಖನಗಳು ಪ್ರಕಟಗೊಂಡಿರುವುದಕ್ಕೆ ಇವರಲ್ಲಿರುವ ಅಕ್ಷರ ದಾಹ ತಿಳಿದು ಬರುತ್ತದೆ. ಅಕ್ಷರ ಧ್ಯಾನ ಇವರೊಳಗೆ ಅದೇಷ್ಟರ ಮಟ್ಟಿಗೆ ಕುಳಿತಿದೆ ಎಂಬುದನ್ನು ಅರಿವಾಗುತ್ತದೆ. ಹೀಗೆ ಮೊದಲಾದ ಸ್ಥಳಿಯ ಪತ್ರಿಕೆಗಳಲ್ಲಿ ಮತ್ತು ಗುಲ್ಬರ್ಗಾ ಆಕಾಶವಾಣಿಯಲ್ಲೂ ಇವರ ಬರಹಗಳು ಪ್ರಸಾರವಾಗಿವೆ. ಅನಕೇ ಪ್ರಾತಿನಿಧಿಕ ಸಂಕಲನಗಳಲ್ಲಿ ವೀರಣ್ಣನವರ ಬರಹಗಳು ಕಾಣಸಿಗುತ್ತವೆ.
ಹಲವಾರು ಸಂಘ ಸಂಸ್ಥೆಗಳು ಏರ್ಪಡಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆ, ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಮತ್ತು ಮೆಚ್ಚುಗೆಯ ಪತ್ರಗಳನ್ನು ಪಡೆದಿರುತ್ತಾರೆ. ಹೇಳಿಕೊಳ್ಳುವಂಥ ಪ್ರಶಸ್ತಿ ಇವರಿಗಿನ್ನು ಸಿಗದಿದ್ದರೂ ಓದುಗರ ಅಪಾರ ಮೆಚ್ಚುಗೆ ಎಲ್ಲಾ ಪ್ರಶಸ್ತಿಗಿಂತ ಮೇಲಾಗಿದೆ ಎಂದು ಭಾವಿಸಿದ್ದಾರೆ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗುವ ಬರಹದಿಂದ ಸಿಗುವ ಸಂತಸ ಯಾವುದರಲ್ಲೂ ಸಿಗುವುದಿಲ್ಲ ಎಂದು ನಂಬಿದ್ದಾರೆ.
ಅದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಏರ್ಪಡಿಸಿದ್ದ 1999ರ ಶಿವಮೊಗ್ಗ ಕಾವ್ಯ ಕಮ್ಮಟ, 2002ರಲಿ ಬದಾಮಿ ಕಥಾಕಮ್ಮಟದಲ್ಲಿ ಪಾಲ್ಗೊಂಡಿದ್ದಾರೆ. 2011 ರಲ್ಲಿ ಬಸವಕಲ್ಯಾಣ ತಾಲೂಕಾಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಉತ್ತಮ ಸಾಹಿತ್ಯ ಕೃಷಿಗಾಗಿ ತಾಲೂಕಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ನೂರಕ್ಕೂ ಹೆಚ್ಚು ಕವಿಗೋಷ್ಠಿ ಹಾಗೂ ಶಿಬಿರಗಳಲ್ಲಿ ಮತ್ತು ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ.
ಕನ್ನಡದ ಹಿರಿಯ ಸಾಹಿತಿಗಳಿಂದ ಯುವ ಸಾಹಿತಿ, ಪ್ರಚಲಿತ ಪ್ರಸಿದ್ಧ ಕವಿಗಳ ಮೊದಲಾದ ಲೇಖಕರ ಬಳಗದವರೊಂದಿಗೆ ಸಂಪರ್ಕ ಹೊಂದಿದ್ದಾರೆ. ಇಷ್ಟಾದರೂ ಇವರಲ್ಲಿ ಯಾವುದೇ ಅಹಂ ಇಲ್ಲ. ಅನ್ಯಾಯ ಇವರು ಸಹಿಸಿಕೊಳ್ಳುವುದಿಲ್ಲ. ಹಾಗಂತ ಇವರ ಬೆಳವಣಿಗೆ ಸಹಿಸದ ಅನೇಕರು ಇವರ ಮೇಲೆ ಇಲ್ಲದ ಅಪವಾದ ಮಾಡುತ್ತಾರೆ ಎಂಬುದು ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಕೇಳಿ ಬರುತ್ತಿರುವ ಸಂಗತಿಯಾಗಿದೆ. ಕೆಲ ದುಷ್ಟರಿಂದ ಅವಮಾನ, ಅಪಮಾನವನ್ನುಂಡು ತೀರಾ ನೊಂದುಕೊಂಡಂತೆ ಅನ್ಯಾಯಕ್ಕೆ ಸಿಡುದೇಳುತ್ತಾರೆ. ವ್ಯರ್ಥ ಸಮಯಕ್ಕೆ ಕಿವಿಗೊಡದೇ ಅಕ್ಷರವೇ ಉಸಿರೆಂದುಕೊಂಡು ಬದುಕನ್ನು ಸಾಗಿಸುತಿದ್ದಾರೆ. ವೀರಣ್ಣ ಮುಂಗೋಪಿ, ಎಂಬ ಆರೋಪಗಳು ಅವರ ಸುತ್ತಲಿರುವ ಬೊಗಳೆ ಭಟ್ಟರು ಹೇಳುವ ಮಾತಿದು. ಬರೆಯಲು ಬಾರದವನಿಗೆ ಬರವಣಿಗೆ ಬಾರಕೋಲು ಎನ್ನುವ ಹಾಗೆ ಮಂಠಾಳಕರ್ ಬರೆಯುವದನ್ನು ಇಷ್ಟಪಡದವರು ಹೀಗೆನ್ನುತ್ತಾರೆ ಎಂದು ಇವರ ಸಮೀಪವರ್ತಿಗಳು ಉತ್ತರಿಸುತ್ತಾರೆ.
ವೀರಣ್ಣನವರು ಅನೇಕ ಬಾರಿ ಆರ್ಥಿಕ ಸಮಸ್ಯೆ ಎದುರಿಸಿದರೂ ಪುಕ್ಕಟೆ ಹಣ ಯಾರಿಗೂ ಕೇಳಲಿಲ್ಲ. ಬದಲಾಗಿ ಸಹಾಯ ಮಾಡಿದವರಿಗೆ ದುಪ್ಪಟ್ಟು ಕೆಲಸ ಮಾಡಿಕೊಟ್ಟಿದ್ದಾರೆ. ಸಾಹಿತ್ಯ ಸೇವೆಗಾಗಿ ಒಂದು ಪ್ರಕಾಶನ ಸಂಸ್ಥೆಯೂ ಹುಟ್ಟು ಹಾಕಿ ಅದರಡಿಯಲ್ಲಿ ಇವರ ಸ್ವಂತ ಕೃತಿಗಳು ಹೊರತಂದಿದ್ದಾರೆ. ನಿರಂತರವಾದ ಇವರ ಸಾಹಿತ್ಯ ಸೇವೆಯಲ್ಲಿ ಅನೇಕ ಅಂಕಣ ಬರಹಗಳು, ಕತೆಗಳು, ಕವನಗಳು ಬರೆದಿದ್ದಾರೆ. ಹಸಿವು ಎಂಬ ಕಾದಂಬರಿ ಸಹ ಬರೆದಿರುವ ವೀರಣ್ಣನವರು ಹತ್ತಾರು ಅಪ್ರಕಟಿತ ಬಿಡಿ ಬರಹಗಳನ್ನು ತಮ್ಮ ಸಂಗ್ರಹದಲ್ಲಿ ಇಟ್ಟುಕೊಂಡಿದ್ದಾರೆ. ಪ್ರಕಟಿಸಲು ಹಣಕಾಸಿನ ತೊಂದರೆಯಿಂದ ಸುಮ್ಮನಿರದೇ ಸಾಹಿತ್ಯ ಕೃಷಿ ಬತ್ತಿ ಹೋಗದ ಜಲದಂತೆ ನಿರಂತರವಾಗಿದೆ.
ಇವರಿಂದ ಇನ್ನೂ ಹತ್ತಾರು ಪುಸ್ತಕಗಳು ಹೊರ ಬರುವಷ್ಟಿದ್ದರೂ ಪ್ರಕಟಿಸುವ ಪ್ರಕಾಶಕರು ಮುಂದೆ ಬರದೇ ಇರುವುದು ಕನ್ನಡದ ಯುವ ಬರಹಗಾರರ ಪಾಲಿಗೆ ನೋವಿನ ಸಂಗತಿಯೆನ್ನುತ್ತಾರೆ. ಬೆಂಗಳೂರಿನಿಂದ ಪ್ರಕಟವಾಗುವ ದಿಕ್ಸೂಚಿ ಮಾಸ ಪತ್ರಿಕೆಯಲ್ಲಿ ಪ್ರೋಫ್ ರೀಡರ್ ಆಗಿ ಕೆಲಸ ಮಾಡಿರುವ ವೀರಣ್ಣನವರು ಗುಲ್ಬರ್ಗಾ ಜಿಲ್ಲೆಯ ಸ್ಥಳಿಯ ಪತ್ರಿಕೆಗಳಲ್ಲಿ ಸಹ ವರದಿಗಾರರಾಗಿ, ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬಸವಕಲ್ಯಾಣದಲ್ಲಿಯೇ ನೆಲೆಯೂರಿ 2010ರಿಂದ 2013ರವರೆಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಮೂರು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ತದನಂತರ ವಿಜಯ ಕರ್ನಾಟಕದ ಗ್ರಾಮೀಣ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವರ ಕುತಂತ್ರಕ್ಕೆ ಬಲಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರನ ಹುದ್ದೆ ಕೂಡ ಇವರು ಬಿಡಬೇಕಾಯಿತು. ಈ ಸಂದರ್ಭದಲ್ಲಿ ವೀರಣ್ಣನವರಿಗೆ ಕಾಡಿದ ಎಂದೂ ಮರೆಯಲಾಗದಂಥ ನೆನಪಾಗಿದೆ ಎಂದು ನೊಂದು ನುಡಿಯುತ್ತಾರೆ. ಕನ್ನಡಪ್ರಭ ಪತ್ರಿಕೆಯ ವರದಿಗಾರಿಕೆ ಬಿಟ್ಟು ವಿಜಯ ಕರ್ನಾಟಕ ಸೇರಿದ್ದಕ್ಕೆ ಸಿಕ್ಕ ಪ್ರತಿಫಲ ಸೊನ್ನೆ. ನಂತರ ಜೀವನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಸಧ್ಯಕ್ಕೆ ಜೀವನೊಪಯೋಗಕ್ಕಾಗಿ ಕಂಪ್ಯೂಟರ್ ಆಪರೇಟರ್ (ಅಕ್ಷರ ಜೋಡಣೆ) ಕಾರ್ಯ ನಿರ್ವಹಿಸುತ್ತಾ ಜಾಬ್ ವರ್ಕ್ ನಡೆಸುತಿದ್ದಾರೆ.
ಕನ್ನಡಪ್ರಭ ಪತ್ರಿಕೆಯಲ್ಲಿ ಬಸವಕಲ್ಯಾಣ ತಾಲೂಕಾ ವರದಿಗಾರರಾಗಿ ಉತ್ತಮ ಕೆಲಸ ಮಾಡುವುದನ್ನು ಸಹಿಸದ ಕೆಲವರು ಇವರ ಮೇಲೆ ಇಲ್ಲದ ದಬ್ಬಾಳಿಕೆ, ಸಂಬಂಧಪಟ್ಟ ಕನ್ನಡಪ್ರಭ ಜಿಲ್ಲಾ ವರದಿಗಾರರಿಗೆ ಇವರ ಮೇಲೆ ಆರೋಪ ಮಾಡಿ ಕೆಲಸದಿಂದ ತೆಗೆಯುವಂತೆ ಶಿಫಾರಸ್ಸು ಮಾಡಿದ್ದರು. ಆಗಲಿಲ್ಲ. ಆಗ ನೇರವಾಗಿ ಬೆಂಗಳೂರು ಪತ್ರಿಕೆ ಕಚೇರಿಯವರೊಂದಿಗೆ ಸಂಪರ್ಕ ಇಟ್ಟುಕೊಂಡು ನಿತ್ಯದ ವರದಿಗಳನ್ನು ಕಳುಹಿಸುತಿದ್ದರು. ಅದು ಅನಿವಾರ್ಯವಾಗಿತ್ತು. ಇವರು ನೇರ, ನಿಷ್ಠೂರವಾಗಿ ವರದಿ ಬರೆಯುವುದನ್ನು ಸಹಿಸದ ಅನೇಕರು ತೊಂದರೆ ನೀಡಿದರು. ಒಬ್ಬ ಬರಹಗಾರನಿಗೆ, ಅವನ ಪ್ರತಿಭೆ ಸಹಿಸಿಕೊಳ್ಳದ ಜನರ ರಾಜಕೀಯ ಇಲ್ಲಿ ನುಸುಳಿರುವುದು ಸ್ಷಷ್ಟವಾಗಿ ಗೋಚರಿಸುತ್ತದೆ.
ಹಿಂದುಳಿದ ಕುರುಬ ಸಮುದಾಯದ ವರ್ಗದಿಂದ ಬಂದಿರುವ ವೀರಣ್ಣ ಮಂಠಾಳಕರ್ ಅವರು ಬರವಣಿಗೆಯಲ್ಲಿ ನೇರ, ನಿಷ್ಠೂರವಾಗಿ ಬರೆಯುತ್ತಿರುವುದಕ್ಕೆ ದಗಲಬಾಜಿ ಜನ ಇವರಿಗೆ ಸಹಿಸಿಕೊಳ್ಳಲಿಲ್ಲ. ಹಿಂದುಳಿದ ರಾಜಕೀಯ ಜನಾಂಗದವರಿಗೂ ವೀರಣ್ಣನವರ ಬಗ್ಗೆ ತಪ್ಪು ಸಂದೇಶ, ಮಾಹಿತಿಯನ್ನು ನೀಡಿ, ವಿರಣ್ಣನವರ ಪ್ರತಿಭೆಗೆ ಕೆಸರೆರಚುವ ಕೆಲಸ ಮಾಡಿದರು. ರಾಜಕೀಯ, ಸಾಹಿತ್ಯಿಕ ವಲಯದ ಎಲ್ಲಾ ವಯೋಮಾನದವರು ಇವರನ್ನೇ ಅನುಮಾನದ ದೃಷ್ಠಿಯಿಂದ ನೋಡುವಂಥ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದರು ಎಂದರೆ ತಪ್ಪಾಗಲಾರದು. ಬಸವಕಲ್ಯಾಣ ತಾಲೂಕಿನ ಕೆಲವರ ಪೂರ್ವಯೋಜಿತ ಸಂಚು ಕೂಡ ವೀರಣ್ಣನವರನ್ನು ಬೀದಿಗೆ ತರುವುದಾಗಿತ್ತು.
ಬಸವಕಲ್ಯಾಣ ತಾಲೂಕಿನ ಸ್ಥಳೀಯ ಪತ್ರಿಕೆಯೊಂದರ ಸಂಪಾದಕನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರ ಪತ್ನಿ 2012 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ್ದರು.  ಬೀದರ ಜಿಲ್ಲೆಗೆ ಕಸಾಪ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದರು. ಅವರು ಸರ್ಕಾರಿ ಹಾಗೂ ಅರೆಸರ್ಕಾರಿ ಪ್ರತಿಷ್ಠಿತ ಸಂಘ ಸಂಸ್ಥೆಗಳ ಖಾಯಂ ಪದಾಧಿಕಾರಿ ಹಾಗೂ ಸದಸ್ಯರಾಗಿ ಇರುವುದಾಗಿ ಸುಳ್ಳು ಸುಳ್ಳು ದಾಖಲೆ ಬರೆದುಕೊಂಡಿದ್ದಕ್ಕೆ ವೀರಣ್ಣ ಮಂಠಾಳಕರ್‍ರವರು ಒಬ್ಬ ಪತ್ರಕರ್ತನಾಗಿ ‘ಸುಳ್ಳಿನ ಸರಮಾಲೆ ಪೋಣಿಸಿದ...’ ಎಂಬ ಶೀರ್ಷಿಕೆಯಡಿಯಲ್ಲಿ ವರದಿಯೊಂದನ್ನು ಬರೆದಿರುವುದನ್ನು ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದೇ ತಡ ಅದುವೇ ಇವರ ಬದುಕಿಗೆ ಮುಳುವಾಯಿತು. ಇವತ್ತಿಗೂ ಪ್ರತ್ಯಕ್ಷವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ಕಿರುಕುಳ ನೀಡುತಿದ್ದಾರೆ ಎನ್ನಬಹುದು. ಇದರಿಂದ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಹಲವರ ಕಿರುಕುಳಕ್ಕೆ ಸತ್ತು ಜೀವಂತವಾಗಿರುವ ವೀರಣ್ಣನವರು ಸಾಮಾಜಿಕ ಕೆಟ್ಟ ವ್ಯವಸ್ಥೆಯಿಂದ ತೀರಾ ಬೇಸರಿಸುತ್ತಾರೆ. ಇಡೀ ಸಮಾಜದ ಕಣ್ಣೀರೊರೆಸುವ ಮಾಧ್ಯಮ. ಮಾಧ್ಯಮದೊಳಗಿದ್ದವರ ಕಣ್ಣೀರಿಗೆ ಕರವಸ್ತ್ರ ಆಗದಿರುವುದು ಶೋಚನೀಯ ಸಂಗತಿ ಎನ್ನುತ್ತಾರೆ.
ಇವರು ತಮ್ಮದೇ ಜೀವನಗಾಥೆಯನ್ನು ವಿವರಿಸುವ, ಆತ್ಮಕಥೆಯ ರೂಪದ ‘ಸಂಕಲ್ಪ ಸಾಧಕ’ ಎಂಬ ಸಂಕಲನದಲ್ಲಿ ಇವರಿಗಾದ ನೋವು, ಹತಾಷೆ, ಶೋಷಣೆ, ಅನ್ಯಾಯ, ಅಪಮಾನದ ಬಗ್ಗೆ ದಾಖಲಿಸುವುದಾಗಿ ನುಡಿಯುತ್ತಾರೆ. ಬಾಡಿಗೆ ಜನರಿಂದ ಹೆದರಿಸುವುದು, ಹಲವರಿಂದ ಇಲ್ಲದ ಆರೋಪ ಮಾಡಿಸಿ ಸಾರ್ವಜನಿಕ ತಾಣ ಫೇಸ್‍ಬುಕ್‍ನಲ್ಲಿ ಮಂಠಾಳಕರ್ ಅವರ ಚರಿತ್ರೆ ಹರಣ ಮಾಡಲು ಯತ್ನಿಸಿರುವುದನ್ನೆಲ್ಲಾ ನೆನಪಿಸಿಕೊಳ್ಳುತ್ತಾರೆ. ಅದನ್ನೆಲ್ಲ ಹೊಸ ಕಾದಂಬರಿಯಲ್ಲಿ ಬೆತ್ತಲಾಗಿಸಿ ಅನಾವರಣ ಮಾಡುವ ಸಂಕಲ್ಪವನ್ನು ತೊಟ್ಟಿದ್ದಾರೆ.
ಅನೇಕರು ವೀರಣ್ಣನವರಿಗೆ ಶೋಷಣೆಗೊಳಪಡಿಸಿ ಮಾನಸಿಕ ಹಿಂಸೆ ನೀಡಿದರೂ, ಪತ್ರಿಕೆಯಲ್ಲಿರುವ ಆಸಕ್ತಿ ಮತ್ತು ಸಾಹಿತ್ಯದಲ್ಲಿರುವ ಕರ್ತವ್ಯ ನಿಷ್ಠೆ ಬಿಟ್ಟಿಲ್ಲ. ಆದರೆ ವೀರಣ್ಣನವರು ಕಾರ್ಯ ನಿರ್ವಹಿಸಿದ ಪತ್ರಿಕೆಯ ಜಿಲ್ಲಾ ವರದಿಗಾರರಿಂದ ಸಿಕ್ಕ ಸಹಕಾರ ಅಷ್ಟಕಷ್ಟೆ ಎಂಬುದನ್ನು ಮಾತ್ರ ವಿಷಾದಿಸುತ್ತಾರೆ. ಖೇದದ ಸಂಗತಿಯೆಂದರೆ ರಾಜ್ಯ ಪತ್ರಿಕೆಯ ತಾಲೂಕಾ ವರದಿಗಾರಾಗಿ ದಿನನಿತ್ಯ ನಾಲ್ಕಾರು ಸಾಮಾನ್ಯ ವರದಿ, ವಿಶೇಷ ವರದಿಗಳು ಬರೆದರೂ ಇವರಿಗೆ ತಿಂಗಳಿಗೆ ಸಿಗುವುದು ಕೇವಲ 1 ಸಾವಿರ. ರೂಪಾಯಿ. ಆ ದುಡ್ಡನ್ನು ಕೈಗೆಟುಕಲು ಮೂರ್ನಾಲ್ಕು ತಿಂಗಳವೇ ಬೇಕು. ಅದರಲ್ಲೇ ಇವರು ಜೀವನ ನಡೆಸುವುದಾದರೂ ಹೇಗೆ ಎಂಬುದನ್ನು ಚಿಂತಿಸಬೇಕಾದ್ದು ಅವಶ್ಯವಾಗಿದೆ.
ಇಂತಹ ಕಷ್ಟದ ಬದುಕನ್ನು ಸಂಕಷ್ಟದಲ್ಲಿ ಜೀವಿಸುವವನ ಬೆಳವಣಿಗೆ ಸಹಿಸದ ಅನೇಕರು ಪತ್ರಿಕಾ ಮುಖ್ಯಸ್ಥರಿಗೆ ವೀರಣ್ಣ ಮಂಠಾಳಕರ್ ಅವರ ಬಗ್ಗೆ ಇಲ್ಲ-ಸಲ್ಲದ ಆರೋಪಗಳು ಮಾಡಿದ್ದರು. ಹೀಗಾಗಿ ಇವರ ಜೀವನ ಇನ್ನಷ್ಟು ನರಕಕ್ಕೆ ದೂಡಿದವರಿದ್ದಾರೆ. ಬೆಂಗಳೂರಿನಿಂದ ಪ್ರಕಟವಾಗುವ ಪ್ರೇರಣ ಕನ್ನಡ ಮಾಸ ಪತ್ರಿಕೆಯಲ್ಲಿ ಸಹ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ ಪ್ರತಿಭಾವಂತ ಪತ್ರಕರ್ತ, ಸಾಹಿತಿ, ಕವಿಯಾಗಿ, ಚಿಂತಕರಾಗಿ ವೀರಣ್ಣ ಮಂಠಾಳಕರ್ ಗುರುತಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜೀವನವೆಂಬ ಏರುಪೇರಿನ ಹಾದಿಯಲ್ಲಿ ಏನೇ ತೊಂದರೆಗಳಾದರೂ ಛಲವನ್ನು ಬಿಡದೇ ಸಾಹಿತ್ಯ ರಚನೆಯಲ್ಲಿ ಒಂದಿಷ್ಟು ನೆಮ್ಮದಿ ಕಂಡುಕೊಂಡಿದ್ದೇನೆ ಎಂದು ಖುಷಿ ಪಡುತ್ತಾರೆ.
ಬರವಣಿಗೆಗೆ ಇವರು ಮೊದಲ ಆಧ್ಯತೆಯನ್ನು ನೀಡಿದ್ದಾರೆ. ಅದುವೇ ಅಧ್ಯ ಕರ್ತವೆಂದು ಭಾವಿಸಿ ಜೀವಿಸುತ್ತಿದ್ದಾರೆ. ಖಾಯಂ ಕೆಲಸವೆಂಬುದು ಇಲ್ಲದೆ ಬದುಕುತ್ತಿರುವ ವೀರಣ್ಣನವರಿಗೆ ಬರವಣಿಗೆಯಲ್ಲಿಯೇ ಏನಾದರೂ ಸಾಧಿಸಬೇಕೆಂಬ ಅಧಮ್ಯ ಆಸಕ್ತಿ, ಛಲವನ್ನು ಕಂಡು ಬರುತ್ತದೆ. ಸಾಹಿತ್ಯ ಆರಾಧಕನಾಗಿ, ಸಂಕಲ್ಪ ಸಾಧಕರಾಗಿ ವೀರಣ್ಣನವರು ಗುರಿತಿಸಿಕೊಳ್ಳುತ್ತಾರೆ.
"ತಾನು ಬೆಳೆಯಬೇಕು ತನ್ನವರನ್ನು ಬೆಳೆಸಬೇಕು" ಎನ್ನುವ ಅವರ ಗುಣ ಮೆಚ್ಚುವಂತದ್ದು. ಇವರ ಇನ್ನೊಂದು ವಿಶೇಷ ಗುಣವೆಂದರೆ ಡಂಭಾಚಾರಿ ಸಂಘ, ಸಂಸ್ಥೆಯವರಿಗೆ ಮತ್ತು ಢೋಂಗಿ ಸಾಹಿತಿಗಳಿಗೆ ತಮ್ಮ ಕವನದ ಸಾಲಿನಲ್ಲಿಯೆ ಛೀ ! ಮಾರಿ ಹಾಕುತ್ತಾರೆ. ತೋರಿಕೆಗಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಹಿಸಿ ಪ್ರಚಾರ ಪಡೆದುಕೊಳ್ಳುವವರ ವಿರುದ್ಧ ಹರಿಹಾಯುವ ಗುಣ ಅವರದು. ಅದೇನೆ ಇದ್ದರು ವೀರಣ್ಣನವರು ತಮ್ಮ ಜೀವನದಲ್ಲಿ ಹೆಚ್ಚು ನೋವನ್ನೆ ಅನುಭವಿಸಿದ್ದವರು. ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಸೋದರನ ಸಾವಿನಿಂದ ಸದಾ ದು:ಖವೇ ಉಂಡ ಕವಿ. ವೀರಣ್ಣ ಮಂಠಾಳಕರ್ ಅವರ ಸಾಹಿತ್ಯದ ತುಂಬೆಲ್ಲಾ ನೋವು, ನಿರಾಸೆ, ನಾನಾ ಘಟನೆಗಳಿಂದ ಬದುಕಿನಲ್ಲಿ ಸೋತಿರುವುದನ್ನು ಕಂಡು ಬರುತ್ತದೆ. ಒಬ್ಬ ಮಗ, ಹೆಂಡತಿ, ಪುಟ್ಟ ಮಗಳು, ವಯಸ್ಸಾದ ತಾಯಿಯೊಂದಿಗೆ ವೀರಣ್ಣ ಮಂಠಾಳಕರ್ ಅವರು ಜೀವಿಸುತಿದ್ದಾರೆ.
                              "ಜಗವೆಲ್ಲ ನಗುತಿರಲಿ
                    ಜಗದಳುವು ಎನಗಿರಲಿ" ಎನ್ನುವಂತೆ
ವೀರಣ್ಣನವರು ಕೂಡ ತಮ್ಮ ಜೀವನದಲ್ಲಿ ಹತ್ತು ಹಲವು ಮಗ್ಗುಲದಲ್ಲಿ ನೋವಿಟ್ಟುಕೊಂಡು ಇನ್ನೊಬ್ಬರ ಹಿತಕ್ಕಾಗಿ ಸಾಹಿತ್ಯ ರಚಿಸುವಲ್ಲಿ ಸಫಲರಾಗುತ್ತಿದ್ದಾರೆ. ಎನ್ನುವುದಕ್ಕೆ  ಅವರ ಇತ್ತೀಚಿನ ಸಮಗ್ರ ಸಾಹಿತ್ಯವೆ ಸಾಕ್ಷಿಯಾಗಿ ನಿಲ್ಲುತ್ತವೆ. ಅವರ ಎಲ್ಲಾ ಸಮಸ್ಯೆಗಳು ದೂರವಾಗಿ ಕನ್ನಡ ಸಾಹಿತ್ಯ ರಂಗದ ಉತ್ತುಂಗಕ್ಕೇರಿ ಉನ್ನತ ಮಟ್ಟಕ್ಕೆ ಬೆಳೆಯಲೆಂದು ಹಾರೈಸೋಣ.

ಮಚ್ಚೇಂದ್ರ ಪಿ.ಅಣಕಲ್, ಯುವ ಕಥೆಗಾರ





1.ಪ್ರೀತಿಯೆಂಬ ಗೂಡಿಗೆ ಮರಳಿ ಬಾರದೇ

ನನ್ನೆದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯೆ
ನಿನ್ನೆದೆಯ ಗೂಡಿನಲ್ಲೂ ಜೋಪಾನವಾಗಿತ್ತು
ಅಂತರವಾಗಿದ್ದ ನಮ್ಮಿಬ್ಬರ ಪ್ರೀತಿ ಅಂತರ್ಜಾಲ ತಾಣದಿಂದ
ಹತ್ತಿರವಾಯಿತಲ್ಲ ಗೆಳೆಯ...!

ಬಿಟ್ಟಿರಲಾಗದಷ್ಟು ಸಂಬಂಧ ಗಟ್ಟಿಯಾಗುತ್ತಲೇ ಸಾಗಿತ್ತು
ಒಂದಿನ ಭೇಟಿಯಾಗುವ ನೆಪದಲ್ಲಿ ಬಂದು ಹೋದೆಯಲ್ಲ
ನಲ್ಲನ ರೂಪದಲ್ಲಿ, ಆ ದಿನ ನಲ್ಮೆಯಳಾಗಿ
ನಿನ್ನ ಬಾಹು ಬಂಧನದಲ್ಲಿ ಲೀನವಾಗಿರಲು ನಾನು

ನಿನ್ನೆಲ್ಲ ಒತ್ತಡದ ಕಾರ್ಯಗಳನ್ನು ಮರೆತು
ನನ್ನ ಬಾಹು ಬಂಧನದಲ್ಲಿ ಬೆರೆತು
ಹೀರಿಬಿಟ್ಟೆಯಲ್ಲ ರಸದುಂಬಿದ ನನ್ನಿ ಮೈ
ಹಣ್ಣಿನಂತೆ, ಮತ್ತೆ ಎಸೆದುಬಿಟ್ಟೆಯಾಕೆ ಸಿಪ್ಪೆಯಂತೆ

ಎರಡು ದೇಹಗಳ ಮೈಮನ ಮುದ್ದಾಡುವಾಗ
ಅರಿವಿರಲಿಲ್ಲ ಜಗದ ಆಗು ಹೋಗುಗಳ ಬಗ್ಗೆ
ಸಂತೋಷದಿ ಮೈ ಮರೆತು ಮನದ ಭಾವನೆಗಳನ್ನೆಲ್ಲ
ಹಂಚಿಕೊಂಡು ನೆಚ್ಚಿಕೊಂಡೆಯಲ್ಲ ಪ್ರಿಯ....

ಪ್ರೀತಿಯೆಂಬ ಊಟದ ಜೊತೆಗೆ ನೂರಾರು
ಮುತ್ತುಗಳು ನನ್ನಿಂದ ಎರವಲು ಪಡೆದು
ಉಪ್ಪಿನಕಾಯಿಯಂತೆ ಬಳಸಿಕೊಂಡು
ಜೊತೆ ಜೊತೆಯಾಗಿಯೇ ಸಾಗುವ ಪಯಣಕ್ಕೆ ಭರವಸೆಯನ್ನಿತ್ತು
ಪ್ರೇಮಗೀತೆಯ ನಾದದಲ್ಲಿ ನನ್ನನ್ನು ಮರೆಸಿಬಿಟ್ಟೆಯಲ್ಲ

ಮೊದಲ ದಿನದ ಮೊದಲ ಭೇಟಿಗೆ
ನಿನ್ನದೇ ನೆನಪಿನೊಳಗಿದ್ದ ಧ್ಯಾನದಲ್ಲಿ
ಸಂಭ್ರಮಿಸಿದ ಕ್ಷಣಗಳು ನೆನಪಿದೆಯಾ ಗೆಳೆಯಾ
ಹಾರಿ ಹೋದೆಯಲ್ಲ! ಗಗನವ ಚುಂಬಿಸುತ್ತ
ಪೀತಿಯೆಂಬ ಗೂಡಿಗೆ ಮತ್ತೆ
ಮರಳಿ ಬಾರದೇ, ನಿನ್ನ ಬರುವಿಕೆಗಾಗಿ
ಕಾದು ಕುಳಿತಿದ್ದೆ ಶಬರಿಯಂತೆ, ಆದರೆ ನೀ ಬರಲೇ ಇಲ್ಲ!?

ಅಂದು 26 ನೇ ಜನವರಿ ಗಣರಾಜ್ಯೋತ್ಸವ ನಿಮಿತ್ಯ
ನಿನ್ನ ಕರ್ತವ್ಯ ಮರೆತದ್ದನ್ನು ನೆನಪಾಗಿಸುವ ನೆಪದಲ್ಲಿ
ಉನ್ನತ ಹುದ್ದೆಯಲ್ಲಿರುವ ಜವಾಬ್ದಾರಿಗೆ; ಹಾಜರಿರಲು
ನನ್ನೊಳಗೆ ಹುಟ್ಟಿಸಿದ ಆಸೆ, ಮನದ ತವಕ, ತಲ್ಲಣ
ಭಾವನೆಗಳಿಗೆ ತಣ್ಣೀರೆರಚಿ ಹೋದೆಯಾ?
ಇಂದಿಗೆ ನಮ್ಮ ನಡುವಿನ ಪ್ರೀತಿಗೆ ಮೂರು ವರ್ಷಗಳು ಕಂಡೆಯಾ!

ವಲ್ಲದ ಮನಸ್ಸಿನಿಂದಲೇ ಪ್ರೀತಿ ಅಮರವಾಗುಳಿಯಲಿ
ಎಂಬ ಹಾರೈಕೆಯಲ್ಲಿ ನಿನಗೆ ನಾ ಬೀಳ್ಕೊಟ್ಟಿದ್ದು,
ಅಂದಿನಿಂದ ಇಂದಿಗೂ ನಿನ್ನೆಡೆಗೆ ನೆಟ್ಟ ದೃಷ್ಟಿ
ಎತ್ತಲೂ ಕದಲದೇ ಹಾಗೇ ಉಳಿಯಿತು

ನನ್ನೊಳಗಿನ ಮುಗ್ಧತೆ; ನಿನ್ನಲಿರುವ ಕಪಟತನ
ತಿಳಿಯದೇ ಮೋಸ ಹೋಯಿತು ಈ ಮನವು
ಸ್ವಾರ್ಥಕ್ಕಾಗಿ ಬಳಸಿಕೊಂಡು; ಹಣ್ಣಿನ ಸಿಪ್ಪೆಯಂತೆ
ನಿರ್ಲಕ್ಷಿಸಿದ ಪರಿ ನ್ಯಾಯ ಸಮ್ಮತವೇ ನಿನಗೆ?

ಮತ್ತೆಂದಿಗೂ ನನ್ನೆಡೆ ನೋಡದ ಗೂಡಿನಲ್ಲಿ
ನನ್ನಂಥವಳ ಹೆಣ್ಣಿನ ಮನದ ಭಾವನೆಗಳಿಗೆ
ಕೆಣಕುತ್ತಿರಲು ನೀನು, ಅವಳೊಂದಿಗೆ
ಸಂಸಾರವನ್ನು ಹೂಡಿ ನಡೆಸುತ್ತಿರುವ ಸಲ್ಲಾಪಕ್ಕೆ
ಮನ್ನಿಸಲಾರೆ ನಿನಗೆ ಎಂದಿಗೂ ಎಂದೆಂದಿಗೂ

ನನ್ನ ಕಣ್ಣೀರಿನ ಕಥೆ ಕೇಳಿಯಾದರೂ ಒಮ್ಮೆ
ತಿರುಗಿ ನೋಡು; ನಿನ್ನದೇ ಕಾರ್ಯ ವರ್ಗದವರು
ನನ್ನ ಸಾವಿನ ಕ್ಷಣಗಣನೆ ನಡೆಸುತ್ತಿರುವರು
ಬ್ರೆಕಿಂಗ್ ನ್ಯೂಜ್ ಮಾಡಲು ಹೊರಟಿರುವರಲ್ಲ
ನನ್ನ ಶವಯಾತ್ರೆಯೊಂದಿಗೆ ನಮ್ಮ ನಡುವೆ ಅಂಕುರಿಸಿದ
ಪ್ರೀತಿಯ ಬಾಂಧವ್ಯದ ಕುರಿತ ಚಿತ್ರಣಕ್ಕೆ ನೀನೊಬ್ಬನೇ ಖಳನಾಯಕ!!!

2.ಹಾಡಿದ್ದೇ ಹಾಡು ಕಿಸ್ಸ್‍ಬಾಯಿದಾಸ

ಸರ್ಕಾರದ ಮೂಲ ಸೌಲಭ್ಯ
ಎಲ್ಲೆಡೆ ಸಿಗದೇ
ಪರದಾಡುವ ಸ್ಥಿತಿ ಗಂಭೀರ
ರಸ್ತೆಗಳಿಲ್ಲ. ಬಡಾವಣೆಗಳಲ್ಲಿ
ಸಮರ್ಪಕವಾದ ಚರಂಡಿಗಳಿಲ್ಲದ ತಾತ್ಸಾರ

ಗಬ್ಬು ನಾರುತ್ತಿರುವ ಕಲುಷಿತ ವಾತಾವರಣ
ಮಹಿಳೆಯರು, ಮಕ್ಕಳು,
ಸಾರ್ವಜನಿಕರು ಅನಾರೋಗ್ಯಕ್ಕೆ ಕಾರಣ
ನರಳುವ ರೋಗಿಗಳ ಪಾಲಿಗೆ
ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗಳು
ಇದ್ದರೂ ಸದುಪಯೋಗಕ್ಕಿಲ್ಲ

ಲಕ್ಷ ರೂಪಾಯಿ ಸಂಬಳ ಪಡೆಯುವ
ವೈದ್ಯರುಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ
ನಿತ್ಯ ನೂರಾರು ಬಡವರ ಗೋಳು
ಕೇಳುವರಾರು..? ಯಾರಿಗೆ ಯಾರೂ ಇಲ್ಲ

ಕುಡಿಯುವ ನೀರಿಗಾಗಿ ಗ್ರಾಮ
ಕುಗ್ರಾಮಗಳಲ್ಲಿ ಎದ್ದಿರುವ ಹಾಹಾಕಾರಕ್ಕೆ
ತಿರುಗಿ ನೋಡುವ ಜನಪ್ರತಿನಿಧಿಗಳೆಲ್ಲಿ?
ವಿದ್ಯುತ್‍ದ್ವೀಪ ಕಾಣದೇ
ಸೊರಗುತ್ತಿರುವ ಗಾಮಗಳ ಲೆಕ್ಕವೇ ಇಲ್ಲ.

ಇನ್ನೂ ಚುನಾವಣೆ ಮುಗಿದ ಮೇಲೆ
ಜನಸಾಮಾನ್ಯರ ಕುಂದು ಕೊರತೆಗಳಿಗೆ
ರಾಜಕೀಯ ಜನ ಸ್ಪಂಧಿಸುವರೆಂಬ
ಯಾವ ಭರವಸೆಗಳು ಜನರಲ್ಲಿ ಉಳಿದಿಲ್ಲ.

ಬಡವರ ಪ್ರತಿಯೊಂದು ಭಾಗ್ಯಕ್ಕೂ
ಕಲ್ಲೇಟು ಬಿದ್ದರೂ, ದೇವರು
ವರ ಕೊಟ್ಟರೂ ತಡೆಯುವ
ಪೂಜಾರಿಗಳನ್ನ ಕೇಳುವವರೇ ಇಲ್ಲ

ಸೂಕ್ತ ಫಲಾನುಭವಿಗಳಿಗೆ
ಸಿಗದೇ ಉಳ್ಳವರ
ಪಾಲಾಗುತ್ತಿರುವ ಯೋಜನೆಗಳು.
ಇಲ್ಲದವರ ಗೋಳು ಕೇಳುವಿರಾ..?
ಚುನಾವಣೆಯಲ್ಲಿ ಸ್ಪರ್ಧಿಸಿರುವ
ಅಭ್ಯರ್ಥಿಗಳಿರಾ...

ಮುಂದೊಂದು ದಿನ
ಜಯಶಾಲಿಯಾಗಿ ಬಂದರೆ ಮತ್ತದೇ
ಹಾಡಿದ್ದೇ ಹಾಡು ಕಿಸ್ಸ್‍ಬಾಯಿದಾಸ
ಎನ್ನುವ ಹಾಗೆ ನಿಮಗನಿಸಿದರೆ
ಮತದಾರ ಬಂಧುಗಳೇ
ಸ್ವಲ್ಪ ಯೋಚಿಸಿ, ಚಿಂತಿಸಿ
ಸೂಕ್ತವಾದವರನ್ನೇ ಗೆಲ್ಲಿಸಿ ತರೋಣ
ನಾವು ನೀವೆಲ್ಲ ಗಂಭೀರವಾಗಿ ಆಲೋಚಿಸೋಣ!!
ನಮ್ಮ ಹಕ್ಕನ್ನು ಪಡೆಯಲು ಹೋರಾಡೋಣ

ನಿರೀಕ್ಷೆ

ಪ್ರಿಯೆ ನಿನ್ನಿ ನೋಟಕ್ಕೆ
ಮನಸೋಲದೇ ಹೇಗಿರಲಿ
ಮಂದಹಾಸದ ನಗೆಬೀರಿ
ಕುಳಿತಿರಲು ನೀನು

ನನ್ನ ಬರುವಿಕೆಗಾಗಿ..!
ನೀನಿಟ್ಟಿರುವ ನಿರೀಕ್ಷೆ
ಹುಸಿಯಾಗದಿರಲಿ
ಎಂದು ಪ್ರಾರ್ಥಿಸುವೆ
ನಿನ್ನನ್ನು ಬಿಟ್ಟಿರಲಾಗದ ಚಡಪಡಿಕೆ
ನನ್ನೊಳಗೂ ಉಂಟು

ನನ್ನವಳನ್ನಾಗಿ ದಕ್ಕಿಸಿಕೊಳ್ಳಲು
ಪರಿಪೂರ್ಣವಾಗಿ ಪ್ರಯತ್ನಿಸುತ್ತಿರುವೆ.....
ಆ ವಿಧಿಯಾಟ ನಮಗೆ ಒಂದಾಗಿಸುವುದೋ
ಇಲ್ಲ ಎಂಬುದೇನು ಗೊತ್ತಿಲ್ಲ!

ನಿನ್ನೀ ದೃಷ್ಠಿಗೆ ಸೃಷ್ಠಿಯ
ಸೌಂದರ್ಯವನ್ನು ಬೆರೆಸಿ
ಆ ದೇವರನ್ನು ಪ್ರಶ್ನಿಸಿದೆ
ಇವಳಿಗೆ ಇಷ್ಟೊಂದು
ಚೆಲುವನ್ನು ಕೊಟ್ಟು
ನನಗೆ ಸಾವು ಕೊಟ್ಟೆಯಾ
ಎಂದು

ಮಗುವಿನಲ್ಲಿ ನಗುವರಳಲಿ

ಬೆಳಕಿನ ಹುಡುಕಾಟಕ್ಕೆ
ಪರದೆ ಸರಿಸುವ ಪರಿ
ಕಿಟಕಿಯಾಚೆಯ ಜಗತ್ತು
ಹೇಗಿರಬಹುದೆಂಬ ಕುತೂಹಲ
ಕಣ್ಮನ ಸೆಳೆಯುವಂಥ ನೋಟ
ತನ್ಮಯವಾಗಿ ಕುಳಿತ ಮಗುವೆ
ಕತ್ತಲ ಕೋಣೆಯಿಂದ ಆಚೆ ಬರುವ
ತವಕದಲ್ಲಿ ಸೂರ್ಯನ ಕಿರಣಗಳೊಂದಿಗೆ
ಕಣ್ಣಾ ಮುಚ್ಚಾಲೆಯಾಡುವ ಸಂಭ್ರಮವೆ?

ಹೊರ ಜಗತ್ತಿನ ಹೊಂಬೆಳಕನ್ನು
ಕತ್ತಲ ಕೋಣೆಗೆ ನುಸುಳಿ
ನಿನ್ನನ್ನು ಕೈ ಬೀಸಿ ಕರೆಯುತ್ತಿಹುದು
ಬೆಳಕಿನ ಪ್ರಖರತೆಯಲ್ಲಿ ನಿನ್ನೊಂದಿಗೆ
ಆಟವಾಡಲು...

ನಿನ್ನೊಳಗಿರುವ ತವಕ, ತಲ್ಲಣಗಳಿಗೆ
ಬೆಳಕು ಸದಾ ಜೊತೆಗಿರಲು
ಕನಸುಗಳು ಮತ್ತೆ ಮತ್ತೆ ಅರಳುತ್ತವೆ
ನಿನ್ನ ಮುಗ್ಧ ಜೀವದ ಭಾವನೆಗಳು

ಅರ್ಥವಾಗದ ಜಗತ್ತಿಗೆನೊಂದಿಗೆ
ದೈತ್ಯ ಪ್ರತಿಭೆಯಾಗಿ ಬೆಳೆಯಬೇಕು
ಬದುಕಿನ ವಿಸ್ಮಯಕ್ಕೆ
ನಿನ್ನೊಳಗಿನ ನಗು ಹೂವಾಗಿ ಅರಳಿ
ಕವಿತೆಯಾಗಿ ಶಾಶ್ವತ ಜನಮನದಲ್ಲಿ ಉಳಿಯಬೇಕು

ಕಾಡುವ ನೆನಪು

ಬಿಡದೇ ಕಾಡುವ ನಿನ್ನ
ನೆನಪುಗಳಿಗೆ ಏನೆಂದು ಹೆಸರಿಡಲಿ
ಕತ್ತಲು ಸರಿದು ಬೆಳಕು ಹರಿದರೂ
ನಿನ್ನದೇ ಧ್ಯಾನ
ಕನವರಿಕೆ
ಬಿಟ್ಟಿರಲಾಗದ ಚಡಪಡಿಕೆ
ನಿನ್ನೊಳು ಮನಸ್ಸು ಲೀನವಾಗಿ
ನೆನಪುಗಳಿಂದ ಹೇಗೆ
ಬಿಡಿಸಿಕೊಳ್ಳಲೆಂಬ ಚಿಂತೆಯೂ
ಹತ್ತಿರ ಸುಳಿಯಲಿಲ್ಲ
ಕೊನೆಗೂ ಈ ಮನದ ದುಗುಡಗಳು
ಹೇಳಿಕೊಳ್ಳಲು ಆಗಲೇ ಇಲ್ಲ
ನನ್ನಲ್ಲಿರುವ ಆ ಪ್ರೀತಿಯ
ತಲ್ಲಣಗಳಿಗೆ
ಕಾರಣಗಳು ಕೇಳಲೇ ಇಲ್ಲ.

ಮುಖವಾಡಗಳ ಸಂಗದಲ್ಲಿ

ತೋರಿಕೆಗೆ ಮಾತ್ರ ತೋರಣ ಕಟ್ಟುವ
ಸಮಾರಂಭಗಳು ಯಾರಿಗೆ ಬೇಕು
ಈ ನಿಮ್ಮ ಮೇಜು ಕುರ್ಚಿಗಳು
ಹಸಿದವರ ಹೊಟ್ಟೆಗೆ ಅನ್ನ ನೀಡದಿರುವಾಗ
ದಣಿದು ಬಂದವರಿಗೆ ದಣಿವಾರಿಸಿಕೊಳ್ಳಲು
ಆಗದಿರುವಾಗ

ನೈಜ ಪ್ರತಿಭೆಗಳ ಕೊಲೆಗಳು ನಡೆಯುತ್ತಿವೆ
ಆಗಂತುಕರ ಮನಸ್ಸಿನ ಮೇಳಗಳಲ್ಲಿ
ಮುಖವಾಡ ತೊಟ್ಟವರ ಮುಖಗಳೇ ಇಲ್ಲಿ
ಕಾಣುತಿರುವಾಗ, ಇದಕ್ಕೆ ಕಾರಣಗಳೆಲ್ಲಿ

ನಿತ್ಯವೂ ನಡೆಯುವ ಕೊಲೆಗಳಿಗಂಜದೇ
ದುಷ್ಟರ ಸಂಹಾರಕ್ಕೆ ಗಟ್ಟಿ ಮನಸ್ಸಿನ
ಸ್ಪಷ್ಟ ಬರಹಗಾರರ ಚಾಟಿಯೇಟು ಬೇಕಿಲ್ಲಿ
ಸದೃಢ ಸಮಾಜ ನಿರ್ಮಾಣಕ್ಕಾಗಿ

ಜಾತಿಯೆಂಬ ವಿಷಬೀಜ ಬಿತ್ತಿ ಬದುಕುತ್ತಿವೆ
ಪವಿತ್ರ ಪದಗಳಿಗೆ ಕುಲಗೆಡೆಸಿ ಮೆರೆಯುತಿವೆ
ತೋರಿಕೆಯ ತೋರಣದಲ್ಲಿ, ಹರಕೆಯ ಕುರಿಯಾಗಿ
ಊರೆಲ್ಲ ಮೆರವಣಿಗೆ ಯಾರಿಗೆ ಬೇಕೋ
ಅವರೆನ್ನೆಲ್ಲ ಕೈಬೀಸಿ ಕರೆಯುತ್ತಿವೆ
ಹಸುವಿನ ಮುಖವಾಡ ತೊಟ್ಟ
ಜಾತಿ ನಿರ್ಮಾಪಕರಿಂದ

ಮೂಲ ಪ್ರತಿಭೆಗಳ ನಿಗದಿತ ಕೊಲೆ ಮಾಡಲು
ಎಲ್ಲೆಂದರಲ್ಲಿ ಹಾಕುತಿದ್ದಾರೆ ಹೊಂಚು
ಕೈ ಚಾಚಿ ಬೇಡುತ್ತಿರುವರು ಕೊಚ್ಚಿ ಹಾಕುವ ಮಚ್ಚು
ಅದೇಷ್ಟೇ ಸಲವೂ ಕೊಂದು ಬಿಡಲಿ
ಸಾಯುವುದಿಲ್ಲ ನಾವು
ಸುಟ್ಟು ಬೂದಿಯಾದರೂ ಮತ್ತೆ ಮತ್ತೆ
ಫಿನಿಕ್ಸ್ ಹಕ್ಕಿಯಂತೆ ಜೀವಿಸಬೇಕು
ಕೊಚ್ಚಿ ಕೊಲೆಗೈಯುವವರ ಸಂಗದಲ್ಲೇ
ಸಾಧನೆಯ ಪಥದಲ್ಲಿ ಸಾಗಬೇಕು

ವೀರ ಪುರುಷ ಮಲ್ಲಿಕಾರ್ಜುನ

ನ್ಯಾಯ ನೀತಿಗೆ ತಲೆಬಾಗಿ
ಅನ್ಯಾಯಕ್ಕೆ ಹೋರಾಡಿ
ಕಳ್ಳಕಾಕರರಿಗೆ, ದರೋಡೆಕೋರ
ರೌಡಿಗಳಿಗೆ ದುಸ್ವಪ್ನವಾಗಿದ್ದ
ಪಿಎಸ್‍ಐ ಬಂಡೆ
ಮಲ್ಲಿಕಾರ್ಜುನನ ಅವತಾರವನ್ನೆತ್ತಿ
ಬಂಡುಕೋರರಿಗೆ ಸದೆಬಡಿದು
ಬಂಡಾಯಕ್ಕೆ ಮೆರುಗು ನೀಡಿದ ಅಧಿಕಾರಿ
ವೀರ ಪುರುಷನಾಗಿ ಹೋರಾಡಿದ
ಧೀಮಂತ, ದಕ್ಷ ಪೊಲೀಸ್
ಅಧಿಕಾರಿಗಳಿಗೆ ಮಾದರಿಯಾಗಿ ಉಳಿದ
ಮಲ್ಲಿಕಾರ್ಜುನನ ಆತ್ಮಕ್ಕೆ
ಶಾಂತಿ ಕೋರುವೆ
ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರಕ್ಕೆ
ಎದೆಸೆಟೆದು ನಿಂತು
ದುರುಳನ ದೌರ್ಜನ್ಯವನ್ನು ಹತ್ತಿಕ್ಕಲು
ಸಾವಿಗೂ ಹೆದರದೇ ಹೋರಾಡಿದ್ದು
ಅವರಲ್ಲಿರುವ ಶೌರ್ಯಕ್ಕೆ ಸರ್ಕಾರ
ಕೋಟಿ ಕೊಟ್ಟರೂ ಸಾಲದು
ಕೋಟಿ ಕನ್ನಡಿಗರ ಮನದಾಳದಲ್ಲಿ
ಅಚ್ಚಳಿಯದೇ ಉಳಿದು
ಹುತಾತ್ಮನಾದ ಬಂಡೆಯವರ
ಧೈರ್ಯ, ಸ್ಥೈರ್ಯ, ಸಾಹಸಕ್ಕೆ ಹ್ಯಾಟ್ಸ್‍ಪ್
ಅಭಿಮಾನಿಗಳ ಪಾಲಿಗೆ
ಸಿಂಗಂ ಆಗಿ, ನಿಜ ಜೀವನದ ನಾಯಕ
ನಟನಾಗಿ ಅಮರವಾಗುಳಿದ ಮಲ್ಲಿಕಾರ್ಜುನ
ಇಳಿಸಂಜೆ ಅಸಾಹಯಕತೆಗೆ ಬೆಳಕಾದನು.





ಕನಸಿನರಮನೆಯಲ್ಲಿ...

ಹಳೆಯದನ್ನೆಲ್ಲ ಮರೆಯಲು
ಹೊಸ ಕನಸಿನ ಅರಮನೆಯೊಂದು
ಕಟ್ಟಿ ಕುಳಿತವನು ನಾನು
ಕಣ್ಣಿನ ಬಿಂಬಕ್ಕೆ ದಕ್ಕಿದ ದೃಷ್ಠಿ
ಚಿಕ್ಕದಾದರೂ, ಬೆರಗಾದ ನೋಟದಲ್ಲಿ
ಜಗತ್ತಿನೆಲ್ಲ ವಿಶಾಲಕ್ಕೆ ಕೈಗನ್ನಡಿಯಾಗುವೆ
ದೃಷ್ಠಿಯಿಂದ ಪುಷ್ಠಿ ಕೊಡುವ ವಸ್ತು ಸಿಕ್ಕರೆ ಸಾಕಲ್ಲವೆ?

ಆ ಸೃಷ್ಟಿಕರ್ತನ ಕೈಚಳಕಕ್ಕೂ ಮೀರಿ
ಪುಟಿದೇಳುವ ಆಸೆಯೊಳಗೆ ಸಂಭ್ರಮಿಸುವೆ
ನಾಳೆಗಳೆಂಬ ಕನಸಿನ ಗರಿಬಿಚ್ಚಿ ಹಾರಾಡುವೆ
ರೆಡಿಮೆಡ್ ಯಂತ್ರಕ್ಕೆ ಹ್ಯಾಟ್ಸಫ್ ಹೇಳಿ, ಸಲಾಂ
ಇಂಡಿಯಾ ಎನ್ನುವ ದೇಶಿ ಹುಡುಗರ ನೃತ್ಯದಲ್ಲಿ
ಕುಣಿದಾಡಲು ಈಗಷ್ಟೇ ಸಜ್ಜಾಗಬೇಕಿದೆ

ಚೋರ ಚಿತ್ತ ಚೋರ ಇವನಲ್ಲ
ರಸಿಕರಮಣಿಯೂ ಇದಲ್ಲ!
ಈ ನೋಟದಲ್ಲೊಂದು ಹೊಂಗನಸು
ನಿನ್ನೆ ಮೊನ್ನೆಯದೇನಲ್ಲ,

ಸಿನಿಮಾ ನಟನಾಗುವ ದಿಟ.
ಪರಿಪೂರ್ಣ ಕಾಯಿಬಿಡುವ ಹಂತ
ಈಗಷ್ಟೇ ಚಿಗುರೊಡೆದು ಸಾಧನೆಯ ಗುರಿ ಮೆಟ್ಟಿ ನಿಂತ
ಕದಲದ ನೋಟದಲ್ಲಿ ಕಡಲಾಳದ ಸಂತ
ಗೆದ್ದು ಬಂದ ಸಂಭ್ರಮ ಕಣ್ತುಂಬಿಕೊಳ್ಳುತ್ತಿರುವನು
ಕನಸಿಗೆ ಜಾರಿಬಿದ್ದ ಮನಸ್ಸನ್ನು ಎಚ್ಚರಾಗಿಸಬೇಡಿ ಪ್ಲೀಜ್.....

ಯಾರೇ ಬಂದು ಕದ ತಟ್ಟಿದರೂ
ತನ್ನಷ್ಟಕ್ಕೆ ತಾನು ತೆರದುಕೊಳ್ಳದ
ಅದೃಷ್ಟವೆಂಬ ಬಾಗಿಲು ತೆರೆದುಕೊಂಡಿದೆ
ಕರೆಯದೇ ಬರುವ ಕನಸುಗಳು ಹೆಬ್ಬಾಗಿಲಲ್ಲಿ ನಿಂತಿವೆ
ಕನಸು ಸಾಕಾರಗೊಳ್ಳಲು ಪ್ರಯತ್ನವಂತೂ ಮಾಡಬೇಕು
ಮನಸ್ಸಿನ ತರ್ಕಕ್ಕೆ ಆಕರ್ಷಣೆಯಾಗಿ ಸೆಳೆಯುವ
ಭಾವಕ್ಕೆ ನಾನಿಲ್ಲಿ ಬಂಧಿಯಾಗಿ ಬಿಡಬೇಕು.

ಕನಕದಾಸ

ತಿಮ್ಮಪ್ಪ ನಿನಗೆ ವಂದನೆ
ಭಕ್ತಿಯಿಂದ ನೆನದವರಿಗೆ
ಧನ ಕನಕನಾಗಿ ಕಂಡವನೇ
ದಾಸ ಪದಗಳನ್ನು ಹಾಡಿ, ಕುಣಿದಾಡಿದ
ಕನಕದಾಸ ನಾಮದಿಂದ ಎಲ್ಲೆಡೆ ಹೆಸರಾದ

ನಿನ್ನನ್ನರಿಯಲು ಸಾಲದು ನೂರು ಪದಗಳು
ಕಾವ್ಯ ಪರಂಪರೆ ಕೂಟದಲ್ಲಿ ನೀ ಮೆರೆದು
ಕಾವ್ಯ ಕುಲುಮೆಯ ಕಂಬಾರಿಕೆ
ಬಲ್ಲವರಿಗಷ್ಟೇ ದಕ್ಕುವ ನಿನ್ನ ಬುದ್ಧಿಶಕ್ತಿ
ನಿನ್ನಾ ಕಾವ್ಯದ ರಚನಾ ಕ್ರಮ ಮಿಗಿಲಾದದ್ದು

ರಾಜಭೋಗವನ್ನು ಕಿತ್ತುಕೊಂಡ
ದುಷ್ಟರಿಂದ ದೂರ ಸರಿದು, ಜಗಜ್ಯೋತಿಯಾಗಿ
ಬೆಳಗಲು, ಕಿಂಡಿಯಿಂದ ಶ್ರೀಕೃಷ್ಣನ ದರ್ಶನ ಗೈದೆ
ಸಮಾಜೋದ್ಧಾರಕ್ಕಾಗಿ ಕವಿ ಕನಕದಾಸ ನೀನಾದೆ
ಮಗ, ಹೆಂಡತಿಯ ಸಾವಿನಿಂದ
ಜರ್ಝರಿತಗೊಂಡು ಜಗದ ಜನಕನಾದೆ
ಓ ಕನಕ
ಕಾವ್ಯ ಪರಂಪರೆಗೆ ನೀನೆ ಅದ್ಭುತ ನಿರ್ದೇಶಕ

ಜಾತಿ ನಿಂದನೆಯಲ್ಲಿ, ಭ್ರಷ್ಟರ ಶೋಷಣೆಯಲ್ಲಿ
ಧರ್ಮವನ್ನು ಕಾಪಾಡಿದ ಕನಕ ಗುರವೇ
ಜಾತಿ ಜಾತಿಗಳ ನಡುವೆ ಹುಟ್ಟಿಕೊಂಡ ಜ್ವಾಲೆ ನಂದಿಸಲು
ಸಮಾನತೆಯ ಸಂದೇಶ ಸಾರಿದ ಭಕ್ತ ಕನಕದಾಸ
ಕನಕನೆಂದರೆ
ವಜ್ರಕ್ಕಿಂತ ಹೊಳಪುಂಟು

ನೀ ತೊಡುವ ಬಳೆಗಳ ಕೈ

ನೀ ತೊಡುವ ಬಳೆಗಳ
ಕೈ ನಾನಾಗಿದ್ದರೆ ಗೆಳತಿ
ನಾಜೂಕಾದ ಬಳೆಗಳು
ಚೂರಾಗದಂತೆ ಉಡುಗೋರೆಯಾಗಿ
ಕೊಟ್ಟು ಸಂಭ್ರಮಿಸುತಿದ್ದೆ
ನಯವಾದ ಕೈಗಳಿಗೆ ಶೋಭಿಸುತಿದ್ದೆ
ನಿನ್ನ ಮುಖದಲ್ಲಿ ಮಂದಹಾಸ ನಗುವನ್ನು ತರುತಿದ್ದೆ...!

ನುಣುಪಾದ ನಿನ್ನ ಕೆನ್ನೆ
ಅದೇ ಕೈಗಳಿಂದ ಸವರುತಿದ್ದೆ
ಆ ಬಳೆಗಳ ನಾದದಲ್ಲಿ
ನಿನ್ನ ಧ್ಯಾನವನ್ನೆಲ್ಲ
ನನ್ನತ್ತ ಸೆಳೆದುಕೊಳುತಿದ್ದೆ...!!

ಕನ್ನಡಿಯೊಳಗಿನ ಪ್ರತಿಬಿಂಬ ನೀನು
ಶೃಂಗಾರವನ್ನು ಮಾಡಿಕೊಳ್ಳುವಾಗ
ನಿನ್ನ ಕಣ್ಣೊಳಗೆ ಕಣ್ಣಿಟ್ಟು ನೋಡುತಿದ್ದೆ
ನಿನ್ನ ಸೌಂದರ್ಯದ ಧ್ಯಾನದಲ್ಲಿ
ಲೀನವಾಗಿ ಪ್ರೇಮಗೀತೆಯೊಂದು ಬರೆಯುತಿದ್ದೆ
ನಿನ್ನ ಹೆಸರನ್ನೇ ಗುನುಗುನಿಸುತ್ತ ಹಾಡುತಿದ್ದೆ
ಗೆಳತಿ ನೀ ಹೋದೆಡೆಯಲೆಲ್ಲ ಇರುತಿದ್ದೆ...!!?

ನಿನ್ನ ಮುಖದ ಕಾಂತಿಯನ್ನು
ಕೈ ಬೀಸಿ ಕರೆದು, ಗಾಳಿಯಲ್ಲಿ ತೇಲಾಡುತ್ತ
ಸೌಂದರ್ಯವನ್ನು ಸಾರಿ ಹೇಳುವ ಕಿವಿಯೋಲೆಗಳು
ಓಲಾಡುವಾಗ, ಅದರ ಕೈ ಹಿಡಿದು ಜೀಕುತಿದ್ದೆ
ನಿನ್ನೊಂದಿಗಿಯೇ ಬಿಡದೇ ಜೀವಿಸುತಿದ್ದೆ

ಮಲಗಿದಾಗಲೂ ನೀ....
ನಿನ್ನ ತಲೆಯ ದಿಂಬಾಗಿ ಇರುತಿದ್ದೆ....!!
ಹೊಳಪಾದ ನಿನ್ನ ಕಣ್ಣುಗಳಿಂದ
ತೊಟ್ಟಿಕ್ಕುವ ಕಣ್ಣೀರು ಒರೆಸುತಿದ್ದೆ
ತಡೆಯುತಿದ್ದೆ, ಕೆಂಪಾದ ಕೆನ್ನೆಗುಂಟ
ಜಾರುವ ಬಿಸಿಯುಸಿರಿನ ಕಣ್ಣೀರು
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ

ನಿನ್ನ ದುಖವನ್ನೆಲ್ಲ ನನ್ನದಾಗಿಸಿಕೊಂಡು
ಸಾಂತ್ವನಿಸುತಿದ್ದೆ, ಕೈ ಹಿಡಿದು ನಿನ್ನನ್ನು
ನನ್ನೆದೆಗಪ್ಪಿಕೊಳ್ಳುತಿದ್ದೆ ಪ್ರಿಯೆ.....
ಆರದ, ಮರೆಯದ ಗಾಯ ಹುಣ್ಣಾಗದಂತೆ
ಒಲವೆಂಬ ಮುಲಾಮನ್ನು ಹಚ್ಚುತಿದ್ದೆ

ನೀ ನಡೆವ ಹಾದಿಯಲ್ಲಿ.....
ಮುಳ್ಳುಗಳೇಷ್ಟೇ ಇದ್ದರೂ
ಕಿತ್ತೆಸೆದು ಬಿಡುತಿದ್ದೆ, ನಿನ್ನ ಬಾಳ ಪಯಣದಲ್ಲಿ
ಹೂ ಹಾಸಿಗೆ ಚೆಲ್ಲುತಿದ್ದೆ
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ

ಹೂ ನಗೆಯಾಗುವ ನಿನ್ನ ಮುಖಕ್ಕೆಲ್ಲ ಮುತ್ತಾಗುತಿದ್ದೆ
ಹೊಂಗನಸಿನ ರಾತ್ರಿಗೆ ನವಿಲಾಗುತಿದ್ದೆ
ಕೋಗಿಲೆಯ ಕಂಠಕ್ಕೆ ಕವಿಯಾಗುತಿದ್ದೆ
ಕಲ್ಪನೆಯ ಚೆಲುವಿಗೆ ಚಿತ್ರಕಾರನಾಗುತಿದ್ದೆ
ಕೈ ಹಿಡಿವ ಜೊತೆಗಾರನಾಗಿ ಇರುತಿದ್ದೆ ಗೆಳತಿ

ನಿನ್ನ ಮುಗ್ಧ ಮನಸ್ಸಿನ ಸೌಂದರ್ಯದ
ಆರಾಧಕನಾಗಿರುತಿದ್ದೆ
ಅಭಿಮಾನಿಯಾಗಿರುತಿದ್ದೆ...!
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ

ಕಾಯುವ ದೇವರ ವರ

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆ ಎಂಬ
ಅಕ್ಕನ ವಚನದಂತೆ
ದನದ ಕೊಟ್ಟಿಗೆಯ
ಮೇಲೊಂದು ಮನೆಯ ಮಾಡಿ
ಹಸುವಿಗೆ ಬೆದರದಿರು ನೀ ಕಂದ

ಅಮ್ಮನ ಮಡಿಲಲ್ಲಿ ಚಳಿಗಾಳಿಗೆ
ಬೆಚ್ಚಗಿರದೇ, ಬೆಚ್ಚಿ ಬೆರಗಾಗುವ
ನೋಟದಲ್ಲಿ ಕಾತರಿಸುತ್ತಿರುವೆ
ಕಾಯುವ ದೇವರ ವರವಾಗಿ
ಹುಟ್ಟಿದ ಆಕಳ ಕರು ಎಲ್ಲೆಂದು?

ನಿನ್ನ ಕಾತುರ, ಕುತೂಹಲಕ್ಕೆ
ಅಮ್ಮನ ಆಸರೆಯುಂಟು
ಮಂಜಿನ ತಂಗಾಳಿಗೆ
ಮೈಯೊಡ್ಡಿ ನಿಂತು
ಹಿಮಗಿರಿಯ ವಾತಾವರಣ
ನಿನ್ನ ಮುಗ್ಧತೆಗೆ ಕರಗುವುದುಂಟು

ಕೊಟ್ಟಿಗೆ ಮೇಲೊಂದು ಮನೆಯ ಮಹಡಿ
ಅಮ್ಮನ ತೋಳ ತೆಕ್ಕೆಯಲ್ಲಿ
ಮುಗ್ಧತೆಯ ಒಂದು ಕನ್ನಡಿ
ನೋಡುತಿರಲು ಜಗವನ್ನು....

ತನ್ನ ಕರುವಿನ ಆಗಮನಕ್ಕೆ ಕಾಯುತ್ತಿದೆ
ಹಸು: ತನ್ನ ಕೆಚ್ಚಲೆದೆಯ ಹಾಲುಣಿಸಲು
ನೀ ಮೊಲೆಯ ಹಾಲುಂಡು ಮಲಗು ಮಗು
ಜೋಗುಳವ ಹಾಡುವಳು ಹೆತ್ತ ಕರುಳು

‘ಮಯೂರ’ ಮಾಸ ಪತ್ರಿಕೆಯ ಏಪ್ರಿಲ್ 2014ರ ಸಂಚಿಕೆಯಲ್ಲಿ ಕಲ್ಪನೆ ಕಾವ್ಯ ವಿಭಾಗದಲ್ಲಿ ಪ್ರಕಟಿತ ಕವಿತೆ.

ಕಾಣದ ದೇವರ ಪ್ರತಿರೂಪ

ಜಗವೇ ಒಂದು ರಂಗಭೂಮಿ
ಈ ಜಗದ ಜಾಹಿರಾತಿನ
ಪಾತ್ರಧಾರಿಗಳು ನೀವಾಗಿ
ಹೊಟ್ಟೆಪಾಡಿಗೆ ತೊಟ್ಟ
ವೇಷ ಭೂಷಣವೇ ತಾಯಿ ಬೇರಾಗಿ
ಪೋಷಿಸಬೇಕು
ಸಾರ್ಥಕ ಜೀವನ ಘೋಷಿಸಬೇಕು
ಹೊಟ್ಟೆ ಹಸಿವಿಗೇನಾದರೂ ತಿಂದು

ವೇದಿಕೆಯ ದೃಶ್ಯಕ್ಕಾಗಿ ಮತ್ತೆ ಸಿದ್ಧರಾಗಿ
ವಿವಿಧ ಪಾತ್ರ, ಸನ್ನಿವೇಶಕ್ಕೆ ಬದ್ಧರಾಗಿ
ಪ್ರೇಕ್ಷಕರ ಕುತೂಹಲ ತಣಿಸಬೇಕು
ಮುಂದಿನ ಪೀಳಿಗೆಯ ಸ್ಮøತಿ ಪಟಲಕ್ಕಾಗಿ
ಇತಿಹಾಸದ ಪುಟಗಳು
ಈ ಮೂಲಕ ತೆರೆದಿಡಬೇಕು

ಕಲಾವಿದರಾಗಿ ಜೀವನಪರ್ಯಂತ ನಟಿಸುತ್ತಲೆ
ರಾಮಾಯಣ, ಮಹಾಭಾರತದಂಥ ಕಥೆಗಳಿಗೆ
ಮರುಜೀವ ತುಂಬಬೇಕು, ಎಂಬ
ನಿಮ್ಮೆಲ್ಲರ ಧ್ಯೇಯ್ಯ ಕರ್ತವ್ಯಕ್ಕೆ ಮೆಚ್ಚಲೇಬೇಕು
ನೋಡುಗರ ಕಣ್ಣಿಗೆ ನಿಮ್ಮ ನಟನೆ ಹಬ್ಬವಾಗಬೇಕು

ಇಲ್ಲಿರುವುದು ಬರೀ ನೆಪ ಮಾತ್ರಕ್ಕೆ
ಪಾತ್ರಧಾರಿಗಳಾಗಿ
ಅವನಾಡಿಸಿದಂತೆ ಆಡಬೇಕು
ಎಲ್ಲರ ಬದುಕಿನ ಸೂತ್ರಧಾರನಾಗಿ
ಅವನೊಬ್ಬನುಂಟು...!

ಕಾಣದ ದೇವರ ಪ್ರತಿರೂಪವಾಗಿ
ನಿಮ್ಮೊಳಗಿನ ಪ್ರತಿಭೆ
ಅನಾವರಣಗೊಳಿಸಿದಾಗಲೇ
ಹಿಡಿ ತುತ್ತು ಬಾಯೊಳಗೆ...
ಸಾಧನೆಯ ಶಿಖರವನ್ನೇರಿದಾಗ
ಬಿಚ್ಚಿಡುತ್ತದೆ ಬದುಕಿನ ಕಗ್ಗಂಟು ಜಗದೊಳಗೆ
ಆಗ ಖುಷಿ! ಸಂಭ್ರಮ? ಒಳಗೊಳಗೆ
***

ಮರಿಯಂದ್ರ ಹ್ಯಾಂಗ್ ಮರೆಯಲಿ
ನನ್ನ ನಿನ್ನ ಭೇಟಿ ಒಂದು ಆಕಸ್ಮಿಕ
ಹುಟ್ಟಿರುವ ಪ್ರೀತಿ ಮಾತ್ರ ಆಕಾಶದೆತ್ತರಕ್ಕ
ಹೇಗೆ ಮರೆಯಲಿ ನಿನ್ನ
ಬಾಳಿಗೆ ಹಚ್ಚಿರುವೆ ನೂರೆಂಟು ಬಣ್ಣ

ಮನಸ್ಸೊಳಗಿಳಿದು ಕನಸುಗಳನ್ನು ಕೊಟ್ಟೆ
ಕನವರಿಸುವ ನಿದಿರೆಯೊಳಗೂ ಮುತ್ತನಿಟ್ಟೆ
ನಿನಗಾಗಿ ಜೀವ ಕೊಡು ಅಂದ್ರ ಕೊಡ್ತಿನಿ ಚಿನ್ನ
ಮರಿಯಂದ್ರ ಹ್ಯಾಂಗ್ ಮರೆಯಲಿ ನಿನ್ನ

ಈ ಜಗವನ್ನೇ ಬಿಟ್ಟು ಹೋಗು ಅಂದ್ರ ಹೋಗ್ತಿನಿ
ನಿನ್ನ ಕಣ್ಣೆದುರಿಗಿಂದ ಕಾಣ್ಸದಾಂಗ್ ಇರ್ತಿನಿ
ಆದ್ರ ನನ್ನ ಮನಸ್ಸೊಳಗಿಂದ ನೀ ಹಾಗೇ
ಇದ್ದಬಿಡ್ತಿಯಲ್ಲ,? ಹೇಳು ಹ್ಯಾಂಗ್ ಮರಿಯಲಿ ನಿನ್ನ

ನನಗಾಗಿ ನೀನು ಕನಸುಗಳು ಕೊಟ್ಟೆ
ಬದುಕಿಗೆ ಭರವಸೆಗಳನ್ನಿಟ್ಟೆ
ಬಾಯಾರಿಕೆಗೆ ಭಾವನೆಗಳೆಂಬ ಪದಗಳನ್ನು ಕೊಟ್ಟೆ
ನನ್ನನ್ನು ಮರೆತು ನೀ ಹಾರಿ ಹೋಗಬೇಡ
ಓ ನನ್ನೊಲವಿನ ಚಿಟ್ಟೆ...!!


ನೀನೆಂದರೆ

ನಿನ್ನ ನೆನಪುಗಳೆಂದರೆ
ರಸ ಹೀರಿ ಎಸೆಯುವ
ಸಿಪ್ಪೆಯಲ್ಲ
ಮನದ ಕನವರಿಕೆಯಲ್ಲಿ
ಕನಸಾಗಿ ಕಾಡುವಳು
ನನಸಾಗಿ ಉಳಿಯದೇ
ಗೀಚಿ ಗೀಚಿ ಬರೆಯುವ
ಕವಿತೆಗಳಾಗಿ ಉಳಿಯುವಳು

ಬಾಡಿ ಹೋಗದಿರು
ಭರವಸೆಗಳೆಂಬ ನೆಲೆಯಲ್ಲಿ
ಬೂದಿ ಮುಚ್ಚಿದ ಕೆಂಡದಂಥ ಪ್ರೀತಿ
ಧಿಕ್ಕರಿಸದೇ ದೂರ ಸರಿಯದಿರು
ಗೆಳತಿ, ನಿನಗಾಗಿ ತಾಜಮಹಲ್
ಕಟ್ಟುವುದಿಲ್ಲ
ತಾಜಾ ಮನಸ್ಸಿನ ಬೇಗುದಿಯ
ಅಕ್ಷರಗಳಲ್ಲಿ ಬಂಧಿಯಾಗಿಸುವೆ
ನಿಷ್ಕಲ್ಮಶ ಪ್ರೀತಿಯಷ್ಟೇ ನನ್ನದು

ನನ್ನ ಮನದ ಕನವರಿಗೆ
ಕನಸುಗಳ ಭರವಸೆಗೆ
ಭಾವನೆಯಾಗು
ನಿನಗಾಗಿ ನಾ
ಏನು ಕೊಡಲಿ
ತವಕ ತಲ್ಲಣಗಳಿಗೆ ಬೇಗುದಿಯಾಗು

ಪ್ರೀತಿಯೊಂದೇ ನೆಪ ಮಾಡಿ

ಅವಳು ದೂರಾದಳೆಂಬ ಕಾರಣಕ್ಕೆ ನಿತ್ಯ ಕುಡಿಯುತ್ತಿಲ್ಲ ನಾನು
ದಿನವೂ ಕಾಡುವ ನೆನಪುಗಳಿಗೆ ಮರೆಯಲಾಗುತ್ತಿಲ್ಲ ಎಂದು

ರಸ್ತೆ ಬದಿ ತೂರಾಡಿಕೊಂಡು ಹೋಗಿ ಬರುವಾಗಲೆಲ್ಲ ನಾನು
ಕೇಕೆ ಹಾಕಿ ನಗುತ್ತಿರುವವರ ಒಳ ವೇದನೆ ಕಾಣದಿರಲಿ ಎಂದು

ಜಾಣತನಕ್ಕಿಂತ ಹೆಚ್ಚು ಮನಸ್ಸು ಕೆಟ್ಟಿದೆ ಎನುತ್ತಿರುವೆ ನಾನು
ಅರ್ಥಮಾಡಿಕೊಳ್ಳದ ಜನರ ಸಹವಾಸವೇ ಸಾಕಾಗಿದೆ ಎಂದು

ಅವಳು ಮತ್ತೆ ಎದುರಾಗಲಿ ಕುಡಿದ ಅಮಲಿನಲ್ಲಿ ಇರುವಾಗ ನಾನು
ಎಲ್ಲಾ ಹೇಳಿ ಬಿಡುವೆ ನಿನ್ನ ನಿಜ ರೂಪ ತಿಳಿಯಿತು ಎಂದು

ಕಾರಣವನ್ನು ಹೇಳದೆ ಮುಖ ತಿರುಗಿಸಿ ಹೋದರೆ ನಾನು
ವಿನಂತಿಸುವೆ ಖಾಲಿ ಬಟ್ಟಲಲ್ಲಿ ಮಧು ತುಂಬಿಸಿ ಕೊಡು ಎಂದು

ಜಡಗಟ್ಟಿದ ಸಮಾಜದಿಂದ ದೂರ ಹೋಗುತ್ತಿರುವೆ ನಾನು
ಮಡುಗಟ್ಟಿ ನಿಂತ ದು:ಖದ ಕಟ್ಟೆಯನ್ನು ಒಡೆದು ಸಾಂತ್ವನಿಸಿಕೊಳ್ಳಲಿ ಎಂದು

ಮತ್ತದೆ ಅನ್ಯಾಯ ಅತ್ಯಾಚಾರ ಭ್ರಷ್ಟಾಚಾರಕ್ಕೆ ಕುಗ್ಗಿರುವೆ ನಾನು
ಪ್ರೀತಿಯೊಂದೇ ನೆಪ ಮಾಡಿ ಆಡಿಕೊಳ್ಳುವ ಜನರಿದ್ದಾರೆ ಎಂದು

ಬಾನಚೆಂದಿರನ ವೇದನೆ

ಕಪ್ಪು ಬಿಳುಪು
ಭಾವನೆಗಳಲ್ಲಿ ಬರಿದೆ
ನಕ್ಕು ಹರಿದು ಹಾಕಬೇಡ ನನ್ನ
ನೆನಪುಗಳು

ರದ್ದಿ ಕಾಗದವಲ್ಲ ಮನಸ್ಸು
ನಿನಗಾಗಿ ಕಟ್ಟಿಕೊಂಡಿದ್ದ
ಕನಸುಗಳಿಗೆ
ಆ ಚಂದ್ರ ಕೂಡ ಬೆರಗಾಗಿದ್ದ
ಗೊತ್ತ... ?
ನಿನ್ನಾ ಚೆಲುವೆ
ಎಷ್ಟು ಚೆಂದ!
ನನಗಿಂತ ಎತ್ತರ ನಿನ್ನ ಆಯ್ಕೆ
ನಿನ್ನಂಥ ಗೆಳತಿ ನನಗಿಲ್ಲ ಯಾಕೆ
ಎಂದು ಕೇಳಿದನು

ಮತ್ತೆ ಬೇಸರದಿ ನುಡಿಯುತ್ತ
ಹೇಳಿದನು
ನನಗಿರುವ ವೇದನೆ ಕಳೆಯಲೆಂದು
ನಿನ್ನಂಥ ಗೆಳತಿ ಸಿಗಲಿಲ್ಲ
ಎಂಬ ಕಾರಣಕ್ಕೆ
ಕುಳಿತಿರುವೆ ಆಕಾಶದೆತ್ತರಕ್ಕೆ

ಈ ಭೂಮಿ ಮೇಲೆ
ಎಲ್ಲಾದರೂ
ನನ್ನವಳು ಕೂಡ
ಕಾಣ ಸಿಗಬಹುದೆಂದು
ಇಣುಕಿ ಇಣುಕಿ
ನೋಡುತ್ತಿರುವೆ
ಎಂದು ಹೇಳಿದನು
ಬಾನ ಚೆಂದಿರನು!




ಹುಡುಕಾಟ
ಬೆಳಕಿನ ಹುಡುಕಾಟಕ್ಕೆ
ಆ ಚಂದ್ರನನ್ನು ನೋಡಿದೆ
ಸೂರ್ಯನನ್ನು ದೃಷ್ಠಿಸಿದೆ
ನಿನ್ನಷ್ಟು ಸುಂದರವಾಗಿ
ಕಾಣದ ಅವರೆಲ್ಲರೂ
ನಿನ್ನೆದುರಿಗೆ ಗೌಣವಾಗಿ
ಹೋದರು.
ನಾ ನಿನ್ನ ಚೆಲುವಿಗೆ
ಮೌನವಾಗಿ ಕವಿತೆಯೊಂದು
ಬರೆದು ಕವಿಯಾದೆ ಗೆಳತಿ.

ಭರವಸೆಗಳೆಂಬ ಭಾವನೆ

ಭರವಸೆಯೆಂಬ ಬದುಕಿನ ಭಾಷೆಗೆ
ನಿನ್ನ ಹೆಸರನ್ನು ಬರೆದಿರುವೆ
ಉಸಿರಾಡುತ್ತಿರುವ ನನಗೆ
ನಿನ್ನ ಮರೆಯಲು ಆಗುತ್ತಿಲ್ಲ
ಪ್ರಿಯೆ.....

ಮರೆತು ಬಿಡು ಎಂದು
ನೀ ನುಡಿದರೆ
ಮರೆಯಲಾರೆ ಎಂದು
ಹೇಳುವೆನಷ್ಟೇ...

ಆದರೆ
ಮನಸ್ಸಿನ ಬೇಗುದಿಯಲ್ಲಿ
ಕುಳಿತುಕೊಂಡಿರುವ
ನಿನಗೂ ನನ್ನ ಸಾವಿನ ಜೊತೆಗೆ
ಸಾಯಿಸಲಾರೆ ಚಿಂತಿಸದಿರು
ಸುಖಿಯಾಗಿರು ಎಂದಷ್ಟೇ ಆಶಿಸುವೆ

ಯಾಕೆಂದರೆ
ನನಗಿಂತ ಹೆಚ್ಚು ನಿನ್ನನ್ನು ಪ್ರೀತಿಸಿ
ಆರಾಧಿಸುವವರು ಸಿಗಬಹುದು!

ನಿನ್ನನ್ನು ಪ್ರೀತಿಸದವರ ಮನಸ್ಸಿನಲ್ಲಿ
ನಿನಗೆ ನೀನು ಹುಡುಕಬೇಡ
ಸಿಗದಿರುವುದನ್ನು
ವ್ಯಥೆಪಟ್ಟು ದುಡುಕಬೇಡ
ನಾನೀಗ ಹೋಗುತ್ತಿರುವೆ
ಮತ್ತೆ ನನ್ನನ್ನು ಕರೆಯುವ
ಪ್ರಯತ್ನವನ್ನು ಮಾಡಬೇಡ

ನನ್ನ ಆತ್ಮಕ್ಕೆ ಶಾಂತಿ ಸಿಗಲಿ
ಎಂದಷ್ಟೇ ಹಾರೈಸು
ನೀ ನನ್ನ ಪ್ರೀತಿಸದಿದ್ದರೂ
ಸಂಪೂರ್ಣವಾಗಿ ದ್ವೇಷಿಸು!
ನನ್ನ ಗೋರಿಯ ಮೇಲೆ
ಮುಖವಿಟ್ಟು ಅತ್ತು ಕರೆಯಬೇಡ
ಪ್ರೀತಿಸಿರುವುದಕ್ಕೆ ಮನ್ನಿಸು!!
ನಂಬಿಕೆ-ಪ್ರೀತಿ

ಈ ನಿನ್ನ ಪ್ರೇರಣೆ
ಪ್ರೋತ್ಸಾಹಕ್ಕೆ
ನನ್ನ ಬಳಿ ಕೊಡಲೇನಿದೆ
ವಿಶ್ವಾಸ-ಭರವಸೆಗಳನ್ನು
ಬಿಟ್ಟರೆ?

ಹೂವಿನಂಥ
ಒಂದು ಮನಸ್ಸಿದೆ
ನಿನ್ನ ತುಟಿಗೆ
ಸವರುವ
ಸ್ನೇಹವೆಂಬ
ಸಿಹಿ ಜೇನಿದೆ!

ಅದರಲ್ಲೇ
ನಮ್ಮಿಬ್ಬರ ನಂಬಿಕೆ
ಉಳಿದಿದೆ.

ಸಾರ್ಥಕ ಬದುಕಿನ ಜೀವನ

ಮನಸ್ಸು
ಕನಸು
ಕಲ್ಪನೆ
ವಾಸ್ತವಕ್ಕೆ
ಬರೀ ಸೊಗಸು!

ಈ ಮೂರು
ಮೆಟ್ಟಿಲುಗಳನ್ನು
ದಾಟಿ
ಹೊರಗೆ ಬಂದಾಗ
ಒಂದು ಸುಂದರ ಜೀವನ

ಇಲ್ಲವಾದರೆ ಏರು ಪೇರಿನ
ವಿರಹದ ಗಾಯನ
ದುಡುಕಿದರೆ ದು:ಖ ದುಮ್ಮಾನ

ಪ್ರೀತಿಯಲ್ಲಿ ಎಡವಿದರೆ
ಮರೆಯಲಾಗದ ನೋವೆಂಬ
ಬಹುಮಾನಕ್ಕೆ
ಜೀವನವೆಂಬ ಕಾಣಿಕೆ
ನೀಡಬೇಕು....
ಸಾರ್ಥಕ ಬದುಕಿನ ಸಾಧನೆಗೆ
ಕೈ ಜೋಡಿಸಬೇಕು...!!

ಕಳೆದು ಹೋಗುವತನಕ

ಕವಿತೆಗೆ ಮರು ಜೀವ ತುಂಬಿದ
ನಿನಗೆ ಹೇಗೆ ಮರೆಯಲಿ
ಮರೆತೇನೆಂದರೂ ಮರೆಯಲಾಗದ
ನಿನ್ನಾ ನೆನಪುಗಳೆಂಬ
ಸೌಂದರ್ಯಕ್ಕೆ ಹಚ್ಚಲಾಗುತ್ತಿಲ್ಲ ಕಿಚ್ಚು

ನಿನ್ನ ಪ್ರೀತಿಯೆಂಬ ಮಾಯೆ
ಹುಚ್ಚು ಹಿಡಿಸಿ ಬಿಟ್ಟಿದೆಯೇ
ಎಂಬ ಅನುಮಾನ.!
ನಿನ್ನಾ ಕಿರುನಗು...ವಿಗೂ ನನ್ನ
ಕಂಡರೆ ಅದೇನೋ ಬಿಗುಮಾನ

ಆದರೆ ನಿನಗೆ ನಾ ಪ್ರೀತಿಸಲು
ಆ ದೇವರ ಕರುಣೆ ಇರಲಿಲ್ಲ
ಬಂಧನಗಳೆಂಬ ಸಂಬಂಧಗಳಲ್ಲಿ
ಸಿಲುಕಿರುವ ಜೀವದ ಭಾವನೆಗಳಿಗೆ
ನೀರೆರೆಯಲು ನೀ ಬಿಟ್ಟರೆ
ನನಗೆ ಬೇರಾರು ಬೇಕಿರಲಿಲ್ಲ
ನೀ ಬೇಕು ಎಂಬ ಹಕ್ಕುಗಳಿಗೆ
ಬಿಕ್ಕಳಿಗೆ ಹತ್ತಿರುವುದು ನಿಂತಿಲ್ಲ

ಒಂದು ಮಾತ್ರ ನಿಜ.?
ನೀನೊಂದು ಚೆಲುವಿನ ಖನಿಜ
ತಪ್ಪಿಸಿಕೊಳ್ಳದೇ
ನಿನ್ನನ್ನು ದಕ್ಕಿಸಿಕೊಳ್ಳುವ
ಅವಕಾಶವಾದಿಯಾಗಿ
ನಿನಗಾಗಿ ನನ್ನುಸಿರನ್ನು
ಹಾಗೇ ಹಿಡಿದಿಟ್ಟುಕೊಳ್ಳುವೆ

ನೀ ಬರುವತನಕ
ಈ ಕವಿತೆ ಕಳೆದು
ಹೋಗುವತನಕ
ನಿನ್ನ ಧ್ಯಾನದಲ್ಲಿ ಲೀನವಾಗುವೆ!

ಪ್ರೇರಣೆ

ಬದುಕಿನ ಭರವಸೆಗಳೆಲ್ಲ
ನೆಲಕಚ್ಚಿದಾಗ
ನೀ ಬಂದೆ ಗೆಳತಿ
ಎನ್ನ ಬಾಳಿನಲ್ಲಿ
ಗೋಳಿನ ಕಂತೆಯೇ ಹಾಸಿಗೆಯಾಗಿ
ಹೊದ್ದು ಮಲಗಿರಲು
ನೆಮ್ಮದಿಯಿಲ್ಲದ ಜೀವನ
ಮುದುರಿ ಮೂಲೆ ಸೇರಿದಾಗ
ನಿನ್ನ ಸಾಂತ್ವನದ ನುಡಿಗಳು
ಬಡಿದೆಬ್ಬಿಸದವು ಎಚ್ಚರಿಸಿದವು
ಎಚ್ಚರಾಗುತಿದ್ದೇನೆ ಮತ್ತೆ ಮತ್ತೆ
ನಿನ್ನ ಪ್ರೇರಣೆ, ಪ್ರೋತ್ಸಾಹಕ್ಕೆ...

ನೀನಿಲ್ಲದೇ ಹೋಗಿದ್ದರೆ

ನನಗಾಗಿ ನೀ ಕಾಯದೇ ಇದ್ದಿದ್ದರೆ
ಏನಾಗುತಿತ್ತು ಗೊತ್ತಿರಲಿಲ್ಲ ಪ್ರಿಯೆ
ಈ ಜಗತ್ತು ಶಪತ್ತ್ ತೊಟ್ಟಿತ್ತು
ಮಾರಕಾಸ್ತ್ರಗಳನ್ನು ಹೊತ್ತು
ನನ್ನನ್ನು ಮುಗಿಸಲೆಂಬ ಗತ್ತಿನಿಂದ
ನಿನ್ನದೊಂದು ಕರೆಗೆ; ಧ್ವನಿ ಕೇಳಿ
ಕಾಲ್ಕಿತ್ತು ಓಡಿತ್ತು
ಈಗ ನಾನು ನಿನ್ನ ಭರವಸೆಗಳೆಂಬ
ನೆರಳಿನಲ್ಲಿ ಉಸಿರಾಡುತಿದ್ದೇನೆ

ಜಗವೆಲ್ಲ ಮಲಗಿರಲು

ನಾನು ಎಚ್ಚರಗೊಂಡು
ತಾರೆಗಳನ್ನು ಏಣಿಸುತಿರಲಿಲ್ಲ
ಚಂದ್ರನನ್ನು ನೋಡಿ ಬೆರಗಾಗಲಿಲ್ಲ
ಗೆಳತಿಯ ಮುಖದಲ್ಲಿ
ಕಂಡ ಮಂದಹಾಸದ ನಗೆಯಿಂದ
ದೀಪದ ಬೆಳಕಲ್ಲಿ ಪ್ರಜ್ವಲಿಸುತಿತ್ತು
ಓಡಿ ಹೋದ ಕತ್ತಲನ್ನು
ಅವಳು ಮತ್ತೆ ಹಿಂಬಾಲಿಸಿ ಹೋದಳು
ಅವಳ್ಯಾರೆಂದು ತವಕಿಸಿದ
ಮನಸ್ಸಿಗೆ ಮನದನ್ನೆಯ ಪ್ರೇಯಸಿ ಕಂಡಳು!?

ಮರುಜನ್ಮ ಪ್ರೀತಿಗೆ

ಈ ಬಾನು ಭೂಮಿ ಒಂದಾಗಿ
ಮಳೆ, ಗಾಳಿ, ನೀರು
ಕೊಡುವತನಕ
ನಾವು ಬದುಕಿರಲಾರೆವು
ಎಂದು ಚಿಂತಿಸಬೇಡ
ಆ ಗುಡುಗು, ಸಿಡಿಲಿನ
ಅರ್ಭಟದಲ್ಲಿ ನಮ್ಮಿಬ್ಬರ
ಪ್ರೇಮ ನಿವೇದನೆ
ದೇವರಿಗೆ ಸಲ್ಲಿಸೋಣ
ಮರು ಜನ್ಮ ಕೊಡು
ಪ್ರೇಮಿಗಳಾಗಿ ಬದುಕಲು
ಮಗದೊಮ್ಮೆ ಎಂದು

ಪ್ರೀತಿಯ ಬೆಲೆ ಗೊತ್ತಿಲ್ಲ

ಈ ಪ್ರೀತಿ ಪ್ರೇಮ
ಬರೀ ಹುಡುಗಿಯರಿಗೆ
ಸಂಬಂಧಿಸಿದ್ದಲ್ಲ
ಹುಚ್ಚು ಮನಸ್ಸಿನ
ಹುಡುಗರಿಗೆ
ಅದರ ಬೆಲೆ ಗೊತ್ತಿಲ್ಲ
ತನಗಿಷ್ಟವಾದವಳು
ಸಿಗಲಿಲ್ಲಂತ ಕುಡಿಯುತ್ತಾರೆ
ಅಪ್ಪ ಅಮ್ಮ
ನೋಡಿದ ವರನ ಜೊತೆಗೆ
ಮದುವೆಯಾಗಿ ಜೀವಿಸುತ್ತಾರೆ.!!

ಅವಳು-ಇವಳು

ಕನಸಲೂ ನೀನೆ
ಮನಸ್ಸಲೂ ನೀನೆ
ನನ್ನ ಕಣ್ಣೊಳಗೂ ನೀನೆ
ಎಂದು ಹಗಲಿರುಳು
ಕನವರಿಸುವ ಪ್ರೇಮಿಗೆ
ಕಣ್ಣಿಲ್ಲದ ತಾಯಿಯೊಬ್ಬಳು
ಇದ್ದಳು
ಅವನ ಪಾಲಿಗೆ
ಗೆದ್ದಲ ಹುಳುವಾಗಿದ್ದÀಳು.!

ಅಂತರಾಳದ ಗಾಯ!

ಮತ್ತೆ ಮತ್ತೆ ನೆನಪಾಗಬೇಡ
ನೆಪ ಮಾತ್ರಕ್ಕೆ ಮನಸ್ಸು ಕೊರೆದು
ಮನೆ ಮಾಡಿ ವಾಸಿಸಬೇಡ
ವಾಸಿಯಾಗಲಿಲ್ಲ
ಯಾವುದೇ ಮುಲಾಮನ್ನು ಹಚ್ಚಿದರೂ
ನೀ ಮಾಡಿರುವ ಗಾಯಕ್ಕೆ
ಕೆರೆಯಲೂ ಆಗುವುದಿಲ್ಲ
ಕಾರಣ ಅಂತರಾಳದಲ್ಲಿ ಆದ
ಗಾಯ ನಿನಗೂ ಕಾಣದೇ
ಉಳಿಯಿತಲ್ಲ ಎಂಬ ವಿಪರ್ಯಾಸ
ಕಾಡುತ್ತಿದೆ.....

ನೀನಿಲ್ಲದೇ ಹೋಗಿದ್ದರೆ

ಕಾಯದೇ ಇದ್ದಿದ್ದರೆ ನಿನಗಾಗಿ
ಏನಾಗುತಿತ್ತು ಗೊತ್ತಿರಲಿಲ್ಲ ಪ್ರಿಯೆ
ಈ ಜಗತ್ತು ಶಪತ್ತ್ ತೊಟ್ಟಿತ್ತು
ಮಾರಕಾಸ್ತ್ರಗಳನ್ನು ಹೊತ್ತು
ನನ್ನನ್ನು ಮುಗಿಸಲೆಂಬ ಗತ್ತಿನಿಂದ
ನಿನ್ನದೊಂದು ಕರೆಗೆ; ಧ್ವನಿ ಕೇಳಿ
ಕಾಲ್ಕಿತ್ತು ಓಡಿತ್ತು
ಈಗ ನಾನು ನಿನ್ನ ಭರವಸೆಗಳೆಂಬ
ನೆರಳಿನಲ್ಲಿ ಉಸಿರಾಡುತಿದ್ದೇನೆ

ಜಗವೆಲ್ಲ ಮಲಗಿರಲು

ನಾನು ಎಚ್ಚರಗೊಂಡು
ತಾರೆಗಳನ್ನು ಏಣಿಸುತಿರಲಿಲ್ಲ
ಚಂದ್ರನನ್ನು ನೋಡಿ ಬೆರಗಾಗಲಿಲ್ಲ
ಗೆಳತಿಯ ಮುಖದಲ್ಲಿ
ಕಂಡ ಮಂದಹಾಸದ ನಗೆಯಿಂದ
ದೀಪದ ಬೆಳಕೊಂದು ಪ್ರಜ್ವಲಿಸುತಿತ್ತು
ಓಡಿ ಹೋದ ಕತ್ತಲನ್ನು
ಅವಳು ಮತ್ತೆ ಹಿಂಬಾಲಿಸಿ ಹೋದಳು
ಅವಳ್ಯಾರೆಂದು ತವಕಿಸಿದೆ
ಮನದನ್ನೆಯ ಪ್ರೇಯಸಿ ಕಂಡಳು!?

ಇಪ್ಪತ್ತೆರಡು ಹನಿಗವನಗಳು

23.    ವಿಪರ್ಯಾಸ
ಯಾರನ್ನೂ ಕೂಡ
ಮೆಚ್ಚಿಸಲಿಕ್ಕಾಗಿ
ನಾನು ಬರೆಯುವುದಿಲ್ಲ
ಕಾರಣ ಮೆಚ್ಚಿ ಬಂದವಳೇ
ನಾ ಬರೆಯುವದನ್ನು ಮೆಚ್ಚಲಿಲ್ಲ

24.    ನೆನಪುಗಳು
ನಿನ್ನ ನೆನಪುಗಳೇ ಹಾಗೆ
ಎಲ್ಲಿಂದಲೋ ಬಂದು
ಮೌನವಾಗಿ ತಬ್ಬಿಕೊಳ್ಳುವ
ತಂಗಾಳಿಯಂತೆ

25.    ಹಾಳೆಗಳು
ಖಾಲಿ ಹಾಳೆಯಂತಲ್ಲ
ಈ ಬದುಕು
ಬರೆದಂತೆಲ್ಲ ಹಾಳೆಗಳು
ತುಂಬು ಬಸುರಿ
ತನ್ನ ಪ್ರಸವ ಕಾಲದ ನಿರೀಕ್ಷೆ
ಓದುಗನ ಮುಂದಿಡುತ್ತವೆ

26.    ಪ್ರತಿಮೆಗಳು
ಗಾಂಧಿ ತತ್ವ-ಆದರ್ಶಗಳು
ಯಾರಿಗೆ ಬೇಕು..?
ಹೋರಾಟ ಪ್ರತಿಭಟನೆಗೆ
ಮಹಾತ್ಮರ ಪ್ರತಿಮೆಗಳು
ಸಾಕು.....




27.    ಮೆರವಣಿಗೆ
ಬುದ್ಧ, ಬಸವ, ಅಂಬೇಡ್ಕರ್-
ಗಾಂಧಿ ವೃತ್ತಗಳಲ್ಲಿ
ಸಾಗುತ್ತಿವೆ
ಪ್ರತಿಭಟನೆ, ಕೂಗು
ಮೌನ ಮೆರವಣಿಗೆ
ಅಲ್ಲಲ್ಲೇ ಸಿಡಿದೇಳುತ್ತಿವೆ
ದ್ವೇಷ, ಅಸೂಯೆ
ಹೊಟ್ಟೆ ಕಿಚ್ಚಿನ ಹೊಗೆ

28.    ಮೌನ ವಿಷಾದ
ಮನದಲ್ಲೇ ನೆನದು
ಕೊಂದು ಬಿಡುವ
ಭಾವನೆಗಳು
ನಿಗೂಢ ಪ್ರೇಮ!
ತುಟಿ ಸೋಕಿ
ಮೈ ಮುಟ್ಟುವ
ಮನಸ್ಸಾದರೆ
ಅದು ಕಾಮ?!

29.    ಕಾವ್ಯ
ನೀನಿಲ್ಲದ ಕಾವ್ಯ
ಅಪೂರ್ಣ
ನೀನಿರುವಾಗ ಗೆಳತಿ
ಪರಿಪೂರ್ಣ ಕವಿತೆ

30.    ಗುರಿ
ಸಾವಿಗೆ ಒಂದೇ ಗುರಿ
ಸ್ಮಶಾನ!
ಸಾಧನೆಗೆ
ನೂರೆಂಟು ಗುರಿ
ಜೀವನ!!

31.    ಸ್ಫೂರ್ತಿ
ಬದುಕುವ ಆಸೆ
ನನಗೆ
ನಿನ್ನಿಂದ ಇದ್ದರೆ
ಮಾತ್ರ ಸ್ಫೂತಿ!

32.    ಹೇಗಿರಲಿ
ನಶೆ ತುಂಬಿದ
ನಿನ್ನ ನೆನಪುಗಳಿಗೆ
ಮುತ್ತುಗಳ
ಆಸರೆಯಿಲ್ಲದೆ
ಹೇಗಿರಲಿ ಗೆಳತಿ

33.    ಸ್ವತಾಂತ್ರ್ಯ
ಅರೆ
ಬೆತ್ತಲೆಯಾಗಿ
ಓಡಾಡಿದ ಗಾಂಧಿ
ದೇಶದ
ಸ್ವಾತಂತ್ರ್ಯಕ್ಕಾಗಿ
ಬೆತ್ತಲಾಗುತ್ತಿದ್ದಾಳೆ
ನಾರಿ
ಸ್ವತಂತ್ರ ಜೀವನಕ್ಕಾಗಿ

34.    ಗಾಂಧಿ
ನೀ ಹುಟ್ಟಿದಿದ್ರ
ಈ ಕಾಲಕ್ಕ
ಬೆತ್ತಲಾದವರ
ಸಂಘ
ಕಟ್ಟಿಕೊಳ್ಳಬಹುದಿತ್ತು

35.    ಅರೆ ಬೆತ್ತಲೆ
ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ಬಂದು ಹೋದ
ನಡುವೆಯು
ಗಾಂಧಿ
ಒಬ್ಬನೇ
ಅರೆ ಬೆತ್ತಲೆ!

36.    ಚಿತ್ತ
ಬೆತ್ತಲಾಗಿ
ಎಲ್ಲರ ಚಿತ್ತ
ತನ್ನತ್ತ ಹರಿಸಿದಾತ
ಗಾಂಧಿ
ಅವನ ತತ್ವಕ್ಕೆ ಎರಚಿದ್ದೇವೆ
ಬೂದಿ!!

37.    ಗಾಂಧಿ
ನೀನೆ
ಬೆತ್ತಲಾದ ಮೇಲೆ
ನಮ್ಮದ್ಯಾವ ಲೆಖ್ಖ!
ಅದಕ್ಕಾಗಿ
ನಿನ್ನ ತತ್ವ
ಒಂದಿಷ್ಟು
ಭಿನ್ನವಾಗಿಸಿಕೊಂಡು
ಗಳಿಸುತಿದ್ದೇವೆ
ರೊಕ್ಕ!!

38.    ಕಾಡತಾನ
ಕೋಲು
ಕನ್ನಡಕ
ಅರೆ!
ಬೆತ್ತಲೆಯಾಗಿ
ಕಾಡತಾನ
ಮುದುಕ!!

39.    ಬಿಟ್ಟು ಕೊಡಲಾಗುತ್ತಿಲ್ಲ

ನಿನ್ನ ಆ ನಗು
ಬಿಗುಮಾನ
ಕಂಡರೆ ನನಗೇನೋ
ಅಭಿಮಾನ
ಪ್ರೀತಿಸಲು ಆಗದೇ
ಒಳ ಮನಸ್ಸಿನ ತುಡಿತಕ್ಕೆ
ನಿನ್ನನ್ನು ಬಿಟ್ಟು
ಕೊಡಲಾಗುತ್ತಿಲ್ಲ!

40.    ಪ್ರೀತಿಯ ಭಾಷೆ

ಮನಸ್ಸಿನ ಭಾವನೆಗಳಲ್ಲಿ
ಪ್ರೀತಿಯೆಂಬ ಭಾಷೆ ಬರೆದು
ಕಾರಣಗಳಿಲ್ಲದೇ
ಹುಟ್ಟುವ ಪ್ರೀತಿಗೆ
ಉತ್ತರವನ್ನು ಕೊಡುವೆಯಾ
ಗೆಳತಿ...



41.    ಮನಸ್ಸಿನ ಭಾಷೆ

ಅರಳುವ ಹೂ
ಕಮರಿ ಹೋಗುವ
ಮುನ್ನ ಮುಡಿದುಕೊಳ್ಳಬೇಕು
ಪ್ರೀತಿಯ ಕಾವು
ಆರುವ ಮುನ್ನ
ಭಾವನೆಗಳೆಂಬ
ಮನಸ್ಸಿನ ಭಾಷೆ
ಬರೆಯಬೇಕು.

42.    ಕವಿತೆ!
ಕವಿತೆ
ನೀನೇಕೆ
ನನ್ನವಳ
ಸೌಂದರ್ಯದಲ್ಲಿ
ಅವಿತು
ಕುಳಿತೆ?


43.    ನಾನಿರದಿರುವಾಗ
ನಿನ್ನಿಂದ ನಾನು
ಅಗಲಿ ಹೋಗುತ್ತಿರುವೆ
ಎಂದು ಬೇಸರಿಸಬೇಡ
ನನ್ನ ನೆನಪುಗಳ ಆಸರೆಯಲ್ಲಿ
ಒಂದಿಷ್ಟು ದಿನ ಕಳೆದು ಹೋದ ಬಳಿಕ?
ನಿರಾಸೆಯ ಭಾವಗಳೊಂದಿಗೆ ಜೀವಿಸಬೇಡ


44.    ಅವನಿಗಿಷ್ಟವಿಲ್ಲ
ನೀನೆಂದರೆ ನನಗ್ಯಾಕೋ
ಬಲು ಪ್ರೀತಿ
ಕೊನೆಗೂ ಒಂದಾಗಿಸಲಿಲ್ಲ
ಆ ದೇವರು ನಮ್ಮಿಬ್ಬರ
ಖರೇ ಮನಸ್ಸಿನ ಪ್ರೇಮಿಗಳಂದ್ರ
ಅವನಿಗಿಷ್ಟ ಇರಲಿಲ್ಲ


ಗುರುವಾರ, ಜನವರಿ 23, 2014

ಗಾಂಧಿ ಆಗ್ಬೇಕಂದುಕೊಂಡಾಗ


ಗಾಂಧಿ ಆಗ್ಬೇಕಂದುಕೊಂಡಾಗ
(ಕವನ ಸಂಕಲನ)




ವೀರಣ್ಣ ಮಂಠಾಳಕರ್









ಪ್ರಕಾಶಕರು
ಹುವಪ್ನೋರ್ ಪ್ರಕಾಶನ, ಮಂಠಾಳ
ತಾ: ಬಸವಕಲ್ಯಾಣ, ಬೀದರ ಜಿಲ್ಲೆ-585419



ಲೇಖಕರು:          ವೀರಣ್ಣ ಮಂಠಾಳಕರ್

ಪುಟಗಳು:

ಪ್ರಥಮ ಮುದ್ರಣ:    2010, ಏಪ್ರಿಲ್

ಪ್ರತಿಗಳು:               1000

ಬೆಲೆ:                       60/. (ಆರವತ್ತು ರುಪಾಯಿಗಳು)

ಅಕ್ಷರ ಜೋಡಣೆ: ವೀರಣ್ಣ ಮಂಠಾಳಕರ್

ಮುದ್ರಣ: ವಿಶ್ವಾಸ ಪ್ರಿಂಟ್ಸ್, ಬೆಂಗಳೂರು








ಅರ್ಪಣೆ
ಅಕಾಲಿಕ ಮರಣಕ್ಕೆ ತುತ್ತಾಗಿ,
ಬದುಕೇನೆಂಬುದನ್ನು ಕೂಡ ಅರಿಯದ ಹೊತ್ತಿಗೆ
ಅನಾಥನನ್ನಾಗಿ ಮಾಡಿ ಹೋದ ತಂದೆಗೆ.
ಕೂಡಿ ಬಾಳುವ ಸಂಕಲ್ಪವನ್ನು ಮಾಡಿ,
ಕಣ್ಮರೆಯಾಗಿ ಹೋದ ಅಣ್ಣ ಹುವಪ್ಪನಿಗೆ,
ಕಣ್ಣೀರಿನ ಕಡಲಲ್ಲಿ ಮುಳುಗಿಸಿ,
ಬದುಕಿನ ಏರಿಳಿತವೆಂಬ
ಜೀವನದಿಯಲ್ಲಿ ಜೀವಿಸಲು ಕಲಿಸಿದ ಇಬ್ಬರಿಗೂ...
ಕೃತಿ ಅರ್ಪಣೆ...
ವೀರಣ್ಣ ಮಂಠಾಳಕರ್


ಬದುಕಿನ ಕೌದಿಗೆ ಕಾವ್ಯದ ಕಸೂತಿ

ಬದುಕಿದ್ದವರು ಬರೆಯಬಹುದು
ಬರೆದು ಬದುಕಬಹುದು

ವೀರಣ್ಣ ಮಂಠಾಳಕರ್ ಅವರಬದುಕು-ಬರಹಸಂಕಲನದ ಹಸ್ತಪ್ರತಿಯನ್ನು ಮುಂದಿಟ್ಟುಕೊಂಡು ಸಮಕಾಲೀನ ಕಾವ್ಯದ ಚಹರೆಯ ಬಗ್ಗೆ ಯೋಚಿಸುತ್ತಿರುವ ನನ್ನನ್ನು ಮೊದಲ ಓದಿಗೇ ಸೆಳೆದ ಸಾಲುಗಳಿವು. ‘ಬದುಕಿದ್ದವರು ಬರೆಯಬಹುದು/ ಬರೆದು ಬದುಕಬಹುದುಎನ್ನುವ ಸಾಲುಗಳಲ್ಲಿ ಆಶಾವಾದದ ಜೊತೆಗೆ ನಿರಾಶೆಯೂ ಇದೆಯಲ್ಲವೇ? ಬರವಣಿಗೆಗೆ ಬೇಕಾದ ಪ್ರಾಥಮಿಕ ಅಗತ್ಯಗಳಲ್ಲಿ ಮುಖ್ಯವಾದದ್ದುಜೀವಂತವಾಗಿರುವುದುಎನ್ನುವ ಮಾತಿನ ಹಿಂದೆ ಹಲವು ಅರ್ಥಗಳು ಇವೆಯೆಂದು ನನಗನ್ನಿಸುತ್ತಿದೆ. ಇಲ್ಲಿನ ಬದುಕು ದೇಹದ ಭೌತಿಕ ಅಸ್ತಿತ್ವಕ್ಕೆ ಸಂಬಂಧಿಸಿದುದಲ್ಲ; ಮಾನಸಿಕ ಜೀವಂತಿಕೆಗೆ ಸಂಬಂಧಿಸಿದ ಮಾತಿದು. ಹಾಗೆ ನೋಡಿದರೆ ಜೀವಂತ ಇರುವುದರಲ್ಲಿ ವಿಶೇಷವೇನೂ ಇಲ್ಲ. ನಾವು ಬದುಕುವ ರೀತಿಜೀವನಕ್ಕೆ ಅರ್ಥತುಂಬುತ್ತದೆ. ಬದುಕುವ ರೀತಿಯಲ್ಲಿ ಕಾವ್ಯವೂ ಒಂದು ಮಾರ್ಗ! ನಮ್ಮ ಬದುಕಿನ ರೀತಿ ಅರ್ಥಪೂರ್ಣ ಹಾಗೂ ಮಾನವೀಯವಾಗಿದ್ದಲ್ಲಿ ಕವಿತೆ ಜೀವಂತವಾಗಿರುತ್ತದೆ; ಇಲ್ಲವೇ ಅದು ಜೀವರಹಿತ ಸಾಲುಗಳ ಗುಚ್ಛವಾಗಿಬಿಡುತ್ತದೆ. ಇಂಥದೊಂದು ಸಾಧ್ಯತೆಯನ್ನು ಮಂಠಾಳಕರರ ಸಾಲುಗಳು ಧ್ವನಿಸುತ್ತಿರಬಹುದೇ?
ಬರೆದು ಬದುಕಬಹುದು ಎನ್ನುವ ಸಾಲಿನ ಸಾಧ್ಯತೆಯನ್ನು ಗಮನಿಸೋಣ. ಬರವಣಿಗೆಯ ಮೂಲಕ ಆರ್ಥಿಕವಾದ ಬದುಕನ್ನು ಕಾಣುವುದು ಪ್ರಸ್ತುತ ಕನ್ನಡದ ಸಂದರ್ಭದಲ್ಲಂತೂ ಅಸಾಧ್ಯ. ಹಾಗಾಗಿ, ಬರವಣಿಗೆಯೊಂದಿಗೆ ತಳುಕು ಹಾಕಿಕೊಂಡ ಇಲ್ಲಿನ ಬದುಕು ಭಾವಲೋಕಕ್ಕೆ ಸಂಬಂಧಿಸಿದ್ದು. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಸಾಹಿತ್ಯ ನೀಡಬಹುದಾದ ಪೌಷ್ಟಿಕಾಂಶಗಳಿಗೆ ಸಂಬಂಧಿಸಿದ್ದು. ಐಕಾನ್ಗಳೆಲ್ಲ ಹುಸಿಯಾಗುತ್ತಿರುವ ಸಂದರ್ಭದಲ್ಲಿ ಸಾಹಿತ್ಯವೇ ನಮ್ಮಗಳ ಬದುಕಿಗೆ ದೀವಿಗೆಯಾದಬಹುದಾದ ಸಾಧ್ಯತೆಯೇ ಇಲ್ಲಿನಬರೆದು ಬದುಕಬಹುದು’. ( ಸಾಲನ್ನು ಓದಿ ಬದುಕಬಹುದು ಎಂದರೆ ಇನ್ನೂ ಚೆನ್ನಾಗಿರುತ್ತದೆ).
ಬದುಕಿದ್ದವರು ಬರೆಯಬಹುದು/ ಬರೆದು ಬದುಕಬಹುದುಎನ್ನುವ ಸಾಲುಗಳು ವೀರಣ್ಣನವರ ಒಟ್ಟಾರೆ ಕಾವ್ಯದ ಆಶಯದಂತೆಯೂ ನನಗೆ ಕಾಣಿಸುತ್ತದೆ. ಕನ್ನಡ ಸಾಹಿತ್ಯದ ಬೆಳೆಯಲ್ಲಿಂದು ಎದ್ದುಕಾಣುತ್ತಿರುವುದು ಕಾವ್ಯದ ಫಸಲು. ವೀರಣ್ಣನವರಂಥ ನೂರಾರು ಯುವಕರು ಕವಿತೆ ಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯವಾಗಿ, ಗ್ರಾಮೀಣ ಭಾಗದ ತರುಣ ತರುಣಿಯರು ಕಾವ್ಯದ ಕನಸು ಕಾಣುತ್ತಿದ್ದಾರೆ. ನನ್ನ ಗಮನಕ್ಕೆ ಬಂದಂತೆ ಇಂಥ ಬಹುತೇಕ ಯುವಕವಿಗಳ ಬದುಕು ನಾಳೆಯ ಬಗ್ಗೆ ಸ್ಪಷ್ಟ ಪರಿಕಲ್ಪನೆಯಿಲ್ಲದ ಅತಂತ್ರದ್ದು. ಇಂಥ ಸಂದಿಗ್ಧದಲ್ಲಿ ಇವರೆಲ್ಲರೂ ಕಾವ್ಯದ ಕನಸು ಕಾಣಲು ಸಾಧ್ಯವಾಗುತ್ತಿರುವುದು ನನಗೆ ಸೋಜಿಗದ ಸಂಗತಿಯೂ ಹೌದು, ಆನಂದದ ಸಂಗತಿಯೂ ಹೌದು. ಸಾಹಿತ್ಯ ಹೊಟ್ಟೆ ತುಂಬಿಸುವುದಿಲ್ಲ, ಆದರೆ ಮನಸ್ಸು ತುಂಬಿಸುತ್ತದೆ! ಅವಮಾನಗಳನ್ನು ಮೀರುವ, ಹಸಿವನ್ನು ಗೆಲ್ಲುವ, ಆದರ್ಶಗಳನ್ನು ಕನವರಿಸುವ, ಭರವಸೆಗಳೆಲ್ಲ ಹುಸಿಯಾದ ಸಂದರ್ಭದಲ್ಲೂ ನಾಳೆಯ ಬಗ್ಗೆ ಕನಸುಗಳನ್ನು ಉಳಿಸುವ ಮಾಧ್ಯಮವಾಗಿ ಸಾಹಿತ್ಯ-ಕಾವ್ಯ ಕನ್ನಡದ ಯುವಪೀಳಿಗೆಗೆ ಮುಖ್ಯವೆನ್ನಿಸುತ್ತಿದೆ. ಇದು ಆರೋಗ್ಯಕರ ಸಮಾಜದ ಲಕ್ಷಣವೆಂದು ನನ್ನ ನಂಬಿಕೆ.
ಹೊತ್ತಿನ ಸಾಹಿತ್ಯ ಮತ್ತು ಬದುಕುಗಳ ಸಂಬಂಧವನ್ನು ಪ್ರಸ್ತಾಪಿಸಲಿಕ್ಕೆ ಕಾರಣ, ನಂಟು ವೀರಣ್ಣನವರ ಕಾವ್ಯದ ಹಿನ್ನೆಲೆಯೂ ಆಗಿರುವುದು. ವೀರಣ್ಣನವರ ಪಾಲಿಗೆ ಕವಿತೆ ಎನ್ನುವುದು ತುಂಬು ಭರವಸೆಯ ವ್ಯವಸಾಯ. ಬದುಕಿನ ನೋವು ನಲಿವುಗಳಿಗೆ ಸುಲಭವಾಗಿ ಒದಗಿಬರುವ ಅಭಿವ್ಯಕ್ತಿ. ‘ಸುಲಭವಾಗಿಎನ್ನುವ ಪದವನ್ನು ನಾನಿಲ್ಲಿ ಉದ್ದೇಶಪೂರ್ವಕವಾಗಿ ಬಳಸುತ್ತಿದ್ದೇನೆ. ಏಕೆಂದರೆ ವೀರಣ್ಣನವರಿಗೆ ಕವಿತೆ ಎನ್ನುವುದು ಕಾಡುವ, ಕಾಡಿಸುವ ಸೃಜನಶೀಲ ಕ್ರಿಯೆಯಲ್ಲ. ಅವರ ಕವಿತೆ ಏಕಾಂತದ ಧ್ಯಾನವೂ ಆದಂತೆ ಕಾಣುತ್ತಿಲ್ಲ. ದೈನಿಕದ ಅಗತ್ಯಗಳಿಗೆ ಸರಾಗವಾಗಿ ಒದಗಿಬರುವ ದ್ರವ್ಯಗಳಂತೆ ವೀರಣ್ಣನವರಿಗೆ ಕಾವ್ಯ ಒದಗಿಬಂದಿದೆ, ಬರುತ್ತಿದೆ. ಕಾರಣದಿಂದಲೇ ಇಲ್ಲಿ ಬೌದ್ಧಿಕ ಸಂವಾದವನ್ನು ಕಾಣಲಾರೆವು. ಇಲ್ಲಿನದು ಭಾವನೆಗಳ ಮೆರವಣಿಗೆ.

ಮೇಲಿನ ಮಾತುಗಳನ್ನು ವೀರಣ್ಣನವರ ಕಾವ್ಯದ ಮಿತಿ ಎನ್ನುವ ದೃಷ್ಟಿಯಲ್ಲಿ ನಾನು ಹೇಳುತ್ತಿಲ್ಲ. ಅವರ ಕಾವ್ಯದ ಗ್ರಹಿಕೆಯ ದೃಷ್ಟಿಯಿಂದ ನನಗೆ ಕಾಣಿಸಿದ ಲಕ್ಷಣಗಳಿವು. ನಾನಿಲ್ಲಿ, ಕವಿತೆಯ ಶಿಲ್ಪ, ಮಹತ್ವಾಕಾಂಕ್ಷೆ, ಸಿದ್ಧಿಯ ಚೌಕಟ್ಟಿನಲ್ಲಿ ವೀರಣ್ಣನವರ ಕವಿತೆಗಳನ್ನು ನೋಡುತ್ತಿಲ್ಲ. ಹಾಗೆ ನೋಡುವುದಿಲ್ಲಿ ಸಾಧ್ಯವೂ ಇಲ್ಲ. ನನ್ನ ಪ್ರಯತ್ನ ಕವಿತೆಗಳ ಹಿಂದೆ ಇರಬಹುದಾದ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸಾಹಿತ್ಯದ ಮೂಲಕ ಇಂಥ ಮನಸ್ಸುಗಳಿಗೆ ದೊರೆಯುತ್ತಿರಬಹುದಾದ ನೆಮ್ಮದಿಯನ್ನು ಅರ್ಥಮಾಡಿಕೊಳ್ಳುವುದು.
ವೀರಣ್ಣನವರದು ಯಾವ ವಸ್ತುವಿನ ಮೇಲಾದರೂ ಕವಿತೆ ಕಟ್ಟುತ್ತೇನೆನ್ನುವ ಉತ್ಸಾಹ. ಪ್ರೇಮ, ಸಾವು, ಸ್ಫೂರ್ತಿ, ಸಂಗಾತಿ, ಮೌಲ್ಯಗಳು, ಗಾಂಧಿ, ರೈತನ ಸಂಕಷ್ಟಗಳು- ಹೀಗೆ ಎಲ್ಲ ವಸ್ತುಗಳಿಗೂ ಅವರು ಕವಿತೆಯ ಅಂಗಿ ತೊಡಿಸಬಲ್ಲರು. ಸಂದಿಗ್ಧತೆಯಿಲ್ಲದ ಅವರ ಕಾವ್ಯದಲ್ಲಿ ಚಿತ್ರಕ ಶಕ್ತಿಯೂ ಇದೆ. ‘ನೆನಪಿನ ಹೂಮಳೆಎನ್ನುವ ಕವಿತೆಯಲ್ಲಿನ ಗಮನಸೆಳೆಯುವ ಚಿತ್ರವೊಂದನ್ನು ನೋಡಿ-
ನಿನ್ನ ನೆನಪುಗಳೆಂದರೆ ಗೆಳತಿ
ಕಾಣದ ದೇವರನ್ನು ಧ್ಯಾನಿಸುತ್ತ
ಧ್ಯಾನದಲ್ಲಿ ಲೀನವಾಗಿ ವರವೊಂದು-
ಪಡೆದ ಖುಷಿ, ಸಂಭ್ರಮ.
ನನ್ನ ಕವಿತೆಗಳಿಗೆ ಮೂಲಪ್ರೇರಣೆಯೆಂದರೆಆಸೆ, ನಿರಾಸೆ, ಭಗ್ನಪ್ರೀತಿ, ಮುರಿದುಬಿದ್ದ ಕನಸು, ಬಡತನಎಂದು ಪಟ್ಟಿನೀಡುವ ಕವಿ, ಗಾಂಧಿಯ ಬಗ್ಗೆ ಬರೆದಿರುವುದು ಕುತೂಹಲಕರವಾಗಿದೆ. ‘ಗಾಂಧಿ ಆಗ್ಬೇಕಂದುಕೊಂಡಾಗ...’ ಎನ್ನುವ ಕವಿತೆ ಸಂಕಲನದ ಒಳ್ಳೆಯ ಕವಿತೆಗಳಲ್ಲೊಂದು. ಗಾಂಧಿ ಆಗುವ ಹಂಬಲವಿದ್ದರೂ, ಆಗುವ ಹಾದಿಯಲ್ಲಿನ ಕಷ್ಟ ಅವರನ್ನು ಕಂಗೆಡಿಸುತ್ತದೆ. ಗಾಂಧಿಯಂತೆ ತುಂಡುಬಟ್ಟೆ ತೊಟ್ಟರೆ ಜನ ಏನೆಲ್ಲ ಕಥೆಗಳನ್ನು ಕಟ್ಟಬಹುದು, ಗಾಂಧಿಯಂತೆ ಆಸರೆಗೆ ಕೋಲು ಹಿಡಿದರೆ ಅದು ಏನೆಲ್ಲ ಕೋಲಾಹಲಕ್ಕೆ ಕಾರಣವಾಗಬಹುದು, ದಪ್ಪ ಕನ್ನಡಕ ತೊಟ್ಟರೆ ಜನ ಕುರುಡನೆಂದೇ ತಿಳಿದು ಗುಂಡಿಡಬಹುದು- ಹೀಗೆ ಬೆಳೆಯುವ ಕವಿತೆ ಗಾಂಧಿ ನಮ್ಮಿಂದ ದೂರವಾಗುತ್ತಿರುವ ಬಗೆಯನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಗಾಂಧಿ ಆಗಬೇಕೆಂದುಕೊಂಡಾಗಲೆಲ್ಲ ಅವರನ್ನು ಕಾಣುವುದು ಹುತಾತ್ಮನಾಗುವ ಭಯ:

ಗಸ್ತು ತಿರುಗುತ್ತಾ, ಸತ್ಯ ಶೋಧನೆಗೆ
ಗುಂಡಿಟ್ಟು ಕೊಲ್ಲಲು, ಹುಡುಕಾಟ ನಡೆಸುತ್ತಾರೆಂಬ ಚಿಂತೆ!’
ಸತ್ಯಶೋಧನೆಯ ನೆಪದ ಗುಂಡುಗಳ ವೀರಣ್ಣನವರ ಭಯ ಹೊತ್ತಿನ ಎಲ್ಲ ಸೃಜನಶೀಲರದೂ ಅಲ್ಲವೇ? ಭಯದ ನಡುವೆಯೂ ಕವಿ, ‘ಆದರ್ಶವಾದಿಗಳೇ ಕೇಳಿಎಂದು ಕಟುವಾಸ್ತವವನ್ನು ಚಿತ್ರಿಸಲು ಹಿಂದೆಮುಂದೆ ನೋಡುವುದಿಲ್ಲ:
ಈಗೇನಿದ್ದರೂ... ಬಾಂಬು ಬಂದೂಕು ಮಾತನಾಡುತ್ತವೆ
ಗಾಂಜಾ ಅಫೀಮುಗಳಿಗೆ ಬೇಡಿಕೆ ಹೆಚ್ಚಾಗಿದೆ
ಒಡೆದ ಕನ್ನಡಿಯಲ್ಲಿಯೇ ಕಾಣಬೇಕಾಗಿದೆ
ನೀವು ಬಿಟ್ಟುಹೋದ ಆದರ್ಶ, ತತ್ವಗಳ ಕಾಣಿಕೆ.
ಬದುಕನ್ನು ಸುತ್ತುವರೆದ ಹಲವು ತಲ್ಲಣಗಳ ನಡುವೆಯೂ ಪ್ರೇಮದ ಮಕರಂದ ಕವಿಯಲ್ಲಿ ಉತ್ಸಾಹ ತುಂಬುತ್ತದೆ. ಪ್ರೇಮದ, ಪ್ರೇಮಿಯ ನೆನಪಾದಾಗಲೆಲ್ಲ ವೀರಣ್ಣನವರ ಕವಿ ಗೇಯತೆಯತ್ತ ವಾಲುತ್ತದೆ. ‘ನೆನಪುಗಳು ಮನಸ್ಸಿಗೆ ಮುದ ನೀಡುವ ಮಲ್ಲಿಗೆ ಕಂಪುಎನ್ನುವ ಕವಿ, ‘ಹರಿದು ಹೋದ ಬದುಕಿನ ಕೌದಿಯನ್ನು ಹೊಲಿ. ಬಾಎಂದು ಸಂಗಾತಿಯನ್ನು ಆಹ್ವಾನಿಸುತ್ತಾರೆ. ‘ನೀನಿಲ್ಲದಿದ್ದರೆ ನನ್ನ ಬಳಿ ನಾ ಹೇಗೆ ಬದುಕಲಿಎಂದು ಸಿನಿಮೀಯವಾಗಿ ಸಖಿಯನ್ನು ಓಲೈಸುತ್ತಾರೆ. ಇಂಥ ಅನುನಯದ ನಡುವೆಯೇ ವಿರಹದ ಬೇಗೆಯೂ, ಪ್ರೀತಿಯ ಕುರಿತ ಜಿಜ್ಞಾಸೆಗಳೂ ಅವರನ್ನು ಕಾಡುತ್ತವೆ.
ಹೊಸ ಕವಿತೆಯ ಸಂಸ್ಕøತಿಎನ್ನುವ ಕವನದಲ್ಲಿ ತನ್ನ ಪ್ರೇಮವನ್ನು ನಿವೇದಿಸಿಕೊಳ್ಳುತ್ತ ಕವಿತೆಯ ಕೊನೆಗೆ ಕವಿ ಹೇಳುತ್ತಾರೆ-
ಭಾವ ನೀನು, ಬಂಧನ ನಾನು
ಸವಿಯೋಣ ಬಾರೇ ಪ್ರೀತಿಯ ಹನಿಜೇನು
ಕೂಡಿಕೊಂಡು ಕಲಿಯೋಣ, ಬದುಕಿನ ಕೌದಿ
ಹೊಲಿಯುವ ಕಸೂತಿ; ಹೊಸೆದಂತೆ ಒಂದು
ಹೊಸ ಕವಿತೆಯ ಸಂಸ್ಕøತಿ.
ಪ್ರೇಮತುಡಿತದ ಕವಿತೆಯಲ್ಲಿ ಆಕಸ್ಮಿಕವಂತೆ ಬರುವಹೊಸ ಕವಿತೆಯ ಸಂಸ್ಕøತಿಎನ್ನುವ ಸಾಲು ಕುತೂಹಲ ಹುಟ್ಟಿಸುವಂತಿದೆ. ಬಹುಶಃ, ಎಲ್ಲ ಕಾಲದ ಕವಿತೆಯ ಹಂಬಲವೂ ಪರಂಪರೆಯ ಭಾಗವಾಗುವುದು, ಹಾಗೆ ಗುರ್ತಿಸಿಕೊಳ್ಳುತ್ತಲೇ ಹೊಸ ಜಾಡನ್ನು ಮೂಡಿಸುವುದು. ಹಂಬಲ ವೀರಣ್ಣನವರ ಕವಿತೆಯಲ್ಲಿ ಕಾಣಿಸಿಕೊಂಡಿರುವುದು ಅನಿರೀಕ್ಷಿತವಾಗಿರಬಹುದು. ಆದರೆ, ಮುಂದಿನ            ದಿನಗಳಲ್ಲಿ ಅವರಿಗದು ಅಪೇಕ್ಷಿತವಾಗಬೇಕು. ವ್ಯಕ್ತಿಯೊಬ್ಬನ ಬದುಕಿನಲ್ಲಿ ಕವಿತೆಯ ಸಂಭ್ರಮ ತುಂಬಾ ದಿನ ಉಳಿಯುವಂತಹದ್ದಲ್ಲ. ಸಂಭ್ರಮದ ಆಚೆಗಿನ ಅರ್ಥಸಾಧ್ಯತೆಗಳತ್ತ ಕವಿ ಸದಾ ಆಸೆಗಣ್ಣಾಗಿರಬೇಕು. ಅಂಥ ಆಸೆಗಣ್ಣು ಹಾಗೂ ಪ್ರಯತ್ನ ವೀರಣ್ಣನವರದೂ ಆಗಲಿ ಎನ್ನುವ ಆಶಯ ನನ್ನದು.
ವೀರಣ್ಣನವರ ಕವಿತೆಗಳ ಓದು ನನಗೆ ಖುಷಿಕೊಟ್ಟಿದೆ. ಅವರಿಗೆ ಎಲ್ಲ ಯಶಸ್ಸು ದೊರೆಯಲಿ ಎಂದು ಆಶಿಸುವೆ.

-ರಘುನಾಥ ..
ಸೆಪ್ಟೆಂಬರ್ 23, 2009




ನನ್ನ ನುಡಿ
ಕಾವ್ಯ ಕ್ಷೇತ್ರಕ್ಕೆ ಬರುವದಕ್ಕಿಂತ ಮುಂಚೆ ಪ್ರೀತಿಯಲ್ಲಿ ಸೋತರೂ, ಕವಿತೆಗಳನ್ನು ಗೀಚುವ ಗೀಳು ಕೊರತೆಯನ್ನು ಮರೆಸಿದೆ. ಪ್ರೀತಿಗಿಂತ ಹೆಚ್ಚಿನ ಸುಖ-ಸಂತೋಷ, ಅಷ್ಟೇ ನೆಮ್ಮದಿಯಾಗಿ, ಕಷ್ಟದಲ್ಲೂ ದು:ಖವನ್ನು ಮರೆತಿದ್ದೇನೆ. ಕಾವ್ಯವೆಂಬುದು ಪ್ರೇಯಸಿಗಿಂತ ಹೆಚ್ಚು ತೃಪ್ತಿಯನ್ನು ಕೊಡುತ್ತದೆ. ಕಾಮತೃಷೆಯಷ್ಟೇ ಸ್ಖಲನ! ಕವಿಯಾಗಿ, ಕವಿತೆಗಳನ್ನು ಬರೆದು ಮುಗಿಸಿದಾಗ ನಾನು ಅನುಭವಿಸಿದ್ದೇನೆ. ಹೀಗಾಗಿ ಅವಳಿಲ್ಲದ ನೋವು, ನಿವೇದನೆ ಕವಿತೆಗಳಲ್ಲಿ ಹೇಳಿಕೊಂಡಿದ್ದೇನೆ.
ಯಾರನ್ನೂ ಪ್ರೀತಿಸದೇ ಕವಿಯಾಗಲಾರ. ಎಂಬ ಮಾತಿಗೆ ನನ್ನ ಕಾವ್ಯ ಬದುಕು ಅದಕ್ಕೆ ನೆಪ ಅಷ್ಟೆ. 1999 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯವರುಕನ್ನಡ ಕಾವ್ಯ ಪರಂಪರೆ ಕಾವ್ಯ ಕಮ್ಮಟವನ್ನು ಏರ್ಪಡಿಸಿದ್ದರು. ಆಗ ಶಿವಮೊಗ್ಗದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದೆ. ಅಲ್ಲಿಂದ ನನ್ನ ಕಾವ್ಯಕ್ಕೆ ಒಂದು ರೀತಿ ಪಂಚ್ ಕೊಡಲು ಸಾಧ್ಯವಾಯಿತು. ಅಲ್ಲಿ ಹಲವು ಕವಿಗಳ, ಸಾಹಿತ್ಯಾಸಕ್ತರ ಪರಿಚಯವಾಯ್ತು. ಆಗತಾನೆ ಬರೆಯುತಿದ್ದ ಅನೇಕರು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದರು. ಸಂದರ್ಭದಲ್ಲಿ ಪತ್ರಕರ್ತ, ಸಾಹಿತಿಗಳಾದ ಮಹಿಪಾಲರೆಡ್ಡಿ ಮುನ್ನೂರು, ಕವಿ, ಕಥೆಗಾರ ಚಿದಾನಂದ ಸಾಲಿ ಸೇರಿದಂತೆ ಅನೇಕರು ಕಾವ್ಯ ಕಮ್ಮಟದಲ್ಲಿ ಭಾಗವಹಿಸಿದ್ದರು. ನಂತರ ಇವರೊಂದಿಗೆ ನಿರಂತರ ಸಂಪರ್ಕ ಬೆಳೆಯಿತು.
ಬಡತನದಲ್ಲಿ ಹುಟ್ಟಿದರೂ ತಂದೆ-ತಾಯಿಯ ಪ್ರೀತಿ, ಅವರ ಆರೈಕೆ ಹೊಟ್ಟೆ ಬಟ್ಟೆಗೆ ಕೊರತೆ ಇಡಲಿಲ್ಲ. ತಂದೆ ಲಾರಿ ಚಾಲಕನಾಗಿ ದುಡಿದಿದ್ದಾರೆ. ದುಡ್ಡಿಗಿಂತ ಮಕ್ಕಳೇ ಸಂಪತ್ತು ಎಂದು ಬೆಳೆಸಿದವರು. ಆದರೆ ಅಪ್ಪ ಒಂದಿನ ಅನಾಥವಾಗಿ ಎಲ್ಲರನ್ನು ಬಿಟ್ಟು ಮರೆಯಾದರು.
ಹೊಟ್ಟೆ ಪಾಡಿಗಾಗಿ ಬೆಂಗಳೂರು, ಮುಂಬಯಿ, ಪುಣೆ ನಗರಗಳಲ್ಲಿ ಅಲೆಮಾರಿ ಜೀವನ ಸಾಗಿಸಿದೆ. ಕೆಲಕಾಲ ಲಾರಿ ಕ್ಲೀನರ್ ಆಗಿಯೂ ಜಿವನ ನಡೆಸಿ, ಒಂಟಿ ತಾಯಿಯ ಜೊತೆಯಾಗಿದ್ದೇನೆ. ಅಪ್ಪ ತಿರಿಕೊಂಡ ಮೂರು ವರ್ಷಕ್ಕೆ ಮದುವೆಯೆಂಬ ಬಂಧನದಲ್ಲಿ ಸಿಲುಕಿದೆ. ಜೀವನದಲ್ಲಿ ನೋವುಂಡು, ಯಶಸ್ಸಿನ ಪಯಣದಲ್ಲಿ ಸಾಗುತ್ತ, ಗೆಲುವಿಗಾಗಿ ಹೊಸ ಹೊಸ ದಾರಿಗಳನ್ನು ಹುಡುಕುತ್ತಾ, ಮುಂದೆ ಸಾಗಿರುವ ನನಗೆ ಎದುರಾಗಿದ್ದು? ಹಲವು ಸಂಕಷ್ಟಗಳು. ಇವುಗಳೇ ನನ್ನ ಮುಂದಿನ ಬದುಕಿಗೆ ಮುನ್ನುಡಿ, ಸೋಲಿನಲ್ಲೂ ಗೆಲುವುಂಟು ಎಂದು ಈಗಲೂ ನಂಬಿದ್ದೇನೆ. ಸೋತು ನೆಲ ಕಚ್ಚಿದರೂ ಕೂಡ ಮನದಾಳದಲ್ಲಿ ಅವಿತು ಕುಳಿತ, ನನಗೇ ಗೊತ್ತಿಲ್ಲದ ಅದೆಂಥದೋ ಶಕ್ತಿಯೊಂದು ಫುಟ್ಬಾಲಿನಂತೆ ಮತ್ತೆ ಮೇಲೆಬ್ಬಿಸಿತು.
ಗಾಂಧಿ ಆಗ್ಬೇಕಂದುಕೊಂಡಾಗಕವನ ಸಂಕಲನದಲ್ಲಿ ಒಟ್ಟು 39 ಕವಿತೆಗಳಿವೆ. ವಾಸ್ತವ ಬದುಕಿನ ನೋವುಗಳು ಇದರಲ್ಲಿ ಅಡಗಿವೆ. ಪ್ರೀತಿ-ಪ್ರೇಮದ ಪಿಸು ಮಾತುಗಳಿವೆ. ‘ಕವಿ ಗೋಪಾಲಕೃಷ್ಣ ಅಡಿಗರು ಹೇಳುವಂತೆ: ಕಾವ್ಯ ಎಂಬುದು ಜೀವನ್ಮರಣದ ಪ್ರಶ್ನೆಯಂತೆ ನನಗೂ ಕಾಡಿದ್ದುಂಟು. (ಹಸಿವೆಯ ಹಾಗೆ ಕಾವ್ಯ ವಸ್ತು. ದಾಹದ ಹಾಗೆ ಕೆಂಗೆಡಿಸುತ್ತಿರಬೇಕು. ಕಾಮದ ಹಾಗೆ ತಪಿಸುತ್ತಿರಬೇಕು. ಸಾವಿನಂತೆ ಮೋಹಿಸದೇ ಹೋದರೆ ಪದ್ಯ ಬರೆಯಬಾರದು.) ಅಂತಹ ಯಾವುದೇ ಸಂದರ್ಭಗಳನ್ನು ಇಲ್ಲದೇ ಬರೆಯಲು ನನಗೂ ಕೂಡ ಸಾಧ್ಯವಾಗಲಿಲ್ಲ ಅನಿಸುತ್ತದೆ. ಸಂಕಲನದಲ್ಲಿ ಸಾವಿನ ಕುರಿತಾದ ಎರಡ್ಮೂರು ಕವಿತೆಗಳು ಸಹ ಇವೆ. ಕವಿಯ ಆಶಯ, ತಲ್ಲಣ ಬದುಕಿನ ಬಗ್ಗೆ ಇರುವ ಕುತೂಹಲವನ್ನು ಕವಿತೆಗಳಲ್ಲಿ ಸಾಧ್ಯವಾದ ಮಟ್ಟಿಗೆ ಹಿಡಿದಿಟ್ಟಿರಬಹುದು ಅನಿಸುತ್ತದೆ.
ಗಾಂಧಿ ಆಗ್ಬೇಕಂದುಕೊಂಡಾಗ ಸಂಕಲನಕ್ಕೆ ಪ್ರಾರಂಭದಲ್ಲಿಬದುಕು-ಬರಹಎಂಬ ಶೀರ್ಷಿಕೆಯನ್ನು ಇಡಬೇಕೆಂದು ಬಯಸಿದ್ದೆ. ಕಾರಣ ಶೀರ್ಷಿಕೆಯಡಿಯಲ್ಲಿ ಒಂದು ಕವನ ಇರುವುದರಿಂದ ತರಹ ಯೋಚಿಸಿದ್ದೆ. ಆದರೆ ಸ್ನೇಹಿತರ ವರ್ಗದವರಲ್ಲಿ ಚರ್ಚಿಸಿದಾಗ ಬದುಕು ಬರಹ ಎಂದರೆ ನಮ್ಮ ಜೀವನ ಮತ್ತು ಬದುಕಿಗೆ ಸಂಬಂಧಿಸಿದ್ದಾಗಿದ್ದರೆ ಮಾತ್ರ ಅಂತಹ ಹೆಸರು ಸೂಕ್ತವೆನಿಸುತ್ತದೆ ಎಂದರು. ಸರಿಯೆಂದುಗಾಂಧಿ ಆಗ್ಬೇಕಂದುಕೊಂಡಾಗಎಂಬ ಮರು ನಾಮಕರಣ ಮಾಡಿದ್ದೇನೆ. ಮುಂಚೆ ಬದುಕು-ಬರಹ ಶಿರೋನಾಮೆ ಕೊಟ್ಟು, ಸಾಹಿತಿ, ವಿಮರ್ಶಕರಾದ ರಘುನಾಥ . ಅವರಿಂದ ಮುನ್ನುಡಿ ಬರೆಸಿದ್ದೇನೆ. ‘ಬದುಕು-ಬರಹಚೌಕಟ್ಟಿನಾಚೆಗೂ ವಿಮರ್ಶಿಸಿ, ಬರೆದಂಥ . ಅವರ ಮುನ್ನುಡಿಗೆ ಧಕ್ಕೆಯಾಗದಂತೆ ಎಥಾವತ್ತಾಗಿ ಪ್ರಕಟಿಸಲಾಗಿದೆ. ಓದುಗರಾದ ತಾವು ಗಲಿಬಿಲಿಗೊಳ್ಳದೇ ತಿದ್ದಿಕೊಂಡು ಓದಬೇಕೆಂದು ಬಯಸುತ್ತೇನೆ.
ಅಂತರಾಳದಿಂದ ಒಡಮೂಡಿದ ಕವಿತೆಗಳೇ ಕೃತಿಯಲ್ಲಿ ಸಂಕಲಿಸಿದ್ದೇನೆ ಎಂಬ ಆತ್ಮ ವಿಶ್ವಾಸದಿಂದ ಹೇಳಬಲ್ಲೆ. ನೋವು, ನಲಿವು, ಪ್ರಿತಿ-ಪ್ರೇಮದಲ್ಲಿ ಮಿಂದೆದ್ದ ಭಾವನೆಗಳ ಜೊತೆ ಜೊತೆಗೆ ಸಮಾಜದ ಭ್ರಷ್ಟಾಚಾರ, ಅನ್ಯಾಯ, ಶೋಷಣೆಗಳ ವಿರುದ್ಧವೂ ಕೆಲವು ಕವಿತೆಗಳಲ್ಲಿ ಧ್ವನಿಯೆತ್ತಿದ ಬಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಎಷ್ಟರ ಮಟ್ಟಿಗೆ ನೀವಿದನ್ನು ಸ್ವೀಕರಿಸುತ್ತಿರೆಂದು ನಿಮ್ಮೊಳಗಿನ ಆಸಕ್ತಿ-ಅಭಿರುಚಿ, ಅಭಿಪ್ರಾಯ, ನಿಮ್ಮ ನಿರ್ಣಯಕ್ಕೆ ಬಿಟ್ಟಿರುತ್ತೇನೆ.
ಯಾವುದೇ ಶಕ್ತಿ ನಮ್ಮ ಹಿಂದೆ ಇದ್ದರೂ ಕೂಡ ಶೇ.99 ರಷ್ಟು ಪರಿಶ್ರಮ, ಸತತ ಓದು, ಅಧ್ಯಯನ ನಮ್ಮಲ್ಲಿ ಇದ್ದಾಗ ಮಾತ್ರ ಬೆನ್ನ ಹಿಂದಿನ ಬೆಳಕು ನಮ್ಮ ಮುಂದೆ ಬಂದು ನಿಲ್ಲಲು ಸಾಧ್ಯ ಎಂಬುದನ್ನು ನಂಬಿಕೊಂಡಿದ್ದೇನೆ. ಸಂಕಲನದಲ್ಲಿನ ಎಲ್ಲಾ ಕವಿತೆಗಳು ಒಂದಲ್ಲ ಒಂದು ಸಂದರ್ಭದಲ್ಲಿ ಬರೆದಂಥವು. ಕವಿತೆಗಳು ತೀರಾ ಕಾಡಿ-ಬೇಡಿ ಹಸಿವಿನ ಹಾಗೆ ರಾತ್ರಿ ಹಗಲು ದಾಹ ಕೆಂಗೆಡಿಸುತ್ತಿರುವಾಗ ಬರೆದಂಥವು. ನನಗೆ ತುಂಬಾ ಇಷ್ಟವಾದಂಥವುಗಳನ್ನೇ ಸಂಕಲಿಸಿದ್ದೇನೆ.
ಸಂಕಲನಕ್ಕೆ ಮುನ್ನುಡಿ ಬರೆದು ಕೊಟ್ಟ ಖ್ಯಾತ ಚಿತ್ರ ವಿಮರ್ಶಕ, ಕಥೆಗಾರ, ಮಯೂರ ಪತ್ರಿಕೆಯ ಹಿರಿಯ ಉಪ ಸಂಪಾದಕರಾದ ರಘುನಾಥ . ನನ್ನೆಲ್ಲಾ ಪರಿಶ್ರಮಕ್ಕೆ ವಿಮರ್ಶೆಯೆಂಬ ಕನ್ನಡಿ ಹಿಡಿದಿದ್ದಾರೆ. ಅದರೊಳಗೆ ನನ್ನ ಕಾವ್ಯದಲ್ಲಿರುವ ಹೂರಣಕ್ಕೆ ಸ್ಪಷ್ಟ ಚಿತ್ರಣ ನೀಡಿದ್ದಾರೆ. ಅವರಿಗೆ ತುಂಬು ಹೃದಯದ ಕೃತಜ್ಞತೆಗಳು ಸಲ್ಲಿಸುತ್ತೇನೆ.
ಇದೇ ಸಂಕಲನಕ್ಕೆ ಬಸವಕಲ್ಯಾಣ ತಾಲೂಕಿನ ಪತ್ರಕರ್ತ ಹಾಗೂ ನನ್ನ ಆತ್ಮೀಯ ಸ್ನೇಹಿತರಾದ ಮಾಣಿಕ ಭುರೆಯವರು ನನ್ನ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟಿದ್ದಾರೆ. ಅವರಿಗೂ ಸಹ ಹೃದಯಂತರಾಳದ ಅಭಿನಂದನೆಗಳು. ನಡೆದಾಡುವ ದೇವರೆಂದೇ ಖ್ಯಾತರಾದ ಪೂಜ್ಯಶ್ರೀ ಚೆನ್ನವೀರ ಶಿವಾಚಾರ್ಯರು ಸುಕ್ಷೇತ್ರ ಹಾರಕೂಡ, ಇವರು ನನಗಾಗಿ ಆಶಿರ್ವದಿಸಿದ್ದಾರೆ. ಅದಕ್ಕಾಗಿ ಪೂಜ್ಯರಿಗೆ ತುಂಬು ಹೃದಯದಿಂದ ವಿನಮೃವಾಗಿ ವಂದಿಸುವೆ. ನಿಮ್ಮೆಲ್ಲರ ಅಭಿಪ್ರಾಯಕ್ಕೆ ಸದಾ ಸ್ವಾಗತಿಸುತ್ತಾ ಕೃತಿಯನ್ನು ಓದುವ ನಿಮಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲುತ್ತದೆ. ಪುಸ್ತಕವನ್ನು ಪ್ರಕಟಿಸಿದ ಹುವಪ್ನೋರ್ ಪ್ರಕಾಶನ ಮಂಠಾಳ ಸದಸ್ಯರಿಗೂ ಸದಾ ಚಿರ ಋಣಿಯಾಗಿರುವೆ.
ಗಾಂಧಿ ಆಗ್ಬೇಕಂದುಕೊಂಡಾಗಕವನ ಸಂಕಲನವು ನನ್ನ ಸ್ವರಚಿತ ಕವನಗಳಭಾವಾಂತರಂಗಮತ್ತುಸುಳಿಗಳುಸೇರಿದಂತೆ ಮೂರನೆಯ ಸಂಕಲನವಾಗಿರುತ್ತದೆ. 2003 ರಲ್ಲಿಹನಿಜೇನುಎಂಬ ಪ್ರಾತಿನಿಧಿಕ ಚುಟುಕು ಸಂಕಲನ ಪ್ರಕಟಿಸಿದ್ದೇನೆ. ಸಂಕಲ್ಪ ಎಂಬ ಸಾಹಿತ್ಯ ಮಾಸ ಪತ್ರಿಕೆ ಆರಂಭಿಸಿ ನಷ್ಟವನ್ನು ಅನುಭವಿಸಿದ್ದೇನೆ. ಆದರೆ ಒಂದೆಡೆ ತೃಪ್ತಿಯೂ ಕಂಡಿದ್ದೇನೆ. ‘ಗಾಂಧಿ ಆಗ್ಬೇಕಂದುಕೊಂಡಾಗಸಂಕಲನದಲ್ಲಿರುವ ಬಹುತೇಕ ಕವಿತೆಗಳು ಪ್ರಕಟಿಸಿದ ಕರ್ಮವೀರ, ಸಂಯುಕ್ತ ಕರ್ನಾಟಕ, ಹೊಸತು, ಆದರ್ಶ ಗಂಡ-ಹೆಂಡತಿ, ಮಾನಸ ಪತ್ರಿಕೆಗಳ ಸಂಪಾದಕರಿಗೆ ಕೃತಜ್ಞತೆಗಳು. ಕವನಗಳನ್ನು ಪ್ರಸಾರ ಮಾಡಿದ ಗುಲ್ಬರ್ಗಾ ಆಕಾಶವಾಣಿಯವರಿಗೂ ಅಭಿನಂದನೆಗಳು. ಮುದ್ರಿಸಿದ ವಿಶ್ವಾಸ ಪ್ರಿಂಟ್ಸ್ ಮಾಲೀಕರಾದ ಟಿ.ಎಲ್.ವೆಂಕಟೇಶ ಅವರಿಗೂ ಹಾಗೂ ಸಿಬ್ಬಂದಿ ವರ್ಗಕ್ಕೂ ಅಭಿನಂದಿಸುವೆ.
ಸಾಹಿತ್ಯವನ್ನು ಪ್ರೀತಿಸುತ್ತಾ ಬರೆಯುತ್ತಿರುವ ಎಲ್ಲಾ ಸ್ನೇಹಿತರಿಗೂ ಹಾಗೂ ನನ್ನೆಲ್ಲಾ ಆತ್ಮೀಯರಿಗೂ ಅಭಿನಂದನೆಗಳು.     ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುವ ಎಲ್ಲರಿಗೂ ಮರೆಯದೇ ಎಂದೆಂದಿಗೂ ನೆನೆಯುವೆ. ಕೃತಿಯನ್ನು ಕೊಂಡೋದುವ ನಿಮ್ಮೆಲ್ಲರಿಗೂ ಮೊದಲ ಓದಿಗೆ ಸ್ವಾಗತಿಸುತ್ತಾ ನಿಮ್ಮ ಮುಕ್ತ ಮನಸ್ಸಿನ ಅಭಿಪ್ರಾಯಕ್ಕಾಗಿ ಕಾದಿರುತ್ತೇನೆ.
ವೀರಣ್ಣ ಮಂಠಾಳಕರ್







ಪರಿವಿಡಿ
1)  ಗಾಂಧಿ ಆಗ್ಬೇಕಂದುಕೊಂಡಾಗ                                       01
2)  ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ                           02
3)  ಬದುಕು-ಬರಹ                                                                  03
4)  ದೂರವಿರು ಹತ್ತಿರ ಸುಳಿಯಬೇಡ                                      04
5)  ಸಾವು                                                                                05
6)  ನಾನು ಮತ್ತು ಸಾವು                                                         06
7)  ಸ್ಫೂರ್ತಿ                                                                             07
8) ಸಾವಿಲ್ಲದ ಮನೆ ಯಾರೂ ಕಟ್ಟಿಕೊಳ್ಳುವುದಿಲ್ಲ                  08
9)  ಸಾವೇ ಇಲ್ಲ ನಿನಗೆ                                                            09
10) ಆದರ್ಶವಾದಿಗಳೇ ಕೇಳಿ                                                 10
11) ನಾ ಹೇಗೆ ಬದುಕಲಿ                                                         11
12) ಮೋಹಕ ಚೆಲುವೆ                                                             12
13) ನೆನಪಿನ ಹೂಮಳೆ                                                           13
14) ಹೇಗೆ ಬದುಕಲಿ ಹೇಳು                                                     14
15) ನೋವು ನನಗಿರಲಿ                                                          15
16) ಹೊಸ ಕವಿತೆಯ ಸಂಸ್ಕøತಿ                                            16
17) ವಿರಹದಗ್ನಿಯಲ್ಲಿ ಉರಿದುರಿದು                                         17
18) ಪ್ರೀತಿಯೊಂದೇ ಸಾಕು                                                    18
19) ಪ್ರಿತಿಯೆಂದರೇನು ಗೆಳತಿ                                                 19
20) ಜೀವನ ಜೇನುಗೂಡಲ್ಲ                                                    20
21) ನತದೃಷ್ಟ ಹುಡುಗಿ                                                        21
22) ನೆನಪುಗಳೇ ಹೀಗೆ...                                                       22
23) ಕನಸಿನ ಹಂದರದಲ್ಲಿ                                                        23
24) ದೇವರಿಗೊಂದು ಮನವಿ                                                  24
25) ಯಾರವನು....?                                                              25
26) ಕಳೆದು ಹೋಗಿರುವೆ                                                        26
27) ಪುಸ್ತಕ ತತ್ವ-ಜೀವನ ಸತ್ತ್ವ                                              27
28) ಹೆತ್ತವಳು                                                                         28
29) ಬಂಧನ                                                                      29
30) ವಿಷ ಸರ್ಪದ ಮದ್ದು                                                          30
31) ಕಥೆಗಾರ ಶ್ರಿಕಾಂತ ಪಾಟೀಲ                                          31
32) ರೈತನೇ ಆಳರಸರ ದೊರೆ                                              32
33) ಕಳೆದು ಹೋದವರು                                                        33
34) ಚಿತ್ತ ಚಂಚಲೆ                                                                    34
35) ಕಸಬರಿಗೆ ಬೇಕಾಗಿದೆ                                                      35
36) ಗೆಳತಿ                                                                               36
37) ಬಹುಮಾನ                                                                      37
38 ಹಾಳೆಗಳು-ನಾಳೆಗಳು                                                     38
38) ಜೀವನ                                                                             39




ಗಾಂಧಿ ಆಗ್ಬೇಕಂದುಕೊಂಡಾಗ
ಗಾಂಧಿ ಆಗ್ಬೇಕಂದುಕೊಂಡಾಗ
ತುಂಡು ಬಟ್ಟೆಯಲ್ಲಿ ತಿರಗಾಡ್ಬೇಕಲ್ಲ
ಜನ ನನ್ನ ನೋಡಿ ಬೆತ್ತಲೆ ಕತೆ
ಕಟ್ಟುತ್ತಾರೆಂಬ ಚಿಂತೆ!

ಗಾಂಧಿ ಆಗ್ಬೇಕಂದುಕೊಂಡಾಗ
ಕೋಲು ಹಿಡಿದು ತಿರಗಾಡ್ಬೇಕಲ್ಲ
ಕೋಲು ಕಂಡ ಜನ, ಕೋಲಾಹಲ
ಎಬ್ಬಿಸುವರೆಂಬ ಚಿಂತೆ!

ಗಾಂಧಿ ಆಗ್ಬೇಕಂದುಕೊಂಡಾಗ
ಬೋಳು ತೆಲೆಯಲ್ಲಿ ತಿರಗಾಡ್ಬೇಕಲ್ಲ
ಬಿಸಿಲು ಧಗೆಯಲ್ಲಿ ಜನ, ಮೊಟ್ಟೆ ಬೇಯಿಸಿ
ಹೊಟ್ಟೆ ತುಂಬಿಸಿಕೊಳ್ಳುತ್ತಾರೆಂಬ ಚಿಂತೆ!

ಗಾಂಧಿ ಆಗ್ಬೇಕಂದುಕೊಂಡಾಗ
ದಪ್ಪ ಕನ್ನಡಕ ಕಣ್ಣಿಗೆ ಹಚ್ಚಬೇಕಲ್ಲ
ಕನ್ನಡಕ ಕಂಡ ಜನ, ಕಣ್ ಕಾಣ್ಸೋದಿಲ್ಲಂತ
ತಿಳಿದು, ಕಂಡಲ್ಲಿ ಗುಂಡಿಟ್ಟು ಕೊಲ್ಲುತ್ತಾರೆಂಬ ಚಿಂತೆ!

ಗಾಂಧಿ ಆಗ್ಬೇಕಂದುಕೊಂಡಾಗ
ನನ್ನ ಅಂಥಾವ್ರೆ ಜಗದ ತುಂಬೆಲ್ಲ
ಗಸ್ತು ತಿರುಗುತ್ತಾ, ಸತ್ಯ ಶೋಧನೆಗೆ
ಗುಂಡಿಟ್ಟು ಕೊಲ್ಲಲು, ಹುಡುಕಾಟ ನಡೆಸುತ್ತಾರೆಂಬ ಚಿಂತೆ!

ಹೊಸತುಮಾಸಿಕ ಪತ್ರಿಕೆಯಲ್ಲಿ ಪ್ರಕಟ

ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ
ಬುದ್ಧ, ಬಸವ, ಗಾಂಧೀಜಿಯವರ
ತತ್ತ್ವಗಳನ್ನು ಹೂತಿಟ್ಟಿದ್ದೇವೆ
ಕೇವಲ ಭಾಷಣ, ವೇದಿಕೆಗಳಲ್ಲಿ
ಮಾತ್ರ ತೆರೆದಿಟ್ಟಿದ್ದೇವೆ.

ಬುದ್ಧ ಜಯಂತಿ, ಬಸವ ಜಯಂತಿ
ಗಾಂಧಿ ಜಯಂತಿ ಕೇವಲ
ಪೂಜೆ ಪತ್ರಿಕೆಗಳಿಗಷ್ಟೇ ಸೀಮಿತವಾಗಿ
ಇಟ್ಟಿದ್ದೇವೆ, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ
ಮಾತಾಡುವವನಿಗಷ್ಟೇ ಮುಖ್ಯಸ್ಥನಾಗಿ ನೇಮಿಸಿದ್ದೇವೆ.

ನಾವು ನಮ್ಮ ಜಿವಿತಾವಧಿಯಲ್ಲಿ ಮಾಡಿದ
ಪಾಪ, ಕರ್ಮ, ಅನ್ಯಾಯದ ಹಗರಣಗಳು
ಬದಿಗಿಟ್ಟಿದ್ದೇವೆ.....
ದೇಶಕ್ಕಾಗಿ ಸಮಾಜದ ಸುಧಾರಣೆಗಾಗಿ
ಮಾಡಿ ಮಡಿದವರ ತ್ಯಾಗವನ್ನು ಹೊಗಳುತ್ತೇವೆ
ಸಮಯ ಬಂದಾಗ ಶಾಂತ ಮೂರ್ತಿಗಳಾಗುತ್ತೇವೆ

ಮುಖವಾಡ ಧರಿಸಿದವರು ನಾವು
ಅಪ್ಪಟ ಗಾಂಧಿವಾದಿಗಳಾಗುತ್ತೇವೆ
ಬುದ್ಧನ ಮಾರ್ಗವನ್ನು ಅನುಸರಿಸಿ
ಮುಗ್ಧ ಜನತೆಯ ಕಣ್ಣೆದುರಿಗೆ ಬೆಳಕ್ಕಾಗುತ್ತೇವೆ

ಬೆಳಕಿನ ಹಿಂದಿನ ಕತ್ತಲು
ಯಾರೆಂಬುದು ಪತ್ತೆ ಹಚ್ಚಲು ಬಂದವರನ್ನು
ಪ್ರಿತಿಯಿಂದಲೇ ಮುಗಿಸುತ್ತೇವೆ
ತಪ್ಪದೇ ಮಣ್ಣಿನಲ್ಲಿ ಮುಚ್ಚಿಟ್ಟು
ಸತ್ಯದ ಸಮಾಧಿಯನ್ನು ಕಟ್ಟುತ್ತೇವೆ

ಅದಕ್ಕಾಗಿಯೇ ಇಲ್ಲಿನ ರಾಜಕೀಯ
ಪ್ರಿತಿ, ತತ್ತ್ವ, ಆದರ್ಶಗಳನ್ನು ಕಂಡು
ಬುದ್ಧ, ಬಸವ, ಗಾಂಧೀಜಿಯವರು
ಭೂಮಿ ಮೇಲೆ ಮತ್ತೆ.....
ಹುಟ್ಟಿ ಬರುವುದನ್ನೇ ಮರೆತಿದ್ದಾರೆ.
ಸಮಾಧಿಯ ಮೇಲೆ ಹುಗುಚ್ಚವಿಟ್ಟವರ ಮೊಸಳೆ ಕಣ್ಣೀರಲ್ಲೇ ಕರಗುತ್ತಿದ್ದಾರೆ.

ಬದುಕು-ಬರಹ
ಬದುಕಿದ್ದವರು ಬರೆಯಬಹುದು
ಬರೆದು ಬದುಕಬಹುದು
ಬದುಕು-ಬರಹದ ನಡುವಿರುವ
ಅಂತರ: ಜೀವನ

ಜೀವನಕ್ಕಾಗಿ ನಾನು ಬದುಕಬೇಕು
ಬದುಕಿರುವತನಕ ಏನಾದರೂ
ಬರೆಯಲೇಬೇಕು.....
ಬರೆದದ್ದು ಅರ್ಥಪೂರ್ಣ
ಬದುಕಾಗಬೇಕು

ಹೇಳುತ್ತಾರೆ ಕೇಳುತ್ತಾರೆ
ನೂರಕ್ಕೆ ತೊಂಬತ್ತೊಂಬತ್ತು ಜನ
ಬರೆದು ಬದುಕಲಾಗದು;ಜೀವನಕ್ಕಾಗಿ
ಕೂಡಿಡಬೇಕು ಕೈ ತುಂಬಾ ಹಣ
ಆಗಲೇ ಜಿವನ ಸಂಭ್ರಮ

ಹೌದು....ಜೀವನ ಬಹಳ ವಿಚಿತ್ರ
ಬದುಕಲಿಕ್ಕಾಗಿ ಮುಖವಾಡ
ಹಾಕಿಕೊಳ್ಳಬೇಕು ನಿಜ ಜೀವನದಲ್ಲಿ
ಚಿತ್ರ-ವಿಚಿತ್ರವಾಗಿರಬೇಕು!

ಬದುಕಿದ್ದವರು ಬರೆಯಬಹುದು
ಬರೆದು ಬದುಕಬಹುದು
ಬರಹಗಾರ ಸತ್ತಾಗ?
ಬರಹ ಜೀವಂತ....
ಅವನು ಎಂದೆಂದಿಗೂ ಶಾಶ್ವತ
ಸತ್ತವನ ಸಮಾಧಿಯ ಮೇಲೆ
ನಗುತಿತ್ತು ಹೂಗುಚ್ಛ!

ಕರ್ಮವೀರ ವಾರ ಪತ್ರಿಕೆ: ಜೂನ್ 17, 2007


ದೂರವಿರು ಹತ್ತಿರ ಸುಳಿಯಬೇಡ
ದೂರವಿರು
ಹತ್ತಿರ ಸುಳಿಯಬೇಡ
ಮನಸ್ಸಿನ ಭಾವನೆಗೆ
ಸುಳಿಯಾಗಬೇಡ
ಮರೆತ ಮಾತು, ತೆರೆದ ಪುಟ ಆಗಬೇಡ
ನಿನ್ನ ಭರವಸೆಗಳಿಗೆ ನೊಂದಿರುವೆ
ಆರದ ಗಾಯದ ಮೇಲೆ ಬರೆಯಾಗಬೇಡ

ದೂರವಿರು ಹತ್ತಿರ ಸುಳಿಯಬೇಡ
ಕನಸಿನ ಕಣ್ಣಿನ ಸ್ವಪ್ನ ಸುಂದರಿಯಾಗಬೇಡ
ವಿಷ ಸರ್ಪ ನೀನು, ಗಾಳಿಯಂತೆ
ಸುಳಿಯಬೇಡ
ತಂಗಾಳಿ ಬೀಸಿ ಜ್ವಾಲಾ....
ಮುಖಿಯಂತೆ
ಮನಸ್ಸಿನಾಳಕ್ಕಿಳಿದು ಬೆಂಕಿ
ಹಚ್ಚಬೇಡ

ದೂರವಿರು ಹತ್ತಿರ
ಸುಳಿಯಬೇಡ
ನೀ ನನ್ನ ಬಾಳಿನ ಬತ್ತಿಯ
ಹಣತೆಯಾಗಬೇಡ
ನಿನ್ನಾ ಹಣತೆಯೊಳಗೆ ನನ್ನ
ರಕ್ತ ಸುರಿದು
ನನ್ನನ್ನೇ ಬತ್ತಿಯಾಗಿ ಹೊಸೆದು
ಬೆಳಕು ಕಾಣಬೇಡ
ಬೆಳಕಿನಡಿಯ ಕತ್ತಲು
ನೀನೆಂಬುದು ಮರೆಯಬೇಡ

ದೂರವಿರು ಹತ್ತಿರ ಸುಳಿಯಬೇಡ
ನಾ ಸತ್ತರೂ....ಸ್ಮಶಾನಕೊಯ್ಯಬೇಡ
ನನ್ನ ಶವದ ಸುತ್ತ ಕಣ್ಣೀರು ಸುರಿಸಬೇಡ
ಮತ್ತೆ ಶವದ ಬತ್ತಿ ಹೊಸೆದು
ಹಣತೆಯಾಗಬೇಡ
ನನ್ನ ಸುಟ್ಟ ರಕ್ತವೇ ಸುರಿದು
ದೀಪ ಹಚ್ಚಬೇಡ...!!
ಕರ್ಮವಿರ ವಾರ ಪತ್ರಿಕೆಯಲ್ಲಿ ಪ್ರಕಟ
ಸಾವು
ದಿನವೂ ಸತ್ತು ಬದುಕುತ್ತೇವೆ
ಏತಕ್ಕೆ....?
ಒಮ್ಮೆ ಹುಟ್ಟಿದ ಬಳಿಕ
ಸಾವೆಂಬುದು ಖಚಿತವಲ್ಲವೆ
ದೇಹಕ್ಕೆ

ಮತ್ಯಾಕೆ ಉಸಿರಾಟ
ಬದುಕು, ಮಲಗಿದಾಗ
ಭುಸುಗುಡುವ ಸಾವು...?

ಮೈಚಾಚಿ ಉದ್ದಕ್ಕೆ
ವಿವಿಧ ಭಂಗಿಗಳಲ್ಲಿ ನಾವು
ದಿನವಿಡೀ ದುಡಿದು
ದಣಿದ ದೇಹಕ್ಕೆ

ವಿಶ್ರಾಂತಿಯ ನೆಪವೊಡ್ಡಿ
ಜೋಗುಳವನ್ನು ಹಾಡಿ
ಮಲಗಿಸುವ ಸಾವಿಗೆ
ಮೆಚ್ಚಲೇಬೇಕು ಅದರ ಬುದ್ಧಿಗೆ

ಇರಬಹುದು ನಮಗೆಲ್ಲ
ಸಾವಿನ ಆಹ್ವಾನಕ್ಕೆ
ಎಚ್ಚರಿಕೆಯ ಕರೆಯೋಲೆ
ಇಣುಕಿ....ಇಣುಕಿ ನೋಡುವ
ಬೆಳಕು ಕತ್ತಲಿನ ನಡುವೆ
ಬಚ್ಚಿಟ್ಟುಕೊಂಡ ಸಾವೇ....

ಕರ್ಮವೀರ ವಾರಪತ್ರಿಕೆಯಲ್ಲಿ: ದಿ-ಜುಲೈ 29,2007


ನಾನು ಮತ್ತು ಸಾವು
ಕುಳಿತು ಮಾತಾಡುವ ಬಯಕೆ
ಒದಗಿ ಬಂದಾಗ
ದೇಹಕ್ಕೆ, ಉಸಿರಾಟಕ್ಕೆ

ಹೆದರಬೇಡ ಸಾವೇ
ನಿನ್ನ ಕುರಿತು
ಬರೆಯುತ್ತೇನೆಂದು
ಒಂದು ಕವಿತೆ
ಕೇಳು ಬಾ ಇಲ್ಲೊಂದಿಷ್ಟು
ನನ್ನ ಜೀವನದ ಕತೆ

ಯಾರು ನೀನು...?
ಅದೇಕೆ ಅಷ್ಟೊಂದು ಅಗೋಚರ
ವಿಸ್ಮಯ! ಭಯಂಕರ

ಬಾ ಕುಳಿತುಕೋ
ಮಾತು, ಕತೆ, ಚರ್ಚೆ, ಸಂವಾದ
ನಡೆಯಲಿ ನಮ್ಮಿಬ್ಬರ ನಡುವೆ
ಒಂದಿಷ್ಟು ಕಾಫಿ, ಚಹಾದ ಸ್ವಾದ
ಬಂದಂಥ ನೆಂಟರಿಷ್ಟರ ಮಧ್ಯೆ
ಬಂಧು-ಬಾಂಧವ್ಯದ ನಡುವೆ
ಏನೋ ವಾದ ವಿವಾದ?!

ನಾನೇನು ಮಹಾ ಕವಿಯಲ್ಲ
ಸಾಮಾನ್ಯ ಒಬ್ಬ ಮನುಜ
ಹುಟ್ಟುವಾಗಲೇ ನಿನ್ನೊಂದಿಗೆ ಬೆಳೆಯಿತು
ಗೆಳೆತನ ಸಹಜ; ನಮ್ಮಿಬ್ಬರದು
ಮುರಿಯದ ಬಂಧನವೆಂಬುದು ನಿಜ

ನನ್ನ ಕವಿತೆಗಳಿಗೆ ಮೂಲ ಪ್ರೇರಣೆಯೆಂದರೆ
ಆಸೆ, ನಿರಾಸೆ, ಭಗ್ನ ಪ್ರೀತಿ
ನಂತರ ವಸ್ತುಗಳಾಗಿಸಿಕೊಂಡಿದ್ದು?!
ಮುರಿದು ಬಿದ್ದ ಕನಸು, ಬಡತನ
ಶಾಶ್ವತ ನಮ್ಮಿಬ್ಬರದೇ ಗೆಳೆತನ

ಸ್ಫೂರ್ತಿ
ನಾ ನಿನಗೆ ಹಣತೆಯಾಗಬೇಕು
ಎಂದಿರುವೆ ಗೆಳತಿ, ಆದರೆ ಎಲ್ಲಿಂದ
ತರಲಿ ಎಣ್ಣೆ ಮತ್ತು ಬತ್ತಿ

ನಾ ನಿನಗೆ ಕೊಡೆಯಾಗಬೇಕು
ಎಂದಿರುವೆ ಗೆಳತಿ, ಆದರೆ
ಎಲ್ಲಿಂದ ತರಲಿ ಮುರಿದು ಬಿದ್ದ
ಕನಸಿನ ತಂತಿ

ನಾ ನಿನಗೆ ಬಿಳಿ ಹಾಳೆಯಾಗಬೇಕು
ಎಂದಿರುವೆ ಗೆಳತಿ, ಆದರೆ
ಹೇಗೆ ತುಂಬಲಿ ಭಾವನೆಗಳ ಸ್ಫೂರ್ತಿ

ನಾ ನಿನಗೆ ಕನಸಾಗಿರಬೇಕು
ಎಂದಿರುವೆ ಗೆಳತಿ, ಆದರೆ
ತೋರಲಿಲ್ಲ ನೀ ಒಂದಿಷ್ಟು ಖರೇ ಪ್ರೀತಿ

ನಾ ನಿನ್ನ ಬಾಳ ಪಯಣಕ್ಕೆ
ಹೂವಾಗಬೇಕು ಎಂದಿರುವೆ ಗೆಳತಿ
ಆದರೆ, ನೀನೀಗ ಆಗಿರುವೆ ಶ್ರೀಮತಿ

ಪ್ರೀತಿಗಾಗಿ ಬೇಕಿತ್ತು ನಿನ್ನ ಸಮ್ಮತಿ
ಆದರೆ ಕವಿತೆಗಲ್ಲ ಗೆಳತಿ
ಸಾಕಿಷ್ಟು ಇದ್ದರೆ ನಿನ್ನಿಂದ ಸ್ಫೂರ್ತಿ





ಸಾವಿಲ್ಲದ ಮನೆ ಯಾರೂ ಕಟ್ಟಿಕೊಳ್ಳುವುದಿಲ್ಲ
ನಾನು ಇಲ್ಲಿಗ್ಯಾಕೆ ಬಂದೆ
ಎಲ್ಲೆವನು ಅನಾಥವಾಗಿ ಬಿಟ್ಟು
ಹೋಗಿರುವ ತಂದೆ?

ಭೂಮಿ, ಪ್ರಕೃತಿ, ಪರಿಸರ
ಇಲ್ಲಿರುವ ಜನ ಎಷ್ಟೊಂದು ಅವಸರ
ಇರಬಹುದೆ ಎಲ್ಲವೂ ಮುಖವಾಡ ಚಿತ್ರ

ಬರುವಾಗ ಹೆತ್ತವ್ವಳಿಗೆ ನೊವು ಕೊಟ್ಟು ಬಂದೆ
ಇದಕ್ಕೆಲ್ಲ ಕಾರಣ ನನ್ನ ತಂದೆ
ನಾನು ಆಗಿರುವೆ ಒಬ್ಬ ಮಗನ ತಂದೆ

ಹುಟ್ಟಿಸಿದವನು ಇಲ್ಲಿ ಶಾಶ್ವತವಾಗಿ ಉಳಿಯಲಿಲ್ಲ
ಹುಟ್ಟಿರುವ ನನಗೂ ಬದುಕಲು ಬಿಡಲಿಲ್ಲ
ಬಾಳೊಂದು ಕಡಲಲ್ಲ: ಬರಿದಾದ ಭೂಮಿಯಂತೆ ನಾವೆಲ್ಲ

ದೇಹದೊಳಗೆ ಉಸಿರಾಟ ಇರೋತನಕ ಜೀವನ
ಎಲ್ಲವೂ ಮುಗಿದ ಬಳಿಕ ಬರೀ ಮೌನ
ಮನುಷ್ಯನ ಕೊನೆಯ ಆಸೆಯೆಂಬುದು ಸ್ಮಶಾನ

ಭೂಮಿಯಿಂದ ನಾನು ಅಗಲಿದ ಬಳಿಕ
ಮಾಡಿಕೊಳ್ಳುತ್ತಾರೆ ಇದ್ದವರು ಶುಚಿಯಾದ ಝಳಕ
ಕಳೆದು ಹೋಯಿತೆ? ಅವರ ಮೈಮೇಲಿನ ಮೈಲಿಗೆ ಮತ್ತು ಸೂತಕ!

ಅಗಲಿ ಹೋದವರು ಮತ್ತೆ ಮರಳಿ ಬರಲಿಲ್ಲ
ಇಲ್ಲಿದ್ದವರು ಯಾರೂ ಅಮರವಾಗಿ ಉಳಿಯಲಿಲ್ಲ
ಸಾವಿಲ್ಲದ ಮನೆ ಯಾರೊಬ್ಬರೂ ಕಟ್ಟಿಕೊಳ್ಳುವುದಿಲ್ಲ





ಸಾವೇ ಇಲ್ಲ ನಿನಗೆ
ನಿನಗ್ಯಾರು ಹೇಳಿದ್ದು
ನೀನಾಗಿಯೇ ಸಂತೋಷ, ಸಂಭ್ರಮದಲ್ಲಿ
ಸುಟ್ಟು, ಅನ್ಯರಿಗೆ ಕತ್ತಲಲ್ಲಿ ಬೆಳಕನ್ನು ಕೊಟ್ಟು
ನಿನ್ನ ದೇಹ ನೀನೇ ತ್ಯಾಗ ಮಾಡಿಕೋ
ಆತ್ಮಹತ್ಯೆ ಮಾಡಿಕೋ ಎಂಬುದು?

ನೀನೇಷ್ಟು ಶಾಂತ, ಚಿತ್ತ
ಬುದ್ಧನಷ್ಟೇ ಮುಗ್ಧ ನೀನು, ಮನಸ್ಸೇಷ್ಟು ಶುದ್ಧ
ನಿನ್ನಡಿಯಲ್ಲೇ ಕತ್ತಲಿದ್ದರೂ
ಅದೆಂಥ ಮೌನದಲ್ಲಿ ನೀ ಬೆಳಕು ಚೆಲ್ಲುವೆ
ಕತ್ತಲೆಂಬ ಭೂತಕ್ಕೆ ಇಲ್ಲದಂತೆ ಮಾಡುವೆ

ನಿನ್ನ ಉಪಕಾರವನ್ನು
ಯಾರಾದರೂ.....ಎಂದಾದರೂ, ಒಮ್ಮೆಯಾದರೂ
ಬಣ್ಣ ಬಣ್ಣದಲ್ಲಿ ಬಣ್ಣಿಸಿಯಾರೆ?
ಅವರಿಗವರೇ ಹೊಗಳಿಕೊಂಡರು
ನಿನ್ನ ಸಂಭ್ರಮ, ಸಂತೋಷವನ್ನೆಲ್ಲ
ಅವರೇ ಹಂಚಿಕೊಂಡರು.....!?

ನಿನ್ನ ಆಸೆ, ಕನಸು, ಗುರಿ ನಿರಂತರ
ಸಾವೇ ಇಲ್ಲ ನಿನಗೆ ಯುಗ ಯುಗಾಂತರ
ನಾವ್ಯಾರು ನಿನಗೆ ಸರಿಸಾಟಿ ಇಲ್ಲ
ನಿನ್ನಷ್ಟು ಧೈರ್ಯಶಾಲಿ; ಕತ್ತಲನ್ನು ಆಳುವ
ಅರಸರಲ್ಲ ನಾವು.


ಆದರ್ಶವಾದಿಗಳೇ ಕೇಳಿ
ಯಾರಿಗೆ ಬೇಕು ನಿಮ್ಮ ಆದರ್ಶ
ತತ್ವದ ಮಾರ್ಗಗಳು, ಈಗ
ಎಲ್ಲಿರುವರು ನಿಮ್ಮಂಥ ಗಾಂಧಿವಾದಿಗಳು
ಇದ್ದವರೆಲ್ಲ, ಭಾವಚಿತ್ರಗಳಾಗಿಯೇ ಹೋದರು

ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರು
ಬದುಕಿರುವತನಕ ಅವರನ್ನು
ಬಗ್ಗು ಬಡಿದವರು ನಾವೇ.....
ಗುಂಡಿಟ್ಟು ಕೊಂದು, ಕತ್ತಿ ಮಸೆದವರು ನಾವೇ

ನಿಮಗೆ ಪೂಜ್ಯ ಸ್ಥಾನದಲ್ಲಿಟ್ಟು
ಪೂಜಿಸುತ್ತಿರುವುದು ಹೆಸರಿಗೆ ಮಾತ್ರ
ಹಣ, ಅಧಿಕಾರ, ಆಸ್ತಿಗಾಗಿ
ಹರಾಜಿಗಿಟ್ಟಿದ್ದೇವೆ ನಿಮ್ಮೆಲ್ಲರ ಭಾವಚಿತ್ರ

ಈಗೇನಿದ್ದರೂ ಬಾಂಬು, ಬಂದೂಕು ಮಾತಾಡುತ್ತವೆ
ಗಾಂಜಾ ಆಫೀಮಗಳದ್ದೇ ಬೇಡಿಕೆ ಹೆಚ್ಚಾಗಿದೆ
ಒಡೆದ ಕನ್ನಡಿಯಲ್ಲಿಯೇ ಕಾಣಬೇಕಾಗಿದೆ
ನೀವು ಬಿಟ್ಟು ಹೋದ ಆದರ್ಶ-ತತ್ತ್ವಗಳ ಕಾಣಿಕೆ

ಮೋಹಕ ಚೆಲುವೆ ಚೆಲುವೆ
ಜೂಜಾಟದ ಸ್ಪರ್ಧೆಯೊಳಗೆ
ಛಲತೊಟ್ಟು ಗೆದ್ದು
ಸೊತವರೇಷ್ಟೋ ಜನ
ಲೆಕ್ಕ ಇಟ್ಟವರ್ಯಾರು?

ಕಿತ್ತೆಸೆದು ಬಿಡು, ಕೆಟ್ಟ ಚಾಳಿಗಾಗಿ
ತೊಟ್ಟ ಹಟದ ಛಲದ ಬೇರು
ನಿನ್ನ ಮಾದಕ ನೋಟದೊಳಗೆ
ಅಡಗಿ ಕುಳಿತ ಆಸೆ ಕನಸುಗಳಿಗೆ
ಮೊಟಕು ಗೊಳಿಸದಿರು

ಗೊತ್ತು ಗುರಿಯಿಲ್ಲದ ಬದುಕಿಗಾಗಿ
ಕುಳಿತು ಕೊರಗದಿರು
ಏಯ್....ಮೋಹಕ ಚೆಲುವೆಯೇ
ಸಿಗರೇಟು ಸೇದುತ್ತ
ನಶೆ ಏರಿದ ಗುಂಗಿನೊಳಗೆ
ನಿನ್ನರಿವು ನಿನಗಿಲ್ಲದೆ
ಮತ್ಯಾಕೆ ಯೋಚಿಸುತ್ತಿರುವೆ

ನಿನ್ನ ಬಿಚ್ಚು ಮನಸ್ಸಿನ
ತೆರೆದೆದೆ ಒಳಗೆ
ಕಚಗುಳಿ ಇಟ್ಟವರ್ಯಾರೋ
ಇರಬಹುದು, ಅದ್ಯಾರೋ...ಗೊತ್ತಾಗದೆ?

ಕ್ಲಬ್ಬು ಜೂಜಾಟವೆಲ್ಲ ಮರೆತು
ಬಾಳೆಂಬ ಪುಟಗಳನ್ನೊಮ್ಮೆ ತೆರೆದು
ಚಿಂತಿಸಿ ನೋಡು
ಸಂಸಾರವೆಂಬ ಚೌಕಟ್ಟಿನೊಳಗೆ
ಒಮ್ಮೆ ಹೆಜ್ಜೆಯನಿಡು
ಅಲ್ಲಿದೆ ಆದರ್ಶ ಬಾಳಿನ ಗುಟ್ಟು!!

ಆದರ್ಶ ಗಂಡ ಹೆಂಡತಿ ಪತ್ರಿಕೆಯಲ್ಲಿ ಬಹುಮಾನಿತ ಕವನ

ನೆನಪಿನ ಹೂಮಳೆ
ನಿನ್ನ ನೆನಪುಗಳೆಂದರೆ
ನನ್ನೀ ಎದೆಯ ಗೂಡಿನಲ್ಲಿ
ಚಿಲಿಪಿಲಿಗುಟ್ಟುವ ಹಕ್ಕಿಗಳ ಹಸಿವು

ನಿನ್ನ ನೆನಪುಗಳೆಂದರೆ ಗೆಳತಿ
ಕಾಣದ ದೇವರನ್ನು ಧ್ಯಾನಿಸುತ್ತ
ಧ್ಯಾನದಲ್ಲಿ ಲೀನವಾಗಿ ವರವೊಂದು
ಪಡೆದ ಖುಷಿ, ಸಂಭ್ರಮ

ನಿನ್ನ ನೆನಪುಗಳೆಂದರೆ
ಕಣ್ಗಳ ಬಿಂಬದಲ್ಲಿ
ಕಾಣುವ ಕನಸಿನ ಪಯಣ

ನಿನ್ನ ನೆನಪುಗಳೆಂದರೆ ಗೆಳತಿ
ಕವಿಯ ಭಾವ ತರಂಗದಲ್ಲಿ ತೇಲಾಡುವ
ಮನಸ್ಸಿನಂತರಂಗದ ವಿಚಿತ್ರ ಕಲ್ಪನೆಗಳು

ನಿನ್ನ ನೆನಪುಗಳೆಂದರೆ
ಮುಂಜಾನೆಯೆದ್ದು ನಸುನಕ್ಕು ನಾಚುತ್ತ
ಅಂಗಳದಲ್ಲಿ ರಂಗೋಲಿ ಹುಡುಗಿ

ನಿನ್ನ ನೆನಪುಗಳೆಂದರೆ ಗೆಳತಿ
ಕವಿತೆಯ ಜೀವ ಭಾವದಲ್ಲಿ
ಒಂದಾಗಿ, ನಿನಗಾಗಿರುವ ನನ್ನುಸಿರಿನ ಧ್ವನಿ

ನಿನ್ನ ನೆನಪುಗಳೆಂದರೆ
ದಡಮುಟ್ಟಿ ಹಿಂತಿರುಗಿ ಹೋಗುವ
ಅಲೆಗಳಂತೆ....ನಿನ್ನಾ ನೆನಪಿನ ಹೂಮಳೆ


ಹೇಗೆ ಬದುಕಲಿ ಹೇಳು
ಜೀವ, ಭಾವ ಬಂಧನದಲ್ಲಿ
ನೀ ಬರೀ ನೆನಪಲ್ಲ ಗೆಳತಿ
ನನ್ನೀ ಅಂತರಂಗದೊಳಗಿನ ಎದೆ ಬಡಿತ
ನಿತ್ಯದ ಬದುಕಿನ ಉಸಿರಾಟ, ಗಾಳಿ,ಬೆಳಕು ನೀನೆ

ಹೇಗೆ ಬದುಕಲಿ ಹೇಳು ನಿನಿಲ್ಲದೆ
ನಿನ್ನ ನೆನಪಿಲ್ಲದ ಕ್ಷಣವಿಲ್ಲ
ಶೂನ್ಯ ಜೀವನವಾಗುತ್ತದೆ ಬದುಕೆಲ್ಲ
ನಮ್ಮಿಬ್ಬರ ನಡುವೆ ಅದೇಕೆ ಅಂತರ?
ಅವನೊಬ್ಬನೇ ಬಲ್ಲ....

ಎಲ್ಲಾ ಬಗೆ ಬಗೆಯ ಭಾವ ತರಂಗಗಳು
ಚುಕ್ಕಿ, ಚಂದ್ರಮ, ನದಿ-ಸಾಗರಗಳು
ನಮ್ಮ ಕಲ್ಪನೆಗೂ ಮೀರಿ ಚಿಂತಿಸುತ್ತಿವೆ
ನಾವೀ ಜನ್ಮದಲ್ಲಿ ಅಲೆಗಳ ಹಾಗೆಯಾದರೂ
ಬಂದು ದಡ ಸೇರಬಹುದೆ? ಎಂದು











ನೋವು ನನಗಿರಲಿ
ನಾ ನೊಂದರೂ ನೀ
ನೋಯದಿರು ಗೆಳತಿ
ನನ್ನ ಮೇಲೆ ನಿನಗೆ ಪ್ರೀತಿ
ಇರಲಿ, ಇಲ್ಲದಿರಲಿ
ನಿನ್ನ ನೋವುಗಳೆಲ್ಲ ನನಗಿರಲಿ

ನನ್ನ ಮೇಲೆ ನಿನಗೆ
ದ್ವೇಷವಿದ್ದರೂ ಸರಿಯೇ
ಅದುವೇ ನನಗೆ ಬಹುಮಾನ

ನನ್ನ ಪ್ರಿತಿ-ವಿಶ್ವಾಸದ ಮೇಲೆ
ನಿನಗಿದ್ದರೆ ಅನುಮಾನ
ಕೊಂದು ಬಿಡು ಹೀಗೆ; ಒಮ್ಮೆ ಸುಮ್ಮನೆ
ನಾ ಸತ್ತ ಬಳಿಕ, ಸಮಾಧಿಯ ಮೇಲೆ
ನೀನರ್ಪಿಸುವ ಹೂಗುಚ್ಛವೇ
ನನಗೆ ಪ್ರೇಮದ ಅರಮನೆ

ನಾ ಹೇಗೆ ಬದುಕಲಿ
ನಿನಗಾದ ನೊವು ನನಗಲ್ಲವೆ
ನೀ ಮುಡಿದ ಹೂ ನಾನಲ್ಲವೆ
ಗೆಳತಿ, ಪ್ರೇಯಸಿ, ಹೆಂಡತಿ
ನನ್ನ ಮುದ್ದು ನಲ್ಲೆ ರಂಜಿ...ನೀನಲ್ಲವೆ?

ಹರಿದು ಹೋದ ಬದುಕಿನ ಕೌದಿಗೆ
ಟಿಗಳು, ಹಚ್ಚಿ ಹೊಲಿಯುವ ಸೂಜಿ
ನೀನಾಗು...ಬಾ ಸತಿ, ಸಂಗಾತಿ
ನನ್ನ ತಪ್ಪು ಹೆಜ್ಜೆಗೆ ಮುಳ್ಳಾಗು
ಬದುಕುವ ಮಾರ್ಗಕ್ಕೆ ಗುರಿಯಾಗು

ಸಾವಿರ ಗುಡ್ಡವೇ ಎದುರಾಗಲಿ
ಸಾವಿನ ನೆರಳೇ ಹಿಂಬಾಲಿಸಲಿ
ನೀನಿಲ್ಲದಿದ್ದರೆ ನನ್ನ ಬಳಿ
ಹೇಳು ನಾ ಹೇಗೆ ಬದುಕಲಿ

ಹೊಸ ಕವಿತೆಯ ಸಂಸ್ಕøತಿ
ಗೆಳತಿ ನಿನ್ ಪ್ರೀತಿಗಾಗಿ
ಹಾತೊರೆಯುತ್ತಿದೆ ನನ್ನ ಹುಚ್ಚು ಮನಸ್ಸು
ಸೆಳೆಯುತ್ತಿದೆ ನಿನ್ನ ಕಣ್ಣ್ನೋಟವೊಂದು
ಮುಚ್ಚಿಟ್ಟುಕೊಂಡ ಹರೆಯದ ನಿನ್ನಾ ವಯಸ್ಸು

ಪ್ರೀತಿಯೆಂದರೆ ನಿನ್ನೊಳಗಿನ ಭೀತಿ ಬಿಡು
ಒಂದಿಷ್ಟು ಖರೇ ಪ್ರೀತಿ ಅಂದ್ರ....?
ನಿನ್ನ ಮನಸ್ಸು ಕೊಡು

ಕನಸಿನ ಹಂದರದಲ್ಲಿ ನೀ ಬಿಡಿಸಿದಂತೆ
ಚಿತ್ತ-ಚಿತ್ತಾರದ ರಂಗೋಲಿ
ನನ್ನ ಮನಸ್ಸಿನ ಅಂಗಳದಲ್ಲೂ ಹಾಗೆ
ನಗು-ನಗುತ್ತಲೇ ಬಂದಿಳಿ....

ಅದೇಕೋ ಇಂದು; ಬಿಂದುವಿನೊಳಗಿನ ಸಿಂಧು
ನಿನ್ನ ನೆನಪಿನ ಸುಳಿಯಲ್ಲಿ ಇಣುಕಿ ನೋಡುತ್ತಿದೆ
ಭಾವಾಂತರಂಗದ, ಕಾವ್ಯ ಬಂಧ
ಭಾವವಿಲ್ಲದ ಬಂಧನವೇತಕ್ಕೆಂದು ಕೇಳುತ್ತಿದೆ
ಅದೇಷ್ಟು ಛಂದ....!

ಭಾವ ನೀನು, ಬಂಧನ ನಾನು
ಸವಿಯೋಣ ಬಾರೇ ಪ್ರಿತಿಯ ಹನಿಜೇನು
ಕೂಡಿಕೊಂಡು ಕಲಿಯೋಣ, ಬದುಕಿನ ಕೌದಿ
ಹೊಲಿಯುವ ಕಸೂತಿ; ಹೊಸೆದಂತೆ ಒಂದು
ಹೊಸ ಕವಿತೆಯ ಸಂಸ್ಕøತಿ

ವಿರಹದಗ್ನಿಯಲ್ಲಿ ಉರಿದುರಿದು
ಬದುಕು ವಿರಹದಗ್ನಿಯಲ್ಲಿ
ಉರಿದುರಿದು.....
ತಡಪಡಿಸುವ ಜೀವ
ಬದುಕಬೇಕು ಎಂಬ ದಾಹ

ಹುಟ್ಟು ಸಾವಿನ ನಡುವೆ
ಬಂದು ಹೋಗುವ
ವಿಧಿಯಾಟದ ಪಾತ್ರ
ದಟ್ಟ ಕರಿನೆರಳಾಗಿ
ಬಂದು ನಿಲ್ಲುವ ಭಿತ್ತಿ ಚಿತ್ರ!

ಆಸೆ ಆಕಾಂಕ್ಷೆ ಬಯಕೆಗಳು
ಕನಸುಗಳಾಗಿ ರೂಪುಗೊಳ್ಳುವ-
ಹೊತ್ತಿಗೆ, ಹೊತ್ತು ಗೊತ್ತಿಲ್ಲದೇ
ಸುಡುವ ಸೂರ್ಯನ ನೆತ್ತಿಗೇರಿ
ಕುಳಿತಾಗ....?

ಸೂರ್ಯನೊಂದಿಗೆ ಸರಸ
ಆಡುವ ಸಮಯ, ಛಲವಿಟ್ಟು
ಗೆದ್ದು ಬರುವೇನೆಂಬ ಭ್ರಮೆಯಲ್ಲಿ
ತೇಲಾಡುವ ಪ್ರಾಯ!

ಪ್ರೀತಿಯೊಂದೇ ಸಾಕು
ಸಾವಿರಾರು
ಶತ ಪ್ರಯತ್ನ ಮಾಡಿದೆ
ನೋವು ಮರೆಯಲೆಂದು
ಬಿಡುವಿಲ್ಲದ ಜಗತ್ತು
ಮಾರಕಾಸ್ತ್ರಗಳು ಹೊತ್ತು
ಪಡೆದುಕೊಂಡಿದೆ
ನನ್ನನ್ನು ಮುಗಿಸಲೆಂಬ ಶಪತ್ತು

ನನಗೆ ಅಡಂಬರದ ಜೀವನ ಬೇಕಿಲ್ಲ
ಕೇವಲ ಪ್ರೀತಿಯೊಂದೇ ಸಾಕು
ಬದುಕುವ ಆಸೆ, ಗುರಿ ನನಗಿಲ್ಲ
ಹೀಗೆ ಸುಮ್ಮನೆ ಬಂದಿರುವೆ
ನನ್ನ ಭವಿಷ್ಯವನ್ನು ಅರಿಯಲು

ಮನಸ್ಸಿದ್ದರೆ ಒಮ್ಮೆ
ದಿನ ನನ್ನ ಮೇಲೆ
ಮನ ತೃಪ್ತಿ ಆಗುವಷ್ಟು ನಕ್ಕು ಬಿಡಿ
ಆದರೆ....
ನಾಳೆ ಎಂಬ ದಿನಗಳಲ್ಲಿ
ಅತ್ತು ಬಿಡಲು, ನನ್ನ ಹಾಗೆ
ಮಾರ್ಗಗಳನ್ನು ಹುಡುಕುವಿರಿ

ಪ್ರಿತಿಯೆಂದರೇನು ಗೆಳತಿ
ಕಣ್ಣಿನಿಂದ ನೋಡದೆ
ಹೃದಯದಲ್ಲಿ ಸೇರಿಕೊಳ್ಳುವ
ನೆನಪುಗಳು ಪ್ರೀತಿಯೇನು ಗೆಳತಿ

ಅಂತರಂಗವೆಂಬ ನೋಟದಿಂದ
ಕಾಣುವ ವೈಭವ
ಸ್ಪರ್ಶದ ಅನುಭವ
ಪ್ರೀತಿಯೇನು ಗೆಳತಿ....?

ಹೇಳು ಪ್ರಿತಿಯೆಂದರೇನು
ಮೊಬೈಲ್ನಿಂದ....ಮೊಬೈಲ್ಗೆ ಬಂದ
ಮಿಸ್ಡ್ ಕಾಲ್! ಒಂದು ಪುಟ್ಟ ಸಂದೇಶ
ಗೊತ್ತು ಪರಿಚಯವಿಲ್ಲದವರು ಕಳುಹಿಸಿದಾಗ
ಪ್ರೀತಿಯೇನು ಗೆಳತಿ....?

ನೂರು ಭಾವ ಪ್ರತಿಬಿಂಬಿಸುವ
ಒಂದು ಸಾಲಿನ ಪುಟ್ಟ ಸಂದೇಶ
ಸೃಷ್ಠಿಸುವ ಅವಾಂತರ ಪ್ರೀತಿಯೇನು ಗೆಳತಿ!









ಜೀವನ ಜೇನುಗೂಡಲ್ಲ
ಜೀವನ ಜೇನುಗೂಡಲ್ಲ
ಎಲ್ಲೆಡೆಯ ಸುಗಂಧ ಹೀರಿ
ಗೂಡು ಕಟ್ಟುವ ದುಂಬಿಗಳು ನಾವಲ್ಲ

ಹಾರುವ ಹಕ್ಕಿ
ಹರಿಯುವ ನದಿ
ಬೀಸುವ ಗಾಳಿಗೆ
ಅಡ್ಡಗೋಡೆ ಕಟ್ಟುವವರು ನಾವು

ನಮ್ಮದು ನಮ್ಮವರೆಂಬುದು
ಬರೀ ನಾಟಕ, ದೊಂಬರಾಟ
ಸ್ವಾರ್ಥಕ್ಕಾಗಿ ನಡೆಸುವ
ಅಧಿಕಾರಕ್ಕಾಗಿ ಬಳಸುವ ಹಸುವಿನ
ಮುಖವಾಡದ ಹುಲಿಯಾಟ....!!

ಜೀವನ ಜೇನುಗೂಡಲ್ಲ
ಗೂಡಲ್ಲಿ ಜೇನು ರಸ ಉಳಿದಿಲ್ಲ
ವಿರಸ, ವೈಸಮ್ಯ, ದ್ವೇಷ, ವೈರಾಗ್ಯ
ಮನಸ್ಸೆಂಬ ಗೂಡಿನಲ್ಲಿ ಹೊಟ್ಟೆಕಿಚ್ಚು
ಹೆಚ್ಚುತ್ತಿದೆ ಅನಾರೋಗ್ಯ

ನತದೃಷ್ಟ ಹುಡುಗಿ
ನತದೃಷ್ಟ ಹುಡುಗಿ
ಏನೂ ಅರಿಯದ ಮುಗ್ಧೆ
ಅಂತೂ..... ಅಲ್ಲ
ಮುಗ್ಧೆಯನ್ನಾಗಿ ಮಾಡಿದ್ದಾರೆ ಅವಳನ್ನು

ನತದೃಷ್ಟ ಹುಡುಗಿ
ನಿನ್ನೆಯತನಕ ಇದೇ ನಗರದಲ್ಲಿ
ಜನಗಳ ಕಾಲ್ತುಳಿದಲ್ಲಿ
ಹಸಿವಿನಿಂದ ನರಳುತಿದ್ದಳು

ರಸ್ತೆ ಮಧ್ಯೆದಲ್ಲಿ ಇಂದು
ಅವಳ ಹಸಿದ ಹೊಟ್ಟೆ ತುಂಬಿಕೊಂಡಿದೆ
ಕಾಮದಾಹಿ ಜನಗಳ ಬಾಹು ಬಂಧನದಿಂದ

ನತದೃಷ್ಟ ಹುಡುಗಿ
ಹಸಿವಿನ ಹಾಹಾಕಾರದಲ್ಲಿ
ತಡಪಡಿಸುತ್ತಿರುವಾಗ
ಮನ ಬಂದಂತೆ ಕುಣಿಸಿ, ತಣಿಸಿದರು
ನಾವು ಮೂಕ ಪ್ರೇಕ್ಷಕರಾಗಿ
ನಿಂತಿರುವುದಷ್ಟೇ ಸತ್ಯ!

ಈಗ ಯಾವುದೇ ಚಂಡಮಾರುತದ
ಸುನಾಮಿ ಅಲೆಗಳಂಥ ಹೊಡೆತಕ್ಕೂ
ಜಗ್ಗುವುದಿಲ್ಲ ಅವಳು....ಹೇಗೋ
ಅವಳ ಜೀವನ ಸುಖಾಂತ,
ನಿಂತ ನೀರಾಗಿ ಜೀವಂತವಾಗಿ ಉಳಿದಿದೆ

ಅವಳ ಮೇಲೆ ನೇರದೃಷ್ಟಿ; ಬಹಳ ಹೊತ್ತು
ಬಿರುತ್ತೇವೆ ಹೊರತು
ಕೈ ಎತ್ತಿ ಹೇಳುವುದಿಲ್ಲ ನಾವು
ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿರುವುದಕ್ಕೆ
ಅನುಮಾನವೇ ಇಲ್ಲ.... ಕಾರಣ?
ಇದಕ್ಕೆ ಸಾಕ್ಷಿ ನತದೃಷ್ಟ ಹುಡುಗಿ

ನೆನಪುಗಳೇ ಹೀಗೆ...
ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಕಾಲು ಕೆದರಿ ಕಾಳಗಕ್ಕಿಳಿಯುವ
ಗೂಳಿಯಂತೆ!

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಮೌನ ಮಾತುಗಳ ಮಧ್ಯೆ
ಬಂದು ಹೋಗುವ
ಬಂಧುಗಳಂತೆ

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಸುತ್ತಿ ಬಳಸಿ ಬರುವ
ಝೇಂಕರಿಸುವ ದುಂಬಿಗಳಂತೆ

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಮನಸ್ಸಿಗೆ ಮುದ ನೀಡುವ
ಮಲ್ಲಿಗೆಯ ಕಂಪು ಬೀರುವಂತೆ

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ನಡೆದಾಡುವ ದಾರಿಯುದ್ದಕ್ಕೂ
ಯಾರ್ಯಾರದೋ ನೆರಳುಗಳು
ಹಿಂಬಾಲಿಸುವಂತೆ

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಅನೇಕ ಗೊಂದಲಗಳ ನಡುವೆ
ಸದ್ದುಗದ್ದಲವಿಲ್ಲದೆ ಕೊರೆಯುವ
ಚಿಂತೆ?

ನೆನಪುಗಳೇ ಹೀಗೆ....ಎಲ್ಲೆಂದರಲ್ಲಿ
ಸದಾ ನನ್ನ ಜೊತೆಗಿರುವ
ನನ್ನದೆ ನೆರಳಿನಂತೆ....?!

ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟ; 01-02-2004

ಕನಸಿನ ಹಂದರದಲ್ಲಿ
ನಿನ್ನ ಪ್ರೀತಿಗಾಗಿ ಹಾತೊರೆದ ಮನಸ್ಸು
ಸೆಳೆಯಿತು ಗೆಳತಿ....
ಗುಟ್ಟಾಗಿ ನಿನ್ನಾ ವಯಸ್ಸು

ಪ್ರೀತಿಯೆಂಬುದು ಅದೇಷ್ಟು ಸೊಗಸು
ಒಂದಿಷ್ಟು ಕೋಪ, ಹುಸಿ ಮುನಿಸು
ಬೆಚ್ಚನೆಯ ಭಾವನೆಗಳಲ್ಲಿ ಕನಸು

ಕನಸಿನ ಹಂದರದಲ್ಲಿ ನೀ
ಬಿಡಿಸಿದ ರಂಗೋಲಿ
ಚಿತ್ತ-ಚಿತ್ತಾರದ ಹಾಡಿಗೆ
ಸುವ್ವಿ-ಸುವ್ವಾಲಿ: ನಾಟ್ಯ ಮಯೂರಿ

ರಾಗ ರಂಗಿನ ಹುಡುಗಿ
ನಿನ್ನ ವಯ್ಯಾರದ ಉಡುಪು
ಬಚ್ಚಿಟ್ಟುಕೊಂಡ ಯೌವ್ವನಕ್ಕೆ ಹೊಳಪು

ಭಾವ ಬಿಂಬದೊಳಗೆ
ರಾಗ-ಅನುರಾಗಕ್ಕೆ
ಕೆಂಪೇರಿತು ಕನ್ಯೆ; ನಿನ್ನ ಕೆನ್ನೆ!

ನಾಚಿಕೆ ಮಡಿವಂತಿಕೆ
ಪ್ರೀತಿಗೇಕೆ ಇರಬೇಕು
ಸುಖ ಸಂಪತ್ತು ಎಂಬುದಿದ್ದರೆ
ಅದು, ನಿನ್ನಲ್ಲೇ ಹುಡುಕಬೇಕು

ಕೂಡಿ ನಲಿಯುವ ಬಾಳು ನಮ್ಮದು
ಹಾಡಿ ಕುಣಿಯುವ ಆಸೆ ತೀರದು
ಹೆಣ್ಣು-ಗಂಡಿನ ಮೋಹವೇ ಅಂತದ್ದು.

ದೇವರಿಗೊಂದು ಮನವಿ
ಜೀವನ ಎಷ್ಟು ವಿಚಿತ್ರ
ಹಾಕಿಕೊಳ್ಳಬೇಕು ಬದುಕಲು
ಮುಖವಾಡಗಳ ಚಿತ್ರ

ಉದ್ಯೋಗ ನಿರುದ್ಯೋಗ
ಇವುಗಳ ನಡುವೆ
ಹೆಂಡತಿ, ಮಕ್ಕಳು ಸಂಸಾರದ ಗೊಡವೆ

ಬೇಕಿತ್ತಾ ನಿನಗೆ
...ದೇವರೆ
ಜಗತ್ತಿನಲ್ಲಿ ಎಲ್ಲಾ
ಬಡವರ ಸಂಕಟ, ವೇದನೆ

ನೀನೊಬ್ಬನೇ ಏಷ್ಟಂತ ನಿಭಾಯಿಸ್ತಿ
ಶ್ರೀಮಂತರ ಕಪ್ಪು ಹಣದಲ್ಲಿಯೇ ಮೆರೆಯುತ್ತಿ
ಬಡವರಿಗೆ ಹೊಟ್ಟೆ ಪಾಡು, ಹಸಿವಿನಲ್ಲಿ ನರಳಸ್ತಿ

ನಿನ್ನ ಬಳಿ ಹುದ್ದೆ ಖಾಲಿ ಇದ್ದರೆ
ತಪ್ಪದೇ ತಿಳಿಸು
ನಿರುದ್ಯೋಗಿಗಳನ್ನು ಕೆಲಸ ಕೊಟ್ಟು ಉಳಿಸು

ಮೋಸ, ವಂಚನೆ, ಭ್ರಷ್ಟಾಚಾರ ಅಳಿಸು
ಕೆಲವರಿಗೆ ಹಣ, ಅಧಿಕಾರದ ಮೇಲಷ್ಟೆ ಮನಸ್ಸು
ನಾಳೆ ಯಾರ ತಲೆ ಒಡೆಯಲಿ ಎಂಬುದೇ
ಹಲವರ ಕನಸು.....

ಯಾರವನು....? ಯಾರವನು
ನಿನ್ನ ಮನದಲ್ಲಡಗಿರುವನು
ನಿನಗೇ ಗೊತ್ತಿಲ್ಲದ ಹಾಗೆ ಸುಳಿದವನು
ಮನದ ಆಸೆಗೆ ಕನಸುಗಳನ್ನು ಕೊಟ್ಟವನು

ಕಚಗುಳಿ ಇಟ್ಟು....ಕುಚಗಳು ಒಂದಿಷ್ಟು
ಸಡಿಲಗೊಳಿಸಿದವನು
ಯಾರವನು....?
ಮುದವಾದ ದೇಹ ಸಿರಿ ಬಯಸಿದವನು

ಅವನ ಬಯಕೆ! ನೂರೆಂಟು ಹರಕೆ
ನಿನ್ನನ್ನೇ ಬಲಿಪಶುವಾಗಿ ಮಾಡುತ್ತಾನೆ ಜೋಕೆ
ಇಷ್ಟಿಷ್ಟೇ....ನಿನ್ನನ್ನು ಮುದಗೊಳಿಸುತ್ತ
ಸನಿಹ ಎಲೆದಾಡಿ, ಮೈಮನ ಹದ ಮಾಡುತ್ತಾನೆ

ನಿನಗೆ ಕನಸಿನ ಏಣಿ ಹತ್ತಿಸುತ್ತಾನೆ
ಕಟ್ಟು ಕಥೆಗಳ ನಿರೂಪಣೆಯಲ್ಲಿ ಬಂಧಿಸಿಡುತ್ತಾನೆ
ನೀನು ಕಥೆಗಳ ನಿರೂಪಣೆಯಲ್ಲಿ ಬಂಧಿಯಾಗಿ
ಕಥೆಗಳಿಂದ ಹೊರಬರದಂತೆ
ಸುತ್ತಲೂ ಜೀವಂತ ಪಾತ್ರಗಳನ್ನು ಹೆಣೆಯುತ್ತಾನೆ

ಯಾರವನು....? ಯಾರು
ನಿನ್ನಿಂದಲೇ ಸ್ಫೂರ್ತಿ ಪಡೆದವನು
ನಿನ್ನ ಮಾನ ಮುಚ್ಚಿಡಲು ಹಂಬಲಿಸಿದವನು
ಎಲ್ಲವೂ ಮುಚ್ಚಿಟ್ಟುಕೊಳ್ಳಲಾಗದೇ
ಪರಿತಪಿಸಿದವನು......!!

ಕಳೆದು ಹೋಗಿರುವೆ
ಕಾಣುವ ಕಣ್ಗಳ ಎದುರಿಗಿದ್ದರೂ
ಕಳೆದು ಹೋಗಿರುವೆ ನಾನು
ಬದುಕಿನ ಬಂಡಿಯ ಚಕ್ರದಡಿ ಸಿಲುಕಿ
ಜೀವನವೆಂಬ ದಾರಿಯಲ್ಲಿ ಕವಿದ
ಕತ್ತಲೆಯ ಗರ್ಭವನ್ನು ಸೀಳುತ್ತ
ಹೊರಟಿರುವೆ ಬೆಳಕನ್ನು ಹುಡುಕುತ್ತ

ಬೆಳಕಿನ ಶೋಧದಲ್ಲಿ ಹಲವು ಸಂಕಷ್ಟಗಳು
ಕಷ್ಟ, ನಷ್ಟಗಳ ನೋವಿನ ಸರಮಾಲೆಗಳು
ಜೊತೆಯಾಗಿಸಿ, ಸಂಸಾರದ ನೊಗವನ್ನು ಹೊತ್ತು
ನಡೆದಿರುವೆ ನಿರಂತರ
ಕಲ್ಲು-ಮುಳ್ಳೆಂಬ ದಾರಿಯಲ್ಲಿ ಸಿಗದು
ಯಾವುದಕ್ಕೂ ಸ್ಪಷ್ಟವಾದ ಒಂದೂ ಉತ್ತರ
ಸುರಿಯುತಿದೆ ಹೆಜ್ಜೆ ಹೆಜ್ಜೆಯಲ್ಲೂ ಕೆಂಪು ನೆತ್ತರ

ಯಾವುದೋ ಕನಸು, ಯಾರದೋ
ಕಲ್ಪನೆ, ಹಾಗೇ ಒಮ್ಮೊಮ್ಮೆ ಬಂದು
ಹೋಗುತವೆ ಸುಮ್ಮನೆ
ಅದಕ್ಕೆ ಸ್ಪಷ್ಟವಾದ ಚಿತ್ರಣವಿಲ್ಲ
ನಿಖರವಾಗಿ ಬಣ್ಣವಿಲ್ಲ
ಹುರುಪಿನ ಆಸೆಯಲ್ಲಿ ದಟ್ಟವಾದ
ಅನುಭವವಿಲ್ಲ, ವಾಸ್ತವಿಕ ಜೀವನದಲ್ಲಿ
ಅದೊಂದು ಒಡೆದ ಕನ್ನಡಿ
ಚಿತ್ರ-ವಿಚಿತ್ರವಾಗಿದೆ ಬದುಕಿನ ಮುನ್ನುಡಿ

ಭ್ರಮ್ಮ ಬರೆದ ವಿಧಿ ಬರಹ ಅಳಿಸಲಾಗದು
ನಮಗೆ ನಾವೇ ಬರೆದುಕೊಂಡ
ಗೋಡೆ ಬರಹ ಉಳಿಸಲಾಗದು
ಹಾಗೇ ಜೀವನದುದ್ದಕ್ಕೂ
ಬದುಕಿನ ಬಂಡಿ ಸಾಗಬೇಕು

ಕಲ್ಲು-ಮುಳ್ಳೆಂಬ ದಾರಿಯಲ್ಲಿ ಮುನ್ನಡೆಯುತ್ತ
ಕಣ್ಣಿಗೆ ಕಾಣದ ತಗ್ಗು ದಿಣ್ಣೆಯಲ್ಲಿ ಉರುಳಬೇಕು
ಇದೇ ಜೀವನ, ಇದೊಂದು
ಬದುಕೆಂದು ನಂಬಿಕೊಂಡು ಬಾಳಬೇಕು
ಶಾಶ್ವತ ಮಲಗಿಕೊಂಡ ಜಾಗದಲ್ಲೇ
ಒಂದಿಷ್ಟು ಆಳವಾಗಿ ಚಿಂತಿಸಬೇಕು

ಪುಸ್ತಕ ತತ್ವ-ಜೀವನ ಸತ್ತ್ವ
ವಿಶ್ವ ಪುಸ್ತಕ ದಿನಾಚರಣೆ
ಬರೀ ಆಚರಣೆಯಲ್ಲ
ಪುಸ್ತಕ, ಓದು ಬರಹ
ಅಳವಡಿಸಿಕೊಂಡವರ ಜೀವನ
ಕಹಿಯಲ್ಲ, ಎಂದೆಂದಿಗೂ ಅದು ಸಿಹಿಬೆಲ್ಲ

ನಿಜ ಜಿವನದಲ್ಲಿ ಪುಸ್ತಕದ ಮಹತ್ವ
ಅರಿತುಕೊಂಡು, ಪಾಲಿಸಬೇಕು ಅದರೊಳಗಿನ ತತ್ತ್ವ
ಪುಸ್ತಕದೊಳಗಡಗಿದೆ.....
ಸುಖ, ಶಾಂತಿ, ನೆಮ್ಮದಿಯ ಸತ್ತ್ವ

ಪುಸ್ತಕ ಓದಿ ದೊಡ್ಡವರಾದವರು
ಅದೇಷ್ಟೋ ಜನ....
ಪ್ರಪಂಚವೇ ನಿನ್ನನ್ನು ಬಿಟ್ಟು ಹೋದರೂ
ನಿನ್ನಲ್ಲಿರುವುದು ಪುಸ್ತಕದ ಜ್ಞಾನ
ಬೇಕಾಗಿದೆ ಪ್ರಸ್ತುತ ಸಮಾಜಕ್ಕೆ
ಪ್ರತಿ ಮನೆಯಲ್ಲೊಂದು ನೆಮ್ಮದಿಯ ತಾಣ

ವಿಶ್ವ ಪುಸ್ತಕ ದಿನ ಆಚರಿಸುವ ಮುನ್ನ
ಒಂದು ಪುಸ್ತಕದ ಜ್ಞಾನವನ್ನಾದರೂ ಇದ್ದರೆ ಚೆನ್ನ
ನಿನ್ನಲ್ಲಿರದಿದ್ದರೂ ಸರಿಯೇ, ಒಡವೆ ಚಿನ್ನ
ಪುಸ್ತಕ ಸಂಸ್ಕøತಿಯ ಆಳವನ್ನರಿಯಬೇಕು
ಪುಸ್ತಕ ಖರೀದಿಸಿ ಓದುವವನೇ
ಒಬ್ಬ ಸಮಾಜ ಸುಧಾರಕ ಕೇಳಣ್ಣ!!





ಹೆತ್ತವಳು
ಎಲ್ಲಿದ್ದವೂ ನಿನ್ನ
ಮನದಂಗಳದ ಆಸೆಗಳು
ಪದಪೂಣಿಕೆ ಕನಸುಗಳು
ಬಿಗಿಗೊಂಡ ಬಯಕೆಗಳು

ನಿನ್ನ ಹಾವಭಾವ ಬಣ್ಣ
ಸ್ವಲ್ಪ ಅದಲು-ಬದಲು
ಒಂದಿಷ್ಟು ತಾಳ್ಮೆ, ಸಹನೆ ಕೂಡ
ಹೆಚ್ಚಿಸಿಕೊಂಡವಳು

ಬಾಡಲಿಲ್ಲ ನಿನ್ನ ಆಸೆ, ಕನಸು, ಬಯಕೆಗಳು
ಬಯಕೆಯ ಬಸಿರಿನೊಳಗೆ ನೋವು ಹೆಚ್ಚಾದರೂ
ಒಮ್ಮೊಮ್ಮೆ ನರಳುವಿಕೆ, ಮಗದೊಮ್ಮೆ
ಏನೋ ಹೊಸದೊಂದು ಪಡೆದುಕೊಳ್ಳುವ
ಖುಷಿ-ಸಂಭ್ರಮದ ಸಂಚಿಕೆ

ಬಂಧನ
ಉಸಿರೇ ನೀ ಮೌನವಾಗಿರಬೇಡ
ನನ್ನ ಉಸಿರಾಟ ನಿಂತು ಹೋದಿತು
ನಿನ್ನ ಬಿಟ್ಟು ನನಗ್ಯಾರಿಲ್ಲ
ನೀನೆ ನನ್ನ ಜೀವ ಎಂದಿತು

ನಿನ್ನ ಸ್ಪರ್ಶ ಬಿಸಿ ಉಸಿರಾಟ
ದಿನವೂ ನೀನು ಬರೆದಂತೆಲ್ಲ
ನಿತ್ಯ ಸುಮಂಗಲಿಯ ಹಣೆಯ ಮೇಲೆ
ಶೋಭಿಸುವಂತೆ ಕುಂಕುಮ
ನನ್ನ ನಿನ್ನ ಬಂಧನ

ನಿನ್ನ ಕೈ ಹಿಡಿದು ನಡೆಸುವವನ
ಮನದ ಭಾವನೆಗಳು ಅದೇಷ್ಟು ಛಂದ
ಅವನ ಗೆಳೆಯ ನೀನಾಗಿರುವುದಕ್ಕೆ
ನಮ್ಮಿಬ್ಬರಲ್ಲಿ ಬಂಧ!

ನಮ್ಮಿಬ್ಬರನ್ನು ಯಾರೂ....ಎಂದಿಗೂ
ದೂರ ಮಾಡರು...ಒಂದು ವೇಳೆ
ದೂರ ಮಾಡಲು ಹೊರಟವನ ಬಾಳಿನಲ್ಲಿ
ಇರುವುದಿಲ್ಲ? ಆಸೆ ಕನಸುಗಳ ಸೂರು

ವಿಷ ಸರ್ಪದ ಮದ್ದು
ನಾನೊಂದು ಮಾತೊಂದು ಹೇಳುವೆ ಗೆಳತಿ
ದಯವಿಟ್ಟು ಕಿವಿಗೊಟ್ಟು ಕೇಳು...
ನಾ ಕೊಟ್ಟಿರುವ ಪ್ರೇಮ ಪತ್ರಕ್ಕೆ
ನೀ ಬರೆದ ಉತ್ತರ ಏನಿರಬಹುದೆಂದು
ಕುತೂಹಲದಿಂದ ಬಿಚ್ಚಿ ನೋಡಿದೆ
ಮನವ ಬಿಚ್ಚಿ ಓದಿದೆ

ಬರೆದದ್ದು ಬರಿಮೈಗೆ
ಬರೆ ಎಳೆದ ಹಾಗಿತ್ತು
ನನ್ನ ಮನದೊಳಗಿಂದ ಸದ್ದಿಲ್ಲದೆ
ನಿನ್ನ ಪ್ರೀತಿ ಜಾರಿ ಬಿತ್ತು.....

ನತದೃಷ್ಟ ಹುಡುಗನ
ಪ್ರೇಮ ಪಾಶಕ್ಕೆ ನೀ
ಸಿಲುಕಿದ್ದು ಗೊತ್ತಾಯಿತು?!

ಆಗದಿರು ಗೆಳತಿ ಇನ್ಯಾರಿಗೂ
ನನ್ನ ಬಾಳಿಗಿಟ್ಟ ಹಾಗೆ
ವಿಷ ಸರ್ಪದ ಮದ್ದು!!










ಕಥೆಗಾರ ಶ್ರಿಕಾಂತ ಪಾಟೀಲ
(ದಿ.ಶ್ರೀಕಾಂತ ಪಾಟಿಲ್ ಬಟಗೇರಾ, ಕೃಷಿ ಅಧಿಕಾರಿಗಳು ಇವರ ಒಂದು ಸವಿ ನೆನಪಿಗಾಗಿ)

ನಿವ್ಯಾಕಾದ್ರೂ ನಮ್ಮಿಂದ ದೂರ ಸರದ್ರಿ
ಸಾವಿಗೊಂದಿಷ್ಟು ಕರುಣೆ ಇರಬಾರದೇನ್ರೀ
ತಮ್ಮಾ ಬಾ ಇಲ್ಲಿ...ಈಗೇನ್ ಬರೀತಾ ಇದ್ದಿ?
ಇಷ್ಟು ನೀವು ಕೇಳಿದ್ರೆ ಸಾಕಿತ್ರಿ
ಸೊಮಾರಿ ಸಾಹಿತಿಗೂ ಏನಾದರೂ
ಬರೆಯಲು ಹಚ್ಚುತ್ತಿದ್ರಿ

ನೀವು ಬರೆದದ್ದು ಹೆಚ್ಚು ಕಥಾ ಸಾಹಿತ್ಯ
ಬಟಗೇರಿ ಕೆಂಪು ಮಣ್ಣಿನ ವಾಸನೆ
ಗ್ರಾಮ್ಯ ಭಾಷಾ ಸೊಗಡು
ನಿಮ್ಮ ಕಥೆಗಳಲ್ಲಿ ಇನ್ನೂ ಜೀವಂತ
ಬೆಂಕಿ ಮರೆಯ ತಂಪು ಕಥಾ ಸಂಕಲನದಲ್ಲಿ
ಸಾಮಾನ್ಯ ವರ್ಗ ಕುಟುಂಬದವರ ಜೀವನದ ಸುತ್ತ
ಹೆಣೆದಿರುವ ಕಥಾ ಶೈಲಿ, ನಿರೂಪಣೆ ಅದ್ಭುತ!

ಶ್ರೀಕಾಂತ ಪಾಟೀಲರೆಂದರೆ
ಎಂಥವರನ್ನೂ ಕೂಡಾ ಬೆರಗುಗೊಳಿಸುವಂಥ
ನೈಜ ಚಿತ್ರಣಗಳನ್ನು ತೆರೆದಿಡುವ ಸ್ವಂತ-
ವಾಸ್ತವ ಬದುಕಿನ ಕಥೆಗಳು ಬರೆಯುವ ಕಲೆ ಕರಗತ
ಮಾಡಿಕೊಂಡಿದ್ದಿರಿ ನೀವು, ಸಾಹಿತ್ಯ ಲೋಕದ
ಹೈದ್ರಾಬಾದ ಕರ್ನಾಟಕಕ್ಕೆ ನೀವೇ ಶ್ರೀಮಂತ

ನೀವು ಕೃಷಿ ಅಧಿಕಾರಿಯಾಗಿ ವೃತ್ತಿಯಲ್ಲಿದ್ರಿ
ಪ್ರವೃತ್ತಿಯಲ್ಲಿ ಸಾಹಿತ್ಯ ಚಿಂತಕರು,ಕಥೆಗಾರರಾಗಿದ್ರಿ
ಯುವ ಸಾಹಿತಿಗಳನ್ನು ಗುರುತಿಸಿ ಬೆನ್ನು ತಟ್ಟಿದ್ದಿರಿ
ಯುವ ಕವಿಗಳಿಗೆ ಮಾರ್ಗದರ್ಶಿಯಾಗಿ ಪ್ರೋತ್ಸಾಹಿಸಿದ್ರಿ
ಮುನ್ನುಡಿ ಬೆನ್ನುಡಿ ಬರೆದು ಉತ್ತೇಜಿಸಿದ್ರಿ
ಸೂಕ್ತ ವೇದಿಕೆ ಕೊಟ್ಟು ನಮ್ಮನೀವು ಬೆಳೆಸಿದ್ರಿ
ಆದರೆ...! ವಿಧಿ ಕರೆದೊಯ್ದೆಡೆ ಯಾಕ್ಷ್ಟು ಬೇಗ್ ಹೋದ್ರಿ?

ಬರಹಗಾರ ಸತ್ತಾಗ? ಅವನ ಬರಹ ಜೀವಂತ
ಓದುತ್ತೇವೆ ಇಂದಿಗೂ ನಿಮ್ಮ ಕಥೆಗಳು ನಿತ್ಯ
ಕಥೆಗಾರ ಕಥೆಯಾದದ್ದು ಎಂಥಾ ದುರಂತ
ನೀವು ನಮ್ಮೊಂದಿಗಿಲ್ಲವಾದರೂ...ನಿಮ್ಮ ಕನಸುಗಳು
ನೆನಪುಗಳು, ನಮ್ಮೊಂದಿಗಿರುತ್ತವೆ; ನಾವಿರುವತನಕ ಶಾಶ್ವತ

ರೈತನೇ ಆಳರಸರ ದೊರೆ
ರೈತ ನೀ ಹೊಲವನ್ನು ಉತ್ತಿ ಬಿತ್ತಿ ಬೆಳೆದು
ನೇಗಿಲ ಕುಂಟೆ ಹೊಡೆದು
ಹುಲುಸಾಗಿ ಬೆಳೆಯುವ ಬೆಳೆಗೆ
ಕಾಯಬೇಕಣ್ಣ ದೇವರ ಕೃಪೆಯ ಮಳೆಗೆ

ರೈತನೆಂದರೆ....?
ದೇಶದ ಎಲ್ಲಾ ಜನತೆಯ ತೊಂದರೆ
ನೀಗಿಸುತ್ತ, ಆಗುತ್ತಾನೆ ಇತರರ ಕಷ್ಟಕಾಸರೆ
ರೈತನೇ ನಮ್ಮ ದೇಶದ ಆಳರಸರ ದೊರೆ

ರೈತನಿಲ್ಲದೆ ಜೀವನ ಬಂಡಿ ಮುಂದೆ ಸಾಗದು
ಅನ್ನದಾತನಿವನು
ಕಷ್ಟಪಟ್ಟು ದುಡಿದರೆ ಮಾತ್ರ ದೇಶ ಉಳಿಯುವುದು
ರೈತ ದುಡಿಯದಿದ್ದರೆ? ಹಸಿವಿನ ಹಾಹಾಕಾರ
ಪ್ರತಿಯೊಬ್ಬರ ಜೀವನದಲ್ಲೂ ಎದುರಾಗುವುದು

ಭಾರತ ದೇಶದ ಇತಿಹಾಸದಲ್ಲಿ
ರೈತನಿಗಿಟ್ಟ ಹೆಸರೇ ಅನ್ನದಾತ
ಅನ್ನದಾತನ ಕೈ ತುತ್ತಿನಿಂದಲೇ
ಹೊಟ್ಟೆ ತುಂಬಿಸಿಕೊಳ್ಳುವ ನಾವು
ರೈತನನ್ನು ಜೀತದಾಳನ್ನಾಗಿ ದುಡಿಸಿಕೊಳ್ಳುವುದು
ಅದೇಷ್ಟು ಸೂಕ್ತ...?

ಸರ್ಕಾರದ ಸೂತ್ರಗಳಲ್ಲಿ
ಬಂಧಿಯಾಗಿರುವನು ರೈತ
ಸೂತ್ರದ ಬೊಂಬೆಯಾಗಿ, ದುಡಿಯುವನು
ಅದು ನಿಮಗೆ ಗೊತ್ತ?

ತಪ್ಪಲಿಲ್ಲ ರೈತನ ಬವಣೆ
ಅವನು ಸತ್ತಾಗ ಯಾರು ಹೊಣೆ
ರೈತನ ಸಾವಿಗಿಲ್ಲ ಕಿಮ್ಮತ್ತು ನಾಲ್ಕಾಣೆ!
ರೈತನ ಕಷ್ಟ ಸುಖದಲ್ಲಿ ಭಾಗಿಯಾದರಷ್ಟೇ
ನಮಗೆಲ್ಲ ಉಳಿವುಂಟು......
ಇಲ್ಲವಾದರೆ, ಅಳಿವಿನಂಚಿನಲ್ಲಿ
ನಮ್ಮ-ನಿಮ್ಮೆಲ್ಲರ ಬದುಕುಂಟು

ಕಳೆದು ಹೋದವರು
ಕಳೆದು ಹೋದವರು
ಹಿಂತಿರುಗಿ ಬರಲಿಲ್ಲ
ಮರೆಯದ ಅವರ ನೆನಪುಗಳು
ಬದುಕಲು ಬಿಡಲಿಲ್ಲ

ಪ್ರಸವ ಕಾಲದಲ್ಲಿ ಹುಟ್ಟಿ
ಕಳೆದು ಹೋದ ಕವಿತೆಯ ಹಾಗೆ
ಅವರ ಅಗಲಿಕೆ
ಹೇಗೆ ಸಹಿಸಿಕೊಳ್ಳಲಿ ಚಡಪಡಿಕೆ

ಪ್ರತಿದಿನ ಪ್ರತಿಕ್ಷಣ
ಕಣ್ಮುಂದೆ ಇದ್ದವರು
ಕಣ್ಮರೆಯಾಗಿ ಹೋದರು
ಅವರ ಕನಸು, ಕಲ್ಪನೆ, ಸಾಧನೆ
ಹೆಗಲೇರಿಸಿ ಮನಸ್ಸಲ್ಲೆ ಉಳಿದರು

ಹುಟ್ಟು-ಸಾವಿಗೂ ಅಂತರ ಜೀವನ
ಉಸಿರಾಟ ಒಂದೇ ನಮಗೆ ಸಂಜೀವನ
ಇರುವತನಕವೇ ಸಾಧಿಸಬೇಕು
ಸತ್ತ ಬಳಿಕ? ಪರರ ಮೇಲೇಕೆ
ಹೋರಿಸಬೇಕು
ಬದುಕಿದ್ದು ಸಾಧಿಸಲಾಗದವನು
ಸತ್ತ ಶವಗಿಂತ ಕಡೆ! ಎಂಬುದು ತಿಳಿದಿರಬೇಕು




ಚಿತ್ತ ಚಂಚಲೆ
ತುಂಬು ಹರೆಯದ ಚೆಲುವೆ
ಯಾಕಿಷ್ಟು ಅವಸರ
ತಡೆಯಲಾಗದಷ್ಟು ಕಾಮಾತುರ
ಕಂಡು ಬೆರಗಾದೆ ನಿನ್ನ ಅಂತ:ಪುರ

ಬಟ್ಟೆಯ ಹಂಗಿಲ್ಲದೆ
ನೀನಾದೆಯಾ ಬೆತ್ತಲೆ
ನಾನು ಕೂಡ ನಿನ್ನಂತೆಯೆ
ಬಾ ಚಿತ್ತ ಚಂಚಲೆ

ಬಯಲು ಆಲಯದೊಳಗೆ
ಯಾರೂ ಇಲ್ಲ, ಅಪ್ಪಿಕೋ ಚಂದ್ರಿಕೆ
ಎಲ್ಲಾ ಕಳಚಿದ ಮೇಲೆ,ಯಾತರ ನಾಚಿಕೆ

ಸೂರ್ಯನ ಬಿಸಿಲು ತಾಪ
ಮಳೆಯಲ್ಲಿ ಕಳೆದುಕೊ
ಏನಿದ್ದರೂ ನಿನ್ನ ಕೋಪ
ನನ್ನೀ ಪ್ರೀತಿಯ ಸಿಂಚನದಲ್ಲಿ
ಉಳಿಸಿಕೊ....ತಣಿಸಿಕೋ

ನನ್ನೆದೆಯ ಗೂಡಲ್ಲಿ ಬರೆದಿರುವೆ
ನಿನ್ನದೇ ಹೆಸರು ಒಲವೆ
ಕಣ್ಣಿಗೆ ಕಾಣದ ಮಿಥ್ಯ
ನಿನ್ನಾ ನೆರಳಿನಷ್ಟೇ ಸತ್ಯ!

ಹರೆಯದಲ್ಲಿ ಬಯಸಿದ್ದೆಲ್ಲ ಸಿಗದು
ಸಿಕ್ಕಷ್ಟು ಬಾಚಿಕೊಂಡರೆ ಸಾಕು
ಸ್ಪರ್ಶ, ಅಲಿಂಗನ; ಸ್ಖಲನದ ಬಳಿಕ
ಸಾಕ್ಷಿಯಾಗಿರಲಿ ಬಸಿರು
ಅದೇ ಜೀವನದುದ್ದಕ್ಕೂ
ಹೊಸ ಬದುಕಿಗೊಂದು ಉಸಿರು


ಕಸಬರಿಗೆ ಬೇಕಾಗಿದೆ
ಎಲ್ಲಿಯವರೆಗೆ ಬಿಟ್ಟು
ಕೊಡುವುದಿಲ್ಲವೋ ಮೌನ
ತಪ್ಪಿದ್ದಲ್ಲ ಅನ್ಯಾಯ, ಶೊಷಣೆ
ಅದಕ್ಕಾಗಿ ಬೇಕಾಗಿದೆ
ಪ್ರತಿಭಟನೆ ಘೊಷಣೆ!

ಈಗ ಇಲ್ಲಿ ಯಾರೂ ಮುಗ್ಧರಲ್ಲ
ಮುಗ್ಧರಾಗಿ ಉಳಿದವರಿಗೆ
ಬದುಕುವ ದಾರಿಯೇ ಇಲ್ಲ
ಸಿಡಿದೇಳಬೇಕು ಎಲ್ಲರೂ
ಸ್ವಾರ್ಥ ಬಿಟ್ಕೊಟ್ಟು
ನಮ್ಮಿ ಕೆಚ್ಚೆದೆಯೊಳಗಿರಬೇಕು ಒಗ್ಗಟ್ಟು
ಬಾ...ದಿಟ್ಟ, ದೃಢವಾದ ಹೆಜ್ಜೆಯನ್ನಿಟ್ಟು

ಪ್ರಜ್ಞಾವಂತರ ನಾಡಿನಲ್ಲಿ
ಬದುಕು ಹೋರಾಟ ಸ್ವಾತಂತ್ರ್ಯ
ಯಾರದೋ ದಬ್ಬಾಳಿಕೆಯಲ್ಲಿ ನಲುಗುತ್ತಿವೆ
ರಾಜಕೀಯದ ಕುತಂತ್ರಕ್ಕೆ ಸಿಲುಕಿವೆ
ಅದಕ್ಕಾಗಿಯೇ ಇಲ್ಲಿ ನಿತ್ಯವೂ
ಪ್ರತಿಭಾವಂತರ ಕೊಲೆಗಳು ನಡೆಯುತ್ತಿವೆ
ಮುಖವಾಡ ಧರಿಸಿದವರ ಸಂಗದಲ್ಲಿ ಸಾಯುತಿವೆ

ಜನಗಳೇ ಕೇಳಿಸದೆ ನಿಮಗೆ
ಅನ್ಯಾಯ,ಶೋಷಣೆಗೊಳಗಾದವರ ವೇದನೆ
ಮುಖವಾಡಗಳ ಕಣ್ಣಲ್ಲೇ ಕಾಣುತಿವೆ
ಅದೇಷ್ಟೋ ಪ್ರತಿಭಾವಂತರ ಶವಗಳು!

ಪೊಳ್ಳು ಭರವಸೆಗಳಿಗೆ
ಸುಳ್ಳು ವೇದಿಕೆಗಳಿಗೆ
ಮೆರವಣಿಗೆ ಆಗದಿರಿ ಜೋಕೆ!
ದೂರ ಸರಿಯದಿರಲಿ
ಹೋರಾಟ, ಕೂಗೂ, ಪ್ರತಭಟನೆಯ ಒಗ್ಗಟ್ಟು
ಅನ್ಯಾಯದ ಕಸವನ್ನು ಗುಡಿಸಲು
ನ್ಯಾಯದ ಕಸಬರಿಗೆಯೊಂದು ಬೇಕಾಗಿದೆ

ಗೆಳತಿ
ನಿನ್ನ ಮನದೊಳಗೇನೋ
ಒಂದು ಆಸೆ! ಪುಟಿಯುತಿದೆ
ಬರೆದು ಬಿಡಲೆ ಗೆಳತಿ
ನಿನ್ನಿ ದೃಷ್ಠಿಯಲ್ಲಿ ಬೆರೆತುಕೊಂಡಿರುವ
ಪ್ರೇಮ ಗೀತೆ, ಭಾಷೆ

ಮಾತಿಲ್ಲದ ಮೌನದಲ್ಲಿ
ನಿಂತ ನಿನ್ನ ಭಂಗಿಯನ್ನು
ಕಂಡು, ಚಿಗುರೆಲೆಗಳೊಂದಿಗೆ
ಮೈ ತುಂಬಿಕೊಂಡು ನಿಂತ
ಹೂ ಗಿಡವು ಕೂಡ? ನಾಚಿಕೊಂಡಿದೆ

ನಿನ್ನ ಹಾಗೆ...ಹೊಸ ಹುರುಪು
ಹೊತ್ತು ತಂದಿದೆ
ಹೂವಿಗಿಂತ ಚೆಲವು ನಿನ್ನದು
ಹೂ ಯಾಕೆ ಬೇಕು? ನಿನಗೆ
ಒಂದೂ ತಿಳಿಯದು

ನೆನಪಿರಲಿ; ತುಂಬು ಹರೆಯದವಳೆ
ಹೋವೊಂದು ಬಾಡಿ ಹೊದರೂ
ಕವಿತೆಯೊಂದೇ ನಿನಗೆ ನೆರಳು ಎಂಬುದು
ನಿನ್ನಾ ಯೌವ್ವನ
ಕರಗಿ ಹೋಗುವ ಮುನ್ನ

ಅಪ್ಪಿಕೋ ಒಮ್ಮೆ ಚಿನ್ನಾ! ಎಂದಿತೆ
ಹೂ-ಗಿಡವೆಂಬ ರನ್ನ
ಹಾಕಿಬಿಟ್ಟಿತ್ತಲ್ಲ ಸೌಂದರ್ಯದ ಮೇಲೆ ಕನ್ನ
ಅಲ್ಲೆ ಎಲ್ಲೋ ಕೋಗಿಲೆಯು ಹಾಡುತಿದೆ
ಅದರ ಮಧುರ ಕಂಠದಿಂದ

ಮೋಡದ ಮರೆಯಿಂದ ಹನಿ...ಹನಿ
ಮಳೆಯು ಜಿನುಗಿತಿದೆ ತುಂತುರು
ಮಳೆಯಲ್ಲಿ ನೆನೆಯುತ
ನವಿಲು ಕುಣಿಯುತಿದೆ!
ಅದೇಷ್ಟು ಚಂದ...ಛಂದ!!

ಇಬ್ಬನಿಯು ಮೂಡುವಾಗ
ಮೌನ ಮುರಿದು ಬಾರೇ ಚೆಲುವೆ
ಅಂದಗಾತಿ ನೀನೆ...ಚೆಂದಗಾತಿ ಹೆಣ್ಣೆ
ಚಳಿಗೆ ತಾಳಲಾರೆ
ನಿನ್ನ ಸ್ಪರ್ಶ ಇಲ್ಲದೆ

ನಿನ್ನ ಮನದ ಆಸೆಯೊಳಗೆ
ಅವಿತು ಕುಳಿತ ಕನಸಿಗೆ
ರೆಕ್ಕೆ-ಪುಕ್ಕ ಕೊಡಿಸುವೆ
ಜೊತೆಗೂಡಿಕೊಂಡು ಹಾರುವ ಬಾ
ನನ್ನ ಒಲವೆ...ಚಂದಿರನ ಮಗಳೆ?
ನೀ ಬರುವ ಹಾದಿಯಲ್ಲಿ ಚೆಲ್ಲಿರುವೆ
ಹೂ ಹಾಸಿಗೆ...ಹೂವಿನಾಸೆಗೆ!
ಹಾಳೆಗಳು-ನಾಳೆಗಳು
ಎಲ್ಲಾ ಭರವಸೆಗಳು
ಕಳೆದು ಹೋದ ಮೇಲೆ
ಉಳಿದಿದ್ದು ಬರೀ ನೆನಪುಗಳು

ಎಲ್ಲಾ ಕನಸುಗಳು
ಕರಗಿ ಹೋದ ಮೇಲೆ
ಉಳಿದಿದ್ದು ಬರೀ ಕನವರಿಕೆಗಳು

ಎಲ್ಲಾ ಆಸೆಗಳು
ಹುಸಿಯಾದ ಮೇಲೆ
ಉಳಿದಿದ್ದು ಬರೀ ನಿರಾಸೆಗಳು

ಎಲ್ಲಾ ಬಯಕೆಗಳು
ಬಯಲಾದ ಮೇಲೆ
ಉಳಿದಿದ್ದು ಬರೀ ಬೆತ್ತಲೆ ಚಿತ್ರಗಳು

ಎಲ್ಲಾ ಭಾವ-ಬಂಧನಗಳು
ಒಂದಾದ ಮೇಲೆ
ಉಳಿದಿದ್ದು ಬರೀ ಕವಿತೆಗಳು

ಎಲ್ಲಾ ಕವಿತೆಗಳು
ಬರೆದಾದ ಮೇಲೆ
ಉಳಿದಿದ್ದು ಬರೀ
ಖಾಲಿ ಹಾಳೆಗಳು-ನಾಳೆಗಳು




ಬಹುಮಾನ
ಎಷ್ಟೋ ದಿನಗಳು ಕಳೆದು ಹೋದವು ನಿನ್ನ ನೆನಪುಗಳಿಂದಲೇ
ಇಂದಿಗೂ ಸಾಗುತಿದೆ ಬದುಕು ಗೆಳತಿ ನಿನ್ನಿಂದಲೇ

ನಿನ್ನ ಮರೆತು ಬದುಕುವುದೆಂದರೆ ಅಸಾಧ್ಯ! ಸಧ್ಯ
ನೀನು ಸಿಕ್ಕರೆ ಸಾಕು ಒಮ್ಮೆ, ಅರ್ಪಿಸುವೆ ಸಾವಿರ ಪದ್ಯ

ನೀನು ನನ್ನ ಬಿಟ್ಟು ಹೋದ ದಿನಗಳಿಂದ ಗೀಚಿದ್ದೇನೆ
ಬರೀ ಕಪ್ಪು ಗೇರೆಗಳಲ್ಲಿ ನಿನ್ನ ರೂಪ ಹಿಡಿದಿಟ್ಟಿದ್ದೇನೆ

ಗೆಳತಿ ನಿನ್ನ ಎಲ್ಲಾ ನೆನಪುಗಳು ಹಾಗೇ ಬಂಧಿಸಿಟ್ಟಿದ್ದೇನೆ
ಬಿಡುಗಡೆಗಾಗಿ ನೀ ಬರುವುದನ್ನೇ ಕಾಯುತ್ತಿದ್ದೇನೆ

ನನಗಾಗಿ ನೀನು ನಿನಗಾಗಿ ನಾನು ಇರುವಾಗಲೇ
ನಿನ್ನದೆಲ್ಲವನ್ನು ನಿನ್ನೊಪ್ಪಿಗೆಯಿಂದಲೇ ಪಡೆದುಕೊಂಡಿದ್ದೇನೆ

ನಿನ್ನೆದೆಯಲ್ಲಿ ಒಂದು ಸ್ಥಾನ ಪಡೆಯುವಾಗಲೇ ಕಳಚಿಕೊಂಡಿದ್ದೇನೆ
ಗೆಳತಿ ನಿನ್ನ ಮನಸ್ಸೊಂದನ್ನು ಹಿಡಿದಿಡಲು ವಿಲಿವಿಲಿ ಒದ್ದಾಡಿದ್ದೇನೆ

ನೀನು ನನ್ನಿಂದ ದೂರವಿದ್ದಷ್ಟು ಪ್ರೀತಿ ಹೆಚ್ಚಾಗಿದೆ
ಗೆಳತಿ ನೀನು ಸಿಗದೆ ಇರುವಾಗ ಮನಸ್ಸು ಹುಚ್ಚಾಗಿದೆ

ನಿನಗಾಗಿ ಏನೇನೋ ಬರೆದು ಪೆಚ್ಚಾಗಿದ್ದೇನೆ ಗೆಳತಿ
ಬದುಕಿಗೆ ನೀನು ಕೊಟ್ಟ ಬಹುಮಾನ ಇದೇನಾ.....ಇದೇನಾ?

ಜೀವನ
ಜೀವನ
ಸಂಬಂಧಗಳ ಉಗಮಕ್ಕೆ
ಮೂಲ ಕಾರಣ
ಅಳಿವು-ಉಳಿವಿಗೆ
ಒಂದು ಸಣ್ಣ ರೋಧನ

ನಾನು-ನನ್ನದು
ನನ್ನವರೆಂಬುದು
ಸ್ವಾರ್ಥ ಸಮಯದಲ್ಲಿ
ಹುಟ್ಟಿರಬಹುದು

ಹುಟ್ಟು-ಸಾವಿಗೂ
ಅಂತರ ಜೀವನ
ಸೃಷ್ಟಿಕರ್ತನ ಕೈಚಳಕಕ್ಕೆ
ಕೊಡಬೇಕು ನಾವು ಬಹುಮಾನ

ಜೀವನವೆಂಬ ಪರದೆಯ ಮೇಲೆ
ಬದುಕಿನ ಆಳ-ಅರಿವು
ಚಿತ್ರಿಸಬೇಕು ನಾವು;ಅದುವೆ
ಸೋಲು ಗೆಲುವಿನ ಅನಾವರಣ

ಸಿಕ್ಕ ಸಂತಸ
ನೋವು ನಲಿವಿನ
ಜೀವ-ಜನ್ಮದ ಗಾಯನ
ಕೋಗಿಲೆಯೊಂದು ಹಾಡಿದರೆ
ಯಾಕೆ? ನಮ್ಮೊಳಗೊಬ್ಬ ಅನುಮಾನ




ಯಾವುದೇ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಕೆಚ್ಚೆದೆಯೊಂದಿಗೆ ಹುಚ್ಚು ಮನಸ್ಸು ಬೇಕು. ತೀವ್ರ ಆಸಕ್ತಿ ಇದ್ದರೆ ಮಾತ್ರ ತಾವು ಹಿಡಿದ ಕೆಲಸದಲ್ಲಿ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ. ವಿ.ಎಚ್.ವೀರಣ್ಣ ಮಂಠಾಳಕರ್ ಅವರು ಸಾಹಿತ್ಯ ರಚನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಹೈದ್ರಾಬಾದ ಕರ್ನಾಟಕ ಭಾಗದ ಪ್ರತಿಭಾವಂತ ಯುವ ಬರಹಗಾರರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. “ನಿನ್ನ (ವಾ)ರಗೆಯವರು ಹಣ ಗಳಿಸಿ ಮನಸ್ಯಾ ಆಗ್ಯಾರ, ನೀನು ಮಾತ್ರ ಉಪಯೋಗಕ್ಕೆ ಬಾರದ ಬರೆಯುವ ಹುಚ್ಚು ಹತ್ತಿಸಿಕೊಂಡಿದ್ದೀಯಾಎಂದು ತಮ್ಮ ಬಗ್ಗೆ ಕೆಲವರು ಆಡಿದ ಕಟು ಮಾತುಗಳನ್ನು ಲೆಕ್ಕಿಸದೆ ಲೆಕ್ಕಣಿಕೆಗೆ ಕೆಲಸ ಕೊಡುತ್ತಲೇ ಬಂದಿದ್ದಾರೆ. ಬರೆಯುವುದರಲ್ಲಿಯೇ ಸಂತೃಪ್ತಿ ಕಂಡಿದ್ದಾರೆ.
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಇವರ ಸ್ವಗ್ರಾಮ. ವೈಜಿನಾಥ ಹುವಪ್ನೋರ್ ಮತ್ತು ಶರಣಮ್ಮ ಅವರ ಎರಡನೆಯ ಮಗನಾಗಿ ಹುಟ್ಟಿದ ಇವರ ವಯಸ್ಸು ಈಗ 33 ವರ್ಷ. ಹೈಸ್ಕೂಲ್ವರೆಗೆ ಸ್ವಗ್ರಾಮದಲ್ಲಿಯೇ ಓದಿದ್ದಾರೆ. ಪದವಿ ಶಿಕ್ಷಣ ಬೀದರನಲ್ಲಿ ಪಡೆದುಕೊಂಡಿದ್ದಾರೆ. ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದ ಕಾರಣ ಶಾಲೆ ಕಲಿಯುವಾಗ ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ. ತಾವು ಅನುಭವಿಸಿದ ಕಷ್ಟ, ಸಹಿಸಿದ ಅನ್ಯಾವನ್ನು ಕಥೆ, ಕವನದ ವಸ್ತುವನ್ನಾಗಿಸಿ ವಿದ್ಯಾರ್ಥಿ ದೆಸೆಯಿಂದಲೇ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ಭಾವಾಂತರಂಗ’ ‘ಹನಿಜೇನು’ ‘ಸುಳಿಗಳುಇವರ ಪ್ರಕಟಿತ ಕವನ ಸಂಕಲನಗಳಾಗಿವೆ. ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಮಾಡಿ ಮೊದಲು ಮಿನಿಕವಿತೆಗಳ ಸಂಕಲನ ಪ್ರಕಟಿಸಿದಾಗ, ಮುಂದೆ ಮತ್ತೆ ಇಂಥ ಕಾರ್ಯಕ್ಕೆ ಇವರು ಕೈ ಹಾಕುವುದಿಲ್ಲ ಎಂದೇ ಅನಿಸಿತ್ತು. ಆದರೆ ಅಲ್ಲಿ ಇಲ್ಲಿ ಅಲೆದಾಡಿ ಸಿಕ್ಕಂತಹ ಕೆಲಸ ಮಾಡುತ್ತ ದೊರೆತ ಹಣದಲ್ಲಿ ಅಲ್ಪಸ್ವಲ್ಪ ಉಳಿತಾಯ ಮಾಡಿ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಇವರ ಕವಿತೆಗಳು ಮತ್ತು ಲೇಖನಗಳು ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ, ವಾರ ಪತ್ರಿಕೆ ಮತ್ತು ಮಾಸ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ. ಹಲವಾರು ಕಥೆಗಳನ್ನು ಸಹ ಬರೆದಿದ್ದಾರೆ. ‘ಬದುಕಿನ ಬೆನ್ನೇರಿಎಂಬ ಕಥೆ ಆಕಾಶವಾಣಿ ಗುಲ್ಬರ್ಗಾದಿಂದ ಪ್ರಸಾರ ಹಾಗೂ ಮರು ಪ್ರಸಾರಗೊಂಡಿದೆ.
ಸಂಕಲ್ಪಎಂಬ ಸಾಹಿತ್ಯಕ್ಕೆ ಸಂಬಂಧಿಸಿದ ಮಾಸ ಪತ್ರಿಕೆಯನ್ನು ಸಹ ಕೆಲಕಾಲ ನಡೆಸಿದ್ದಾರೆ. ಈಗಲೂ ಸಾಹಿತ್ಯ ಉಳ್ಳವರ ಸೊತ್ತು ಆಗಿರುವುದರಿಂದ ಅನೇಕ ಬರಹಗಾರರು ನಿರ್ಲಕ್ಷಕ್ಕೊಳಗಾಗಿದ್ದಾರೆ. ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ತಾಲ್ಲೂಕು ಉದಯೋನ್ಮುಖ ಯುವ ಬರಹಗಾರರ ಬಳಗದ ಮತ್ತು ಜಿಲ್ಲಾ ಬರಹಗಾರರ ಮತ್ತು ಕಲಾವಿದರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಬರಹಗಾರರನ್ನು ಸಂಘಟಿಸಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.
ವಿವಿಧೆಡೆ ನಡೆದ ಕಥಾ ಕಮ್ಮಟ ಮತ್ತು ಕಾವ್ಯ ಕಮ್ಮಟಗಳಲ್ಲಿ ಹಾಗೂ ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ. ಮೊದಲನೆಯ ಮಿನಿಕವಿತೆಗಳ ಸಂಕಲನಭಾವಾಂತರಂಗದಲ್ಲಿ ಅಪ್ಪಟ ಪ್ರೇಮಿಯಂತೆ ಭಾಸವಾಗುತ್ತಾರೆ. ಆದರೆಗಾಂಧಿ ಆಗ್ಬೇಕಂದುಕೊಂಡಾಗಕವನ ಸಂಕಲನದಲ್ಲಿ ಪ್ರೇಮಿಯ ಜೊತೆಗೆ ವಿರಹಿಯಾಗಿಯೂ ಕಾಣಿಸುತ್ತಾರೆ. ‘ಗಾಂಧಿ ಆಗ್ಬೇಕಂದುಕೊಂಡಾಗಸಂಕಲನಕ್ಕೆ ಸಂಬಂಧಿಸಿದ ದಟ್ಟ ಅನುಭವವನ್ನು ಕಟ್ಟಿ ಕೊಡುವ ಹಾಗೂ ನೈತಿಕ ಎಚ್ಚರ ಮೂಡಿಸುವ ಕವಿತೆಗಳನ್ನು ಸಹ ಸಂಕಲನ ಒಳಗೊಂಡಿದೆ. ಪರಿಪಕ್ವಗೊಂಡ ಅನುಭವದ ಮೂಸೆಯಿಂದ ಕೃತಿ ಮೂಡಿ ಬಂದಿದೆ.

ದಿ: 7-7-2009                         -ಮಾಣಿಕ ಭುರೆ, ಪತ್ರಕರ್ತರು,ಬಸವಕಲ್ಯಾಣ